ಅಂಬೇಡ್ಕರ್ ಜಯಂತಿ ಆಚರಣೆ
Team Udayavani, Apr 17, 2019, 6:30 AM IST
ಗೋಣಿಕೊಪ್ಪಲು : ಡಾ. ಬಿ.ಆರ್ ಅಂಬೇಡ್ಕರ್ರವರ 128ನೇ ಜನ್ಮ ದಿನವನ್ನು ತಾಲೂಕು ಪಂಚಾಯತ್ವತಿಯಿಂದ ಆಚರಿಸಲಾಯಿತು.
ಪೊನ್ನಂಪೇಟೆ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಜಯಣ್ಣ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ಅಂಬೇಡ್ಕರ್ ಆದರ್ಶಗಳನ್ನು ಯುವ ಸಮುದಾಯ ಅರಿತುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಜೀವನವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ಜಿ.ಪಂ ಕಾರ್ಯದರ್ಶಿ ಗುದೂರ್ ಭೀಮ್ ಸೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಕಚೇರಿಯ ಸಿಬಂದಿಗಳು ಉಪಸ್ಥಿತರಿದ್ದರು.