Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Team Udayavani, Apr 17, 2024, 7:35 PM IST
ಕೊಪ್ಪಳ: ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಮೈಸೂರಿನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಿದ್ದು ವಿರುದ್ದ ಟೀಕಾ ಪ್ರಹಾರ ನಡೆಸಿದರು.
ಕೊಪ್ಪಳದಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ನಂತರ ಸಿದ್ದು ಮುಖ್ಯಮಂತ್ರಿಯಾಗಿರಲು ಡಿಕೆಶಿ ಬಿಡಲ್ಲ.
ಎಂಪಿ ಚುನಾವಣೆಯಾದ ತಕ್ಷಣ ಸಿಎಂ ಸ್ಥಾನ ಬದಲಾಗಲಿದೆ. ಡಿಕೆಶಿ ಸಹ ಮುಂದೆ ನಾನೇ ಸಿಎಂ ಎನ್ನುತ್ತಿದ್ದು, ಹಾಗಾಗಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಅಭ್ಯರ್ಥಿ ಗೆಲ್ಲಿಸಿ ಎಂದು ಕೈ ಮುಗಿದು ಭಿಕ್ಷೆ ಬೇಡುತ್ತಿದ್ದಾರೆ ಎಂದರು.
ಅನ್ಸಾರಿ ಮನೆ ಮೇಲೆ ಪೆಟ್ರೋಲ್ ಬಾಂಬ್ : ಸಂಗಣ್ಣ ಕರಡಿ ಕಾಂಗ್ರೆಸ್ಗೆ ಹೋದರೆ ನಾವು ಯೋಚನೆ ಮಾಡಲ್ಲ. ಆದರೆ ಸಂಗಣ್ಣ ಕರಡಿ ಕೈ ಸೇರ್ಪಡೆಯಿಂದ ಇಕ್ಬಾಲ್ ಅನ್ಸಾರಿ ಮನೆ ಮೇಲೆ ಪೆಟ್ರೋಲ್ ಬಾಂಬ್ ಬಿದ್ದಿದೆ. ಗಂಗಾವತಿಗೆ ಸಂಗಣ್ಣಗೆ ಮುಂದೆ ಕೈ ಟಿಕೆಟ್ ಕೊಡುತ್ತಾರೆ ಎಂದು ಅನ್ಸಾರಿ ಹುಚ್ಚರಾಗಿ, ಅಳುತ್ತಾ ಕುಳಿತಿದ್ದಾನೆ ಎಂದರಲ್ಲದೇ 2028ರ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ರಾಘವೇಂದ್ರ ಹಿಟ್ನಾಳರನ್ನು ಠೇವಣಿ ಇಲ್ಲದಂತೆ ಮಾಡುವೆ ಎಂದರು.
ಬಸವರಾಜ ರಾಯರೆಡ್ಡಿ ಜೂನ್ನಲ್ಲಿ ಮಂತ್ರಿಯಾಗಲು ಕನಸು ಕಂಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ