ಜಮ್ಮು ಕಾಶ್ಮೀರ ನೆನಪಿಸಿದ ಆಲಿ ಕಲ್ಲಿನ ರಾಶಿ
Team Udayavani, Feb 20, 2021, 1:17 PM IST
ಅರಕಲಗೂಡು: ತಾಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆ ಜಮ್ಮು- ಕಾಶ್ಮೀರದ ಹಿಮದ ರಾಶಿಯನ್ನು ನೆನಪಿಗೆ ತರಿಸಿತು. ಮೊದಲಿಗೆ ಹನಿಯೊಂದಿಗೆ ಆರಂಭವಾದ ಮಳೆ ಜೊತೆಗೆ ಹಿಡಿ ಗಾತ್ರದ ಆಲಿಕಲ್ಲುಗಳು ಮನೆ, ರಸ್ತೆ, ಜಮೀನಿನಲ್ಲಿ ಒಂದೇ ಸಮನೇ ಸುರಿಯಲಾರಂಭಿಸಿದವು.
ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೂ ತೊಂದರೆ ಆಯಿತು. ದಟ್ಟವಾಗಿ ಸುರಿದ ಆಲಿಕಲ್ಲಿನ ರಾಶಿಯನ್ನು ಕಂಡ ತಾಲೂಕಿನ ದೊಡ್ಡಮಗ್ಗೆ, ಮಲ್ಲಿಪಟ್ಟಣ ಹೋಬಳಿಯ ಜನರು ಈ ಪ್ರಮಾಣದಲ್ಲಿ ಆಲಿ ಕಲ್ಲು ಬಿದ್ದಿದ್ದನ್ನು ತಾವು ಈ ಹಿಂದೆ ನೋಡಿಯೇ ಇಲ್ಲ ಎಂದು ಅಚ್ಚರಿಯಿಂದ ಮಾತನಾಡಿಕೊಳ್ಳುತ್ತಿದ್ದರು.
ರಸ್ತೆ ತುಂಬ ಆಲಿಕಲ್ಲು: ಮಳೆ ನಿಂತ ನಂತರವೂ ಆಲಿ ಕಲ್ಲು ರಸ್ತೆ, ಮನೆಯ ಅಂಗಳ, ಜಮೀನಿನಲ್ಲಿ ಹಾಗೆಯೇ ಇತ್ತು. ಎಲ್ಲೆಡೆ ಬೀಳಿಯ ಬಟ್ಟೆಯನ್ನು ಹಾಸಿದಂತೆ ಕಂಡು ಬರುತ್ತಿತ್ತು. ಎಲ್ಲಿ ನೋಡಿದರೂ ಆಲಿ ಕಲ್ಲಿನ ರಾಶಿಯೇ ಕಾಣಸಿಗುತ್ತಿತ್ತು. ಇಂತಹ ಅಪರೂಪದ ಸನ್ನಿವೇಶವನ್ನು ಕಣ್ಣು ತುಂಬಿಕೊಂಡ ಜನರು.
ಬೆಳೆಗೆ ಹಾನಿ: ತಡವಾಗಿ ಬಿತ್ತನೆ ಮಾಡಿದ್ದ ಬೆಳೆಗೆ ಈ ಆಲಿ ಕಲ್ಲು ಮಳೆ ಭಾರೀ ನಷ್ಟವನ್ನೇ ತಂದೊಡ್ಡಿದೆ. ಕೊಯ್ಲು ಮಾಡದೇ ಇರುವ ಮೆಣಸಿನ ಕಾಯಿ, ಎಲೆ ಕೋಸು, ತರಕಾರಿ, ಕಾಫಿ, ಏಲಕ್ಕಿ, ಇತರೆ ಬೆಳೆಗೆ ಈ ಆಲಿ ಕಲ್ಲು ಪೆಟ್ಟು ನೀಡಿದೆ. ಅಲ್ಲದೆ, ಜಮೀನಿನಲ್ಲಿ ದಟ್ಟವಾಗಿ ತಾಲೂಕಿನ ದೊಡ್ಡಮಗ್ಗೆ, ಕಸಬಾ, ಮಲ್ಲಿಪಟ್ಟಣ ಹೋಬಳಿಗಳಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಅಕಾಲಿಕ ಮಳೆ ಬಿದ್ದಿದ್ದು, ಮಳೆಯ ಹನಿಗಿಂತ ಆಲಿಕಲ್ಲು ರಾಶಿಗಳೇ ಅಧಿಕವಾಗಿತ್ತು. ಇದರಿಂದ ರೈತರು ಆತಂಕ ಪಡಬೇಕಾದಂತಹ ಪರಿಸ್ಥಿತಿ ತಲೆದೂರಿದೆ.
ದೊಡ್ಡಮಗ್ಗೆ ಹೋಬಳಿ ಬರಗೂರು, ಸೋಮನಹಳ್ಳಿ, ಸಂತೆಮರೂರು, ಮರಿತಮ್ಮನಹಳ್ಳಿ, ಅಂಕನಹಳ್ಳಿ ಗ್ರಾಮಗಳಲ್ಲಿ ಆಲಿಕಲ್ಲು ಸುರಿದು ಕೆಲ ಗಂಟೆಗಳ ಕಾಲ ರಸ್ತೆ ಹಾಗೂ ಮನೆಯ ಆವರಣಗಳು ಆಲಿಕಲ್ಲು ಗಳಿಂದ ಆವೃತಗೊಂಡವು. ರಾಮನಾಥಪುರ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿದ್ದ ಆನೆಕಲ್ಲನ್ನು ವಾಹನ ನಿಲ್ಲಿಸಿ ಪ್ರಯಾಣಿಕರು ತುಂಬಿಕೊಳ್ಳುವುದರ ಜೊತೆಯಲ್ಲಿ ತಿನ್ನಲು ಮುಂದಾಗಿದ್ದು ಸಹಜವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…