ಜಾನುವಾರುಗಳ ಚಿಕಿತ್ಸೆಗೆ ರೈತರ ಪರದಾಟ
Team Udayavani, Mar 29, 2021, 2:53 PM IST
ಮಾಸ್ತಿ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಾಸ್ತಿ ಪಶು ವೈದ್ಯ ಆಸ್ಪತ್ರೆಯಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದ್ದು, ಇದರಿಂದ ಜಾನುವಾರುಗಳಿಗೆ ಸಮರ್ಪಕವಾದ ಚಿಕಿತ್ಸೆ ಸಿಗದ ಕಾರಣ ಗೋಪಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೆರೆಯ ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಾಸ್ತಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಪಶುಗಳಿಗೆ ಸಮರ್ಪಕವಾದ ಪಶು ವೈದ್ಯಕೀಯ ಸೇವೆಸಿಗುತ್ತಿಲ್ಲ. ಪಶು ಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆಯ ಮಾಸ್ತಿ ಪಶು ಆಸ್ಪತ್ರೆಯಲ್ಲಿವೈದ್ಯರು ಸೇರಿದಂತೆ 5 ಹುದ್ದೆಗಳ ಪೈಕಿ ಕೇವಲ ಡಿಗ್ರೂಫ್ ನೌಕರನೊಬ್ಬ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರು, ಜಾನುವಾರು ಅಧಿಕಾರಿ, ಪಶು ಸಹಾಯಕರು, ಡಿ.ಗ್ರೂಫ್ ನೌಕರ-1, 4 ಹುದ್ದೆ ಖಾಲಿ ಇದೆ. ಮಾಸ್ತಿ ಪಶು ಆಸ್ಪತ್ರೆಯಲ್ಲಿ ಈ ಹಿಂದೆಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ನಿರ್ದೇಶಕಶ್ರೀರಂಗ ರಾಜು 2019ನೇ ಜುಲೆ„ 16ರಂದು ಬೇರೆಕಡೆಗೆ ವರ್ಗಾವಣೆಯಾದರು. ಅಂದಿನಿಂದಇಂದಿನವರೆಗೂ ಡಿ.ಎನ್.ದೊಡ್ಡಿ ಪ್ರಾಥಮಿಕ ಪಶುಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ನಂದೀಶ್ಅವರು ಪ್ರಭಾರೆ ಯಾಗಿದ್ದು, ಎರಡೂ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಬ್ಬರೇ ಎಲ್ಲಾ ಕೆಲಸ ಮಾಡುವ ಅನಿವಾರ್ಯ:ವರ್ಷದಲ್ಲಿ 6 ತಿಂಗಳಿಗೊಮ್ಮೆ 2 ಬಾರಿ ಲಸಿಕೆ ಅಭಿಯಾನನಡೆಸುವುದು, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆಮಾಹಿತಿ ಒದಗಿಸುವುದು, ಆಕಸ್ಮಿಕವಾಗಿ ಕುರಿ, ಮೇಕೆ,ಜಾನುವಾರುಗಳು ಮೃತಪಟ್ಟರೆ ಮಹಜರ್ ನಡೆಸಿ,ವರದಿ ನೀಡುವುದು. ವಿಮೆ ದೃಢೀಕರಣ ವೈದ್ಯರೇಮಾಡಬೇಕಾಗಿದೆ. ಪಶು ಆಸ್ಪತ್ರೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಕಾಲುಬಾಯಿ ಜ್ವರ ಸೇರಿದಂತೆ ಇನ್ನಿತರೆ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸ ವಾಗಿ ಪರಿಣಮಿಸಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಜಾನುವಾರುಗಳ ಚಿಕಿತ್ಸೆಗಾಗಿ ಗೋಪಾಲಕರು ಅಲೆದಾಡುವಂತಹ ಪರಿಸ್ಥಿತಿ ಅನಿವಾರ್ಯವಾಗಿದೆ ಎಂದು ರೈತರಿಂದ ದೂರುಗಳು ಕೇಳಿ ಬರುತ್ತಿದೆ.
34 ಹಳ್ಳಿಗೆ ಒಳಪಡುವ ಪಶು ಆಸ್ಪತ್ರೆ: ಮಾಸ್ತಿ ಗ್ರಾಮದ ಪಶು ಆಸ್ಪತ್ರೆ ವ್ಯಾಪ್ತಿಗೆ 34 ಹಳ್ಳಿಗಳುಒಳಪಟ್ಟಿದ್ದು, 2020ರ ಜಾನುವಾರುಗಳ ಜನಗಣತಿಪ್ರಕಾರ ದನಗಳು-4508, ಎಮ್ಮೆ-92,ಕುರಿ-10,406, ಮೇಕೆ-2406, ಹಂದಿ- 193,ನಾಯಿ 802, ಕೋಳಿ-3429 ಮಾಸ್ತಿ ಪಶು ಆಸ್ಪತ್ರೆಯದಾಖಲೆಯಲ್ಲಿ ವರದಿಯಾಗಿದೆ.
ಮಾಸ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಿಂದ ಹಾಲು ಉತ್ಪಾದಕರಸಹಕಾರ ಸಂಘಕ್ಕೆ ಪ್ರತಿ ದಿನ ಸುಮಾರು 2800ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿಯೂ ರೈತರ ಜೀವನಕ್ಕೆ ಆಸರೆಯಾಗಿರುವ ಹೈನೋದ್ಯಮದಲ್ಲಿ ಬಹುತೇಕ ಮಂದಿ ತೊಡಗಿಸಿಕೊಂಡು, ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆದರೆ,ರೈತರ ಪಾಲಿಗೆ ಆಸರೆಯಾಗಿರುವ ಜಾನುವಾರುಗಳಆರೋಗ್ಯದಲ್ಲಿ ತೊಂದರೆಯಾದರೆ, ಸಮರ್ಪಕಹಾಗೂ ಸಮಯಕ್ಕೆ ಸರಿ ಚಿಕಿತ್ಸೆ ನೀಡಲು ಪಶುಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊತೆಯಿಂದಹೈನೋದ್ಯಮ ರೈತರು ಪರದಾಡುವಂತಾಗಿದೆ ಎಂದು ರೈತರು ದೂರಿದ್ದಾರೆ.
ಶಾಸಕರೇ ಗಮನ ಹರಿಸಿ: ಕೋಚಿಮುಲ್ ಅಧ್ಯಕ್ಷರು ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಸಭೆ-ಸಮಾರಂಭಗಳಲ್ಲಿ ಮಾತಾನಾಡುತ್ತಾ,ಬಹುತೇಕ ರೈತರು ಹೆ„ನುಗಾರಿಕೆಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.ತಾಲೂಕಿನಲ್ಲಿ ಹೆಚ್ಚು ಹಾಲು ಪೂರೈಕೆ ಯಾಗುತ್ತಿದೆ.ಅದರಲ್ಲೂ ಮಾಸ್ತಿ ಹಾಲು ಉತ್ಪಾದಕರ ಸಂಘದಿಂದ ಹೆಚ್ಚು ಹಾಲು ಪೂರೈಕೆಯಾಗುತ್ತಿದೆ ಎಂದು ಪ್ರತೀಬಾರಿ ಹೇಳುತ್ತಾರೆ. ಆದರೆ, ಹೈನುಗಾರಿಕೆಯಲ್ಲಿತೊಡಗಿಸಿಕೊಂಡಿರುವ ರೈತರು ತಮ್ಮ ಹಸುಗಳಿಗೆ ಅನಾರೋಗ್ಯವಾದರೆ, ಸಮರ್ಪಕ ಚಿಕಿತ್ಸೆಗೆಪರದಾಡುವಂತಾಗಿದೆ. ಆದ್ದರಿಂದ ಶಾಸಕರು ಗಮನಹರಿಸಿ, ಪಶು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರುಹಾಗೂ ಸಿಬ್ಬಂದಿ ನೇಮಿಸಲು ಸರ್ಕಾರದ ಗಮನಕ್ಕೆತಂದು ಅನುಕೂಲ ಕಲ್ಪಿಸಬೇಕಾಗಿದೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಮಾಸ್ತಿ ಪಶು ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಕೊರತೆ ಇದೆ. ಇದರಿಂದಜಾನುವಾರುಗಳಿಗೆ ಸಮರ್ಪಕ,ಸಮಯಕ್ಕೆ ಸರಿ ಚಿಕಿತ್ಸೆ ಸಿಗದೆತೊಂದರೆಯಾಗಿದೆ. ಸಿಬ್ಬಂದಿ ಒಬ್ಬರೇಒಬ್ಬರು ಕೆಲಸ ಮಾಡುತ್ತಿದ್ದಾರೆ.ವೈದ್ಯರಿಲ್ಲದೆ ತೊಂದರೆಯಾಗುತ್ತಿದೆ.ಶಾಸಕರು ಇತ್ತ ಗಮನ ಹರಿಸಿ,ಸರ್ಕಾರ ಪಶು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಿ. – ಜಿ.ಎಂ.ನಾರಾಯಣಗೌಡ, ರೈತ
ಮಾಸ್ತಿ ಪಶು ಆಸ್ಪತ್ರೆಯಲ್ಲಿ ಡಿ ಗ್ರೂಪ್ 1 ಹೊರತುಪಡಿಸಿದರೆ 4 ಹುದ್ದೆ ಖಾಲಿಇರುವುದು ನಿಜ. ಮಾಲೂರು ತಾಲೂಕಿನಲ್ಲಿ 82ಮಂಜೂರಾತಿಯಲ್ಲಿ 42 ಹುದ್ದೆ ಖಾಲಿಇರುವುದರಿಂದ ಸಿಬ್ಬಂದಿ ಕೊರತೆ ಇದೆ. ಇದರಿಂದರೈತರಿಗೆ ತೊಂದರೆಯಾಗಿದೆ. ವೈದ್ಯರು ಹಾಗೂಸಿಬ್ಬಂದಿ ಕೊರತೆ ನಿವಾರಣೆಯಾದರೆ ಹೈನುಗಾರಿಕೆ ರೈತರಿಗೆ ಅನುಕೂಲವಿದೆ. ಈ ಬಗ್ಗೆ ಪ್ರತಿ ವರ್ಷನೀಡುವ ವರದಿ ಪತ್ರದಲ್ಲಿ ದಾಖಲೆ ಮಾಡಿ, ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. – ನಾರಾಯಣ ಸ್ವಾಮಿ, ಸಹಾಯಕ ನಿರ್ದೇಶಕ, ಪಶು ಇಲಾಖೆ ಮಾಲೂರು
– ಮಾಸ್ತಿ ಎಂ.ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್