ಟಿಪ್ಪರ್ ಬ್ರೇಕ್ ರಿಪೇರಿ ಮಾಡುತ್ತಿದ್ದ ವೇಳೆ ಚಾಲಕನ ಯಡವಟ್ಟು: ಮೆಕ್ಯಾನಿಕ್ ಬಲಿ
Team Udayavani, Jun 16, 2022, 12:51 PM IST
ಕುಷ್ಟಗಿ: ಟಿಪ್ಪರ್ ಬ್ರೇಕ್ ರಿಪೇರಿ ಮಾಡುತ್ತಿರುವ ವೇಳೆ ಚಾಲಕನ ಎಡವಟ್ಟಿಗೆ ಮೆಕ್ಯಾನಿಕ್ ಬಲಿಯಾದ ಘಟನೆ ಗುರುವಾರ (ಜೂ.16) ಕೃಷ್ಣಗಿರಿ ಕಾಲೋನಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ .
ಪಟ್ಟಣ ಹೊರವಲಯದ ಕೃಷ್ಣಗಿರಿ ಕಾಲೋನಿಯ ಪರಶುರಾಮ್ ಗ್ಯಾರೇಜ್ ನ ಶಿವಪ್ಪ ರಾಮಣ್ಣ ಬೂದರ (33) ಮೃತ ದುರ್ದೈವಿ.
ಗುರುವಾರ ಬೆಳಗ್ಗೆ ರಾಮಣ್ಣ ಬೂದರ ಟಿಪ್ಪರ್ ಅಡಿಯಲ್ಲಿ ಮಲಗಿ ಬ್ರೇಕ್ ರಿಪೇರಿ ಮಾಡುತ್ತಿದ್ದರು. ಈ ಸಂದರ್ಭ ಟಿಪ್ಪರ್ ಚಾಲಕ ವಾಹನ ಚಾಲು ಮಾಡಿದ್ದರಿಂದ ಟಿಪ್ಪರ್ ಮುಂದೆ ಹೋಗಿದ್ದು, ಟಿಪ್ಪರ್ ಟೈರ್ ರಾಮಣ್ಣ ಬೂದರ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಮಂಗಳೂರು: ಬಾಲ್ಕನಿಯ ಕರ್ಟನ್ ಸರಿಪಡಿಸುವ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್