ಕಾಲೇಜು ಫೀಸ್ ಕಳೆದುಕೊಂಡ ಯುವತಿಗೆ ನೆರವಾದ ಆಟೋ ಚಾಲಕರು
Team Udayavani, Mar 20, 2022, 5:37 PM IST
ಸೇಡಂ : ಆಟೋದಲ್ಲಿ ಹಣ ಕಳೆದುಕೊಂಡ ಯುವತಿಗೆ ಆಟೋ ಚಾಲಕರೆಲ್ಲ ಸೇರಿ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ತೇಲ್ಕೂರ ಗ್ರಾಮದ ಯುವತಿ ನಿರ್ಮಲ ಎಂಬ ಪಟ್ಟಣದಲ್ಲಿ ಸಂಚರಿಸುವ ವೇಳೆ ಆಟೋ ಚಾರ್ಜ್ ನೀಡುವಾಗ ತನ್ನ ಪರ್ಸ್ ಮರೆತಿದ್ದಳು. ಈ ವೇಳೆ ಅಪರಿಚಿತರು ಪರ್ಸ್ ಎಗರಿಸಿದ್ದಾರೆ. ಕಾಲೇಜು ಫೀಸ್ ಕಟ್ಟಲು ತಂದಿದ್ದ 10 ಸಾವಿರ ನಗದು ಕಳೆದುಕೊಂಡ ಯುವತಿ ಕಣ್ಣೀರಾಕಿದ್ದಾಳೆ.
ಇದನ್ನು ಕಂಡ ಕೆಲ ಆಟೋ ಚಾಲಕರು ವಿಚಾರಿಸಲಾಗಿ, ಯುವತಿ ವಿಷಯ ತಿಳಿಸಿದ್ದಾರೆ. ಈ ವೇಳೆ ಆಟೋ ಚಾಲಕರು ಹಾಗೂ ಸ್ಥಳೀಯ ಯುವಕರು ಸೇರಿ 9 ಸಾವಿರ ರೂಪಾಯಿ ಜಮಾಯಿಸಿ ಕೊಟ್ಟಿದ್ದಾರೆ.
ಹಣ ಕಳೆದುಕೊಂಡು ಕಂಗಾಲಾಗಿದ್ದ ಬಡ ಯುವತಿಗೆ ನೆರವಾಗುವ ಮೂಲಕ ಯುವಕರು ಮಾನವೀಯತೆ ಮೆರೆದಿದ್ದಾರೆ. ಅವರ ಈ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.
ಜಗು ದೊಡ್ಡಮನಿ, ಶರತ ಬಂಗಿ, ನರೇಶ ಜಾಧವ, ಶಂಕರ ದಾದ, ಕುಶನ್ ನಾಟೀಕಾರ, ಸಿದ್ದು ಒಡೆಯರ್, ನಾಗರಾಜ, ಭೀಮಾಶಂಕರ ಕೊಳ್ಳಿ ನೆರವಾದವರು.
ಇದನ್ನೂ ಓದಿ :ಗಡಿಸೋಮನಾಳದಲ್ಲಿ ಶೇ. 60 ಅರ್ಜಿ ಸ್ಥಳದಲ್ಲೇ ಇತ್ಯರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ