ಜಮೀನು ಖಾತೆ ವಿಚಾರ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ
Team Udayavani, Aug 18, 2021, 3:21 PM IST
ಸಕಲೇಶಪುರ: ಜಮೀನು ಖಾತೆ ವಿಚಾರವಾಗಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಗ್ರಾಮಲೆಕ್ಕಿಗ ಬಿದ್ದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಹರಿಪ್ರಸಾದ್ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ನಾಡಕಚೇರಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಚಿಹ್ನೆ ಮೇಲೆ ಚುನಾವಣೆ ಸ್ಪರ್ಧೆಗೆ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಮೂಡದ ಒಮ್ಮತ
ಜಮೀನು ವಿಚಾರ ಸಂಬಂಧ ಖಾತೆ ಬದಲಾವಣೆ ಮಾಡಿಕೊಡುವಂತೆ ಹೇರೂರು ಗ್ರಾಮದ ದರ್ಶನ್ ಎಂಬುವರು ನಾಡಕಚೇರಿಗೆ ಹೋದಾಗ ಹರಿಪ್ರಸಾದ್ ಎಂಬವರು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಮೊದಲ ಕಂತಿನಲ್ಲಿಯೇ 20 ಸಾವಿರ ರೂ. ಗಳನ್ನು ಲಂಚ ರೂಪದಲ್ಲಿ ಪಡೆಯುವ ವೇಳೆ ಎಸ್ಪಿ ಅರುಣಾಶುಗಿರಿ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳಾದ ಡಿವೈಎಸ್ಪಿ ಕೃಷ್ಣಮೂರ್ತಿ, ಇನ್ಸ್ ಪೆಕ್ಟರ್ ಶಿಲ್ಪಾ ಹಾಗೂ ವೀಣಾ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.