ರಸ್ತೆ ಅಪಘಾತ: ನಿವೃತ್ತ ಕಂದಾಯ ಅಧಿಕಾರಿ ಸಾವು
Team Udayavani, Jun 5, 2019, 6:10 AM IST
ಮಡಿಕೇರಿ: ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿಯ ತೊರೆನೂರು ಬಳಿ ಮಂಗಳವಾರ ಬೆಳಗ್ಗೆ ಲಾರಿ ಮತ್ತು ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಕಂದಾಯ ಇಲಾಖೆಯ ನಿವೃತ್ತ ಸಹಾಯಕ ಕಮಿಷನರ್ ಡಾ| ಕೆ.ಎ. ಅಪ್ಪಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಡಾ| ಅಪ್ಪಯ್ಯ (65) ಅವರು ಬೆಂಗಳೂರಿನಿಂದ ಕುಶಾಲನಗರ ಮೂಲಕ ತಮ್ಮ ಊರಿಗೆ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಪತ್ನಿ ಮೀನಾಕ್ಷಿ ಅವರಿಗೂ ತೀವ್ರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ.
ಅವರು ಪತ್ನಿ, ಇಬ್ಬರು ಪುತ್ರಿ ಯರನ್ನು ಅಗಲಿದ್ದಾರೆ.