ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭಟನೆ
Team Udayavani, Apr 16, 2021, 6:50 PM IST
ಹಾಸನ: ನಗರದ ಸರ್ಕಾರಿ ನರ್ಸಿಂಗ್ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬನ ಪರೀಕ್ಷಾ ಪತ್ರಿಕೆ ಸ್ಕ್ಯಾನ್ ಮಾಡುವ ಸಂದರ್ಭದಲ್ಲಿಉತ್ತರ ಪತ್ರಿಕೆಯ ಬರಹವನ್ನು ಹೊಡೆದುಹಾಕಿರುವ ಪ್ರಾಂಶುಪಾಲರ ವಿರುದ್ಧಕಾನೂನು ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿ ತರಗತಿ ಭಹಿಷ್ಕರಿಸಿದ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಕಾಲೇಜುಮುಂದೆ ಪ್ರತಿಭಟನೆ ನಡೆಸಿದರು.
ತೃತೀಯ ವರ್ಷದ ನರ್ಸಿಂಗ್ವಿದ್ಯಾರ್ಥಿ ಚನ್ನಯ್ಯ ಹಿರೇಮಠ ಅವರಉತ್ತರ ಪತ್ರಿಕೆಯನ್ನು ದುರುದ್ದೇಶಪೂರ್ವಕವಾಗಿ ಹೊಡೆದು ಹಾಕುವ ಮೂಲಕವಿದ್ಯಾರ್ಥಿ ಅನುತ್ತೀರ್ಣಕ್ಕೆ ಕಾರಣರಾಗಿರುವ ಕಾಲೇಜು ಪ್ರಾಂಶುಪಾಲ ರನ್ನುಬಂಧಿಸಿ ಹಾಗೂ ಫಲಿತಾಂಶದಲ್ಲಿವಂಚಿತರಾಗಿರುವ ವಿದ್ಯಾರ್ಥಿ ಚನ್ನಯ್ಯಅವರಿಗೆ ನ್ಯಾಯ ಒದಗಿಸಬೇಕೆಂದುಒತ್ತಾಯಿಸಿದರು.ಪ್ರಾಂಶುಪಾಲರ ವಿರುದ್ಧ ಪೊಲೀಸ್ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಪ್ರಾಂಶುಪಾಲರನ್ನು ಪೊಲೀಸರುಬಂಧಿಸಲು ಹಿಂದೇಟು ಹಾಕುತ್ತಿದ್ದಾರೆಎಂದು ದೂರಿದ ಪ್ರತಿಭಟನಾಕಾರರು,ನ್ಯಾಯ ಸಿಗುವವರೆಗೂ ನಮ್ಮ ಹೋರಾಟಮುಂದುವರಿಯಲಿದೆ ಎಂದು ಹೇಳಿದರು. ಎಬಿವಿಪಿ ಮುಖಂಡ ಬೊಮ್ಮಣ್ಣ,ಐಶ್ವರ್ಯ, ಅಭಿಷೇಕ್, ಬಿಪಿನ್,ಮಂಜುನಾಥ್, ನಿತಾ, ಅಮೂಲ್,ಪ್ರಣವ್ ಭಾರಧ್ವಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ