ನೆರೆ ಸಂತ್ರಸ್ತರಿಗೆ ಶಾಲಾ ವಿದ್ಯಾರ್ಥಿಗಳ ನೆರವು, 5 ಕ್ವಿಂಟಲ್ ಪಲಾವು ಹಂಚಿಕೆ
Team Udayavani, Aug 9, 2019, 2:01 PM IST
ಕೊಪ್ಪಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದೆ. ಹಲವು ಜಿಲ್ಲೆಗಳ ಜನಜೀವನ ಅಕ್ಷರಶಃ ನರಕ ಸದೃಶವಾಗಿದೆ.
ಪ್ರವಾಹ ಸಂತ್ರಸ್ತರಿಗೆ ಪೂರೈಸಲು ಸಾಕಷ್ಟು ಪರಿಹಾರ ಸಾಮಗ್ರಿಗಳು ಹರಿದು ಬರುತ್ತಿವೆ. ರಾಜ್ಯದ ವಿವಿದೆಡೆಗಳಿಂದ ದಾನಿಗಳು, ಸಂಘ ಸಂಸ್ಥೆಗಳು ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತರಿಗೆ ನೆರವಾಗಲು ಕಳುಹಿಸಿ ಕೊಡುತ್ತಿದ್ದಾರೆ.
ನೆರೆ ಸಂತ್ರಸ್ಥರಿಗೆ ವಿದ್ಯಾರ್ಥಿಗಳ ನೆರವು
ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳು, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನೆರೆ ಪೀಡಿತ ಪ್ರದೇಶ ಹೊಳೆಯಾಲೂರಿಗೆ ನೆರವು ನೀಡಲು ಸಾಮಗ್ರಿಗಳನ್ನು ಕಳುಹಿಸುತ್ತಿದ್ದಾರೆ. 10 ಸಾವಿರ ರೊಟ್ಟಿ ಸಂಗ್ರಹ, 55 ಪಾಕೇಟ್ 25 ಕೇಜಿ ಚೀಲದ ಅಕ್ಕಿ , 25 ಬಾಕ್ಸ್ ಬಿಸ್ಕೇಟ್ ,21 ಚೀಲದ ಬಟ್ಟೆಗಳು, 4 ಚೀಲದ ಹಾಸಿಗೆ ಮತ್ತು ಹೊದಿಕೆ, 3 ಚೀಲ ವಾಟರ್ ಪೌಚ್, 2 ಬಾಕ್ಸ್ ಪ್ರಥಮ ಚಿಕಿತ್ಸಾ ಔಷಧಿ ,5 ಬಾಕ್ಸ್ ಸಿಹಿ ತಿನಿಸುಗಳನ್ನು ಒಂದು ಮಿನಿ ಲೋಡ್ ನಲ್ಲಿ ಸಂಗ್ರಹಿಸಿ ಕಳುಹಿಸಲಾಗುತ್ತದೆ.
5 ಕ್ವಿಂಟಲ್ ಪಲಾವು ಸಿದ್ದ
ಇಲ್ಲಿನ ಕೊಪ್ಪಳ ಕಾ ರಾಜಾ ಗೆಳೆಯರ ಬಳಗದಿಂದ ನೆರೆ ಸಂತ್ರಸ್ತರಿಗೆ ವಿತರಿಸಲು ಐದು ಕೆಜಿ ಪಲಾವ್ ಸಿದ್ದಪಡಿಸಲಾಗಿದೆ. ಸ್ನೇಹಿತರೆಲ್ಲ ಸೇರಿ ಇದನ್ನು ಸಿದ್ದಪಡಿಸಿದ್ದು, ಪ್ರವಾಹ ಪೀಡಿತರಿಗೆ ಹಂಚಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?