ಹೈಟೆಕ್ ಬಸ್ ಶೆಲ್ಟರ್ಗಿಲ್ಲ ಉದ್ಘಾಟನೆ ಭಾಗ್ಯ
ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾದ ಕೋಟಿ ರೂ. ವೆಚದ ಅಮೃತ ಯೋಜನೆ ತಂಗುದಾಣಗಳು
Team Udayavani, Nov 24, 2022, 5:05 PM IST
ಗದಗ: ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸುಸಜ್ಜಿತ ಹೈಟೆಕ್ ಬಸ್ ಶೆಲ್ಟರ್ಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ, ಇದುವರೆಗೆ ಉದ್ಘಾಟನೆ ಭಾಗ್ಯವಿಲ್ಲದ ಕಾರಣ ಬಸ್ ಶೆಲ್ಟರ್ ಇದ್ದೂ ಇಲ್ಲದಂತಾಗಿವೆ.
ಹೌದು, ಅಮೃತ ಯೋಜನೆಯಡಿ ಅವಳಿ ನಗರದಲ್ಲಿ ಕಳೆದ ವರ್ಷ 1 ಕೋಟಿ ವೆಚ್ಚದಲ್ಲಿ 9 ನೂತನ ಹೈಟೆಕ್ ಬಸ್ ಶೆಲ್ಟರ್ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಉದ್ಘಾಟನೆ ಹಾಗೂ ಸರಿಯಾಗಿ ನಿರ್ವಹಣೆ ಇರದ ಕಾರಣ ಬಸ್ ಶೆಲ್ಟರ್ಗಳು ಜಾನುವಾರಗಳ ತಾಣವಾಗಿ ಮಾರ್ಪಟ್ಟಿದ್ದಲ್ಲದೇ, ಕುಡಕರ ವಿಶ್ರಾಂತಿ ಸ್ಥಳವಾಗಿದೆ. ಅಷ್ಟೇ ಅಲ್ಲದೆ, ಗುಟ್ಕಾ, ತಂಬಾಕು ಹಾಕಿಕೊಂಡು ಜನರು ಎಲ್ಲೆಂದರಲ್ಲಿ ಉಗುಳಿದ್ದರಿಂದ ಶೆಲ್ಟರ್ ಗಲೀಜಾಗಿದ್ದು, ದುರ್ವಾಸನೆ ಬೀರುತ್ತಿದೆ.
ಅಂದ ಕಳೆದುಕೊಂಡ ಬಸ್ ಶೆಲ್ಟರ್: ನಗರದಲ್ಲಿ ನಿರ್ಮಾಣ ವಾದ ಹೈಟೆಕ್ ಬಸ್ ನಿಲ್ದಾಣದಲ್ಲಿ ಸಂಪೂರ್ಣ ಆಧುನಿಕ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮೂರು ಫೋಟೋ ಹಾಕಲಾಗಿದೆ. ಮೊದಲ ಫೋಟೋ ದಲ್ಲಿ ಕವಿಯ ಪರಿಚಯ, ಅವರ ಜನನ, ಕಾವ್ಯನಾಮ ಸೇರಿದಂತೆ ಹಲವಾರು ಮಾಹಿತಿ, ಎರಡನೇ ಫೋಟೋ ದಲ್ಲಿ ಸ್ವತ್ಛತೆ ಕುರಿತು ಮಾಹಿತಿ ನೀಡಲಾಗಿದೆ. ಮೂರನೇ ಫೋಟೋದಲ್ಲಿ ಗದಗ ಜಿಲ್ಲೆಗೆ ಸಂಬಂಧಿ ಸಿದ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಮಾಹಿತಿ ಪಡೆಯಲು ಉಪಯುಕ್ತವಾಗಿದೆ. ಇಂತಹ ಬಸ್ ನಿಲ್ದಾಣದಲ್ಲಿರುವ ಚಿತ್ರಗಳು ಹಾಗೂ ಮಾಹಿತಿ ಅಳಿಸಿ ಹೋಗಿದ್ದು, ಉದ್ಘಾಟನೆಗೂ ಮುನ್ನವೇ ತನ್ನ ಅಂದವನ್ನು ಕಳೆದುಕೊಂಡಿದೆ.
9 ಹೈಟೆಕ್ ಬಸ್ ಶೆಲ್ಟರ್: ಗದಗ-ಬೆಟಗೇರಿ ಅವಳಿ ನಗರದ ಗಂಗಿಮಡಿ, ಎಸ್.ಎಂ. ಕೃಷ್ಣ ನಗರ, ಹಾಕಿ ಗ್ರೌಂಡ್, ಮಹಾತ್ಮ ಗಾಂಧಿ ಸರ್ಕಲ್, ಬನ್ನಿಕಟ್ಟಿ, ಜಿಲ್ಲಾಡಳಿತ ಭವನ, ಮುಳಗುಂದ ನಾಕಾದ ಒಳಚರಂಡಿ ಮಂಡಳಿ ಹತ್ತಿರ, ಜಿಲ್ಲಾ ಆಸ್ಪತ್ರೆ, ಕುಷ್ಟಗಿ ಚಾಳ ಸೇರಿದಂತೆ ಒಟ್ಟು 9 ಬಸ್ ಶೆಲ್ಟರ್ಗಳನ್ನು ನಿರ್ಮಾಣ ಮಾಡಲಾಗಿದೆ. ಸಂಪೂರ್ಣ ಕೆಲಸ ಮುಗಿದು ಒಂದು ವರ್ಷ ಕಳೆದರೂ ಸಾರ್ವಜನಿಕ ಅನೂಕುಲಕ್ಕೆ ಬಾರದಂತಾಗಿದೆ.
ಕೋಟಿ ರೂ. ವೆಚ್ಚ: ಅಮೃತ ಯೋಜನೆಯಡಿ ಅವಳಿ ನಗರದಲ್ಲಿ ಒಂದು ಬಸ್ ಶೆಲ್ಟರ್ಗೆ 12 ಲಕ್ಷ ರೂ.ನಂತೆ ಒಟ್ಟು 9 ಸಿಟಿ ಬಸ್ ನಿಲ್ದಾಣಕ್ಕೆ 1 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ವರ್ಷ ಅವಳಿ ನಗರದಲ್ಲಿ ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪಾಳುಬಿದ್ದ ಶೆಲ್ಟರ್ಗಳಾಗಿವೆ.
ರಸ್ತೆ ಬದಿಯೇ ಬಸ್ ನಿಲ್ದಾಣ: ಸಾರ್ವಜನಿಕರ ಅನೂಕುಲಕ್ಕಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಿದರು ಸಹ ಜಿಲ್ಲೆಯ ಜನರು ಕೇಂದ್ರ ಬಸ್ ನಿಲ್ದಾಣ ಬಿಟ್ಟರೆ ಉಳಿದ ಕಡೆ ರಸ್ತೆ ಬದಿಯೇ ಬಸ್ ಇಳಿಯಬೇಕು. ಜನತೆಗೆ ಬೀದಿ ಪಕ್ಕದ ಜಾಗವೇ ನಗರ ಸಾರಿಗೆ ಬಸ್ ನಿಲ್ದಾಣ ಆಗಿ ಬಿಟ್ಟಿದೆ. ಸುಸಜ್ಜಿತ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆ ಮಾಡುವ ಮೂಲಕ ಜನತೆ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಹೆಚ್ಚು ಅನುಕೂಲ ಕಲ್ಪಿಸಲಾಗಿದೆ.
ಗದಗ-ಬೆಟಗೇರಿ ವ್ಯಾಪ್ತಿಯಲ್ಲಿರುವ ಬಸ್ ಶೆಲ್ಟರ್ಗಳು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿರುವ ಮಾಹಿತಿ ತಿಳಿದಿದ್ದು, ಕೂಡಲೇ ಬಸ್ ಶೆಲ್ಟರ್ಗಳಿಗೆ ಕಾಯಕಲ್ಪ ಕಲ್ಪಿಸಿ ಸಾರ್ವಜನಕರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಉಷಾ ದಾಸರ, ಅಧ್ಯಕ್ಷರು, ನಗರಸಭೆ
ಗದಗ-ಬೆಟಗೇರಿ ಭಾಗದಲ್ಲಿ ನಿರ್ಮಾಣ ಮಾಡಿರುವ ಬಸ್ ಶೆಲ್ಟರ್ಗಳನ್ನು ಕೂಡಲೇ ಉದ್ಘಾಟನೆ ಮಾಡಬೇಕು. ಸಾರ್ವಜನಿಕರಿಗೆ ಅನೂಕುಲ ಕಲ್ಪಿಸಬೇಕು. ಅವುಗಳ ನಿರ್ವಹಣೆಯನ್ನು ನಗರಸಭೆಯಿಂದ ಮಾಡಬೇಕು. ಬಸ್ ಶೆಲ್ಟರ್ಗಳು ಅವಳಿ ನಗರ ಹಾಗೂ ಗ್ರಾಮೀಣ ಭಾಗದ ಜನತೆಗೆ ಬಹಳ ಅನುಕೂಲವಾಗಿದೆ. –ಫಯಾಜ್ ಮಕಾಂದಾರ, ಸ್ಥಳೀಯ ನಿವಾಸಿ
-ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ