ರೈಲ್ವೆ ಖಾಸಗೀಕರಣದಿಂದ ಆದಾಯ ಕುಸಿತ
Team Udayavani, Jan 22, 2021, 3:26 PM IST
ರಾಣಿಬೆನ್ನೂರು: ರೈಲ್ವೆ ಖಾಸಗೀಕರಣದಿಂದ ಆದಾಯ ಕುಸಿತವಾಗುವುದರ ಜೊತೆಗೆ ಗುಣಮಟ್ಟದ ಮೇಲೆ ಅಡ್ಡ ಪರಿಣಾಮ ಉಂಟಾಗಲಿದೆ. ಸಾರ್ವಜನಿಕರಿಗೆ ಟಿಕೆಟ್ ಸೇರಿದಂತೆ ಇನ್ನಿತರ ಸೌಲಭ್ಯಗಳಲ್ಲಿ ದರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ಕಾರ್ಯದರ್ಶಿ ವಿಜಯಕುಮಾರ ಹೇಳಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಏರ್ಪಡಿಸಲಾಗಿದ್ದ ರೈಲ್ವೆ ಖಾಸಗೀ ಕರಣದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಪ್ರಯಾಣಿಕರ ಸುರಕ್ಷತೆ ಯನ್ನು ಪರಿಗಣಿಸದೇ ದೇಶದ ಭವಿಷ್ಯಕ್ಕೆ ಮಾರಕವಾದ ಖಾಸಗೀಕರಣ ಮಾಡಲು ಹೊರಟಿದೆ.
ಖಾಸಗಿಕರಣದಿಂದ ರೈಲ್ವೆ ಉದ್ಯೋಗಿಗಳು ಕೆಲಸ ಕಳೆದು ಕೊಳ್ಳಬೇಕಾಗುತ್ತದೆ. ಇದಲ್ಲದೇ, ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಸಿಗುವ ಮಾರ್ಗಗಳಲ್ಲಿ ರೈಲ್ವೆ ಸಂಚರಿಸುವಂತಾಗುತ್ತದೆ. ಪ್ರಯಾಣಿಕರ ಕುಂದು ಕೊರತೆಗಳಿಗೆ ಸ್ಪಂದನೆ ಇಲ್ಲವಾಗುತ್ತದೆ. ಆದ್ದರಿಂದ, ಕೇಂದ್ರ ಸರಕಾರ ರೇಲ್ವೆಯನ್ನು ಖಾಸಗಿಕರಣ ಮಾಡಲು ಅವಕಾಶ ನೀಡಬಾರದು. ಇದಕ್ಕೆ ರೈಲ್ವೆಯ ಸಮಸ್ತ ಉದ್ಯೋಗಿಗಳು ಬೆಂಬಲ ನೀಡಬೇಕು ಎಂದರು.
ಇದನ್ನೂ ಓದಿ:ರಾಷ್ಟ್ರದ ಆರ್ಥಿಕ ಪ್ರಗತಿಗೆ ಕೈಜೋಡಿಸಿ: ನಾಡಗೌಡ್ರ
ಮಾಲತೇಶ ಟಿ.ಸಿ. ಅಧ್ಯಕ್ಷತೆ ವಹಿಸಿದ್ದರು. ಬಸವರಾಜಕೆ.ಸಿ., ನಾಗರಾಜ ಹಾರೋಗೊಪ್ಪ, ರವಿ ಗೋಣೆಪ್ಪನವರ, ರಾಮಣ್ಣ ಲಮಾಣಿ, ಸಂತೋಷ ಯಾದವಾಡ, ಕೆ. ಮಂಜುನಾಥ, ಚಂದ್ರು ಲಮಾಣಿ, ಡೇವಿಡ್ಎನ್., ಸಂತೋಷ ಸಿದ್ಧನಕೋಟೆ ಮತ್ತಿತತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…