“ಮಹಾಪ್ರಳಯ’ ದೃಶ್ಯ ಕವನ ಬಿಡುಗಡೆ
Team Udayavani, Jul 13, 2021, 4:18 PM IST
ಕಲಬುರಗಿ: ಖ್ಯಾತ ಆಥೋಪೆಡಿಕ್ಸ್ ಸರ್ಜನ್ ಡಾ.ಎಸ್.ಎಸ್.ಗುಬ್ಬಿ ವಿರಚಿತ “ಮಹಾಪ್ರಳಯ’ ದೃಶ್ಯಕವನ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗರದ ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ರೈತರಿಗೆ ಸಾಲ ವಿತರಣಾ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿದರು.
ಡಿಸಿಎಂ ಗೋವಿಂದ ಕಾರಜೋಳ, ಸಂಸದ ಉಮೇಶ ಜಾಧವ್, ಸಚಿವರಾದ ಬಿ.ಸೋಮಶೇಖರ, ಮುರುಗೇಶ ನಿರಾಣಿ, ಭೈರತಿ ಬಸವರಾಜ್ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರು ಮತ್ತು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮಡು ಸೇರಿದಂತೆ ಮೊದಲಾದ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿಯ ಗುಬ್ಬಿ ಪ್ರಕಾಶನದಿಂದ ಪ್ರಕಟಗೊಂಡ 64 ಪುಟಗಳ “ಮಹಾಪ್ರಳಯ’ ಕವನ ಸಂಕಲನದಲ್ಲಿ ನೆರಹಾವಳಿಯ ದೃಶ್ಯಕವನ ಆಕರ್ಷಕ ಬಣ್ಣದ ಚಿತ್ರಗಳೊಂದಿಗೆ ಓದುಗರ ಆಸಕ್ತಿ ತಣಿಸುತ್ತದೆ. ಮನುಷ್ಯನ ಮಿತಿಮೀರಿದ ಸ್ವಾರ್ಥ, ದುರಾಸೆ-ದುರಂಹಕಾರಕ್ಕೆ ಪ್ರತ್ಯುತ್ತರ ಎನ್ನುವಂತೆ ಮುನಿಸಿಕೊಂಡ ಪ್ರಕೃತಿಯ ಈ ಮಹಾಪ್ರಳಯವನ್ನು ತನ್ನದೆ ಆದ ವೈಶಿಷ್ಠ ಪೂರ್ಣ ಕಿರುಗವನಗಳಲ್ಲಿ ಹಿಡಿದಿಟ್ಟ ಡಾ.ಎಸ್. ಎಸ್.ಗುಬ್ಬ ಅವರ ಕಾವ್ಯಶೈಲಿ ಹಾಗೂ ಅತ್ಯಾಕರ್ಷಕ ಚಿತ್ರಗಳ ಜೋಡಣೆಯ ಕಲಾವಂತಿಕೆ ನಿಜಕ್ಕೂ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಕವಿ, ಲೇಖಕ, ಡಾ.ಎಸ್. ಎಸ್.ಗುಬ್ಬಿ ಅವರ “ಮಹಾಪ್ರಳಯ’ ದೃಶ್ಯಕವನವನ್ನು ಮೆಚ್ಚಿ ಡಾ.ಪಿ.ಎಸ್. ಶಂಕರ, ಟಿ.ವಿ.ಶಿವಾ ನಂದನ್, ಡಾ.ಸದಾನಂದ ಪೆರ್ಲ, ಡಾ.ಸ್ವಾಮಿರಾವ್ ಕುಲಕರ್ಣಿ, ಡಾ.ಶಶಿ ಶೇಖರ ರೆಡ್ಡಿ, ಎಸ್.ಎಸ್.ಹಿರೇಮಠ ಸೇರಿದಂತೆ ಮೊದಲಾದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ