Gadaga: ಟೊಮಾಟೋ ಬೆಳೆದು ಬಂಪರ್‌ ಲಾಭ ತೆಗೆದ ಬಿಂಕದಕಟ್ಟಿ ರೈತ


Team Udayavani, Aug 8, 2023, 6:43 PM IST

Gadaga: ಟೊಮಾಟೋ ಬೆಳೆದು ಬಂಪರ್‌ ಲಾಭ ತೆಗೆದ ಬಿಂಕದಕಟ್ಟಿ ರೈತ

ಗದಗ: ಕಳೆದ 27 ವರ್ಷಗಳ ನಿರಂತರ ಶ್ರಮಕ್ಕೆ ಭೂಮಿ ತಾಯಿ ಒಲಿದಿದ್ದು, ಟೊಮ್ಯಾಟೋ ಬೆಳೆದ ಜಿಲ್ಲೆಯ ರೈತರೊಬ್ಬರು ಕಳೆದ 20 ದಿನಗಳಲ್ಲೇ 8 ಲಕ್ಷ ರೂ. ನಿವ್ವಳ ಲಾಭ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

20 ದಿನಗಳ ಹಿಂದೆ ಟೊಮ್ಯಾಟೋ ಕಟಾವು ಆರಂಭಿಸಿರುವ ಬಿಂಕದಕಟ್ಟಿ ಗ್ರಾಮದ ರೈತ ಬಸನಗೌಡ ತಿಮ್ಮನಗೌಡ್ರ ಅವರಯ ದಿನಂಪ್ರತಿ 40ರಿಂದ 50 ಕ್ರೇಟ್‌ ಟೊಮಾಟೋ ಉತ್ಪಾದನೆ ಮಾಡುತ್ತಿದ್ದು, ಪ್ರತಿ ಕ್ರೇಟ್‌ ಟೊಮಾಟೋಗೆ 1,700-1,800 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 68,000-72,000 ರೂ. ಸಂಪಾದನೆ ತೆಗೆಯುತ್ತಿದ್ದಾರೆ.

ತಾವು ಬೆಳೆದ ಟೊಮ್ಯಾಟೋ ಬೆಳೆಯನ್ನು ಎಪಿಎಂಸಿಯಲ್ಲಿ ಮಧ್ಯವರ್ತಿಗಳ, ದಲಾಲರ ಹಾಗೂ ಹಮಾಲರ ನೆರವಿಲ್ಲದೇ ನೇರವಾಗಿ ಮಾರಾಟ ಮಾಡುತ್ತ ಬಂದಿರುವ ರೈತ ತಿಮ್ಮನಗೌಡ್ರ ಅವರು ಕಮಿಶನ್‌ನಲ್ಲೂ ಲಾಭಾಂಶ ಪಡೆಯುವ ಮೂಲಕ ಬಂಪರ್‌ ಬೆಳೆಗೆ ಬಂಪರ್‌ ಬೆಲೆ ಪಡೆಯುತ್ತ ಸಾಗಿದ್ದಾರೆ.

ಮೂಲತಃ ಸಣ್ಣ ರೈತ ಕುಟುಂಬದಿಂದ ಬಂದಿರುವ ಬಸನಗೌಡ ತಿಮ್ಮನಗೌಡ್ರ ಅವರು 1996ರಿಂದ ತಮ್ಮ 2 ಎಕರೆ ಪ್ರದೇಶದಲ್ಲಿ
ನಿರಂತರವಾಗಿ ಟೊಮಾಟೋ ಬೆಳೆಯುತ್ತಲೇ ಬಂದಿದ್ದಾರೆ. ಆರಂಭದಲ್ಲಿ ಟ್ಯಾಂಕರ್‌ ಮೂಲಕ ನೀರು ಹರಿಸಿ, ನಂತರ ಬೋರ್‌ವೆಲ್‌ ಹಾಕಿಸಿ ನೀರು ಹರಿಸಿದ್ದಾರೆ. ಆರಂಭದಲ್ಲಿ ಟೊಮ್ಯಾಟೋಗೆ ಉತ್ತಮ ಲಾಭ ಪಡೆದಿದ್ದ ಅವರು ಕಳೆದ ಐದಾರು ವರ್ಷಗಳಿಂದ ಟೊಮಾಟೋ ಬೆಳೆಗೆ ಹೆಚ್ಚಿನ ದರ ಇರದ ಕಾರಣ ನಷ್ಟ ಅನುಭವಿಸಿದ್ದರು.

ಪ್ರಸ್ತುತ 1.5 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆದ ರೈತ ತಿಮ್ಮನಗೌಡ್ರ ಅವರು ಕೂಲಿ ಆಳುಗಳ ನೆರವಿಲ್ಲದೇ ತಮ್ಮ ಇಬ್ಬರು ಮಕ್ಕಳೊಂದಿಗೆ ನಾಟಿ, ಬದು ನಿರ್ಮಾಣ ಸೇರಿ ದಾರ ಕಟ್ಟುವುದು, ಕಳೆ ತೆಗೆಯುವ ಕೆಲಸ ಮಾಡಿದ್ದಾರೆ. ಕಟಾವಿನ ಸಂದರ್ಭದಲ್ಲಿ ಮಾತ್ರ ಕೂಲಿ ಆಳುಗಳ ನೆರವು ಪಡೆಯುತ್ತಿದ್ದಾರೆ. ಅಂದಾಜು 1 ಲಕ್ಷ ರೂ. ಖರ್ಚು ಮಾಡಿ ಬೆಳೆದ ಟೊಮ್ಯಾಟೋ ಬೆಳೆ ರಕ್ಷಣೆಗೆ ಸಿಸಿ ಕ್ಯಾಮೆರಾ ಅಳವಡಿಸಿರುವ ರೈತ ಬಸನಗೌಡ ತಿಮ್ಮನಗೌಡ್ರ ಅವರು ಇನ್ನು 8ರಿಂದ 10 ಲಕ್ಷ ರೂ. ಆದಾಯದ
ನಿರೀಕ್ಷೆಯಲ್ಲಿದ್ದಾರೆ.

ನನ್ನ 50 ವರ್ಷದ ಕೃಷಿ ಕಾಯಕದಲ್ಲಿ ಟೊಮ್ಯಾಟೋ ಬೆಳೆಗೆ ಇಷ್ಟೊಂದು ಬೆಲೆ ಬಂದಿರಲಿಲ್ಲ. ನಂಬಿದ ಬೆಳೆ ಕೊನೆಗೂ ಕೈ ಹಿಡಿದಿದ್ದು, ಟೊಮಾಟೋ ನನ್ನ ಅದೃಷ್ಟವನ್ನು ಬದಲಾಯಿಸಿದೆ.
ಬಸನಗೌಡ ತಿಮ್ಮಗೌಡ್ರ,
ಟೊಮ್ಯಾಟೋ ಬೆಳೆದ ರೈತ

*ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.