ವೃದ್ಧೆಗೆ ಮಾಸಾಶನ ವಿತರಣೆ
Team Udayavani, May 8, 2021, 7:33 PM IST
ಕೆ.ಆರ್.ಪೇಟೆ: ರಾಜ್ಯದಲ್ಲಿ ಜನತಾ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದನಿರ್ಗತಿಕರು, ಬಡವರಿಗೆ ಔಷಧಿ ಮತ್ತಿತರಕೆಲಸಕ್ಕೆ ಆರ್ಥಿಕ ತೊಂದರೆಯಾಗಬಾರದುಎಂದು ನಿರ್ಗತಿಕರ ಮನೆಗಳಿಗೆ ನೇರವಾಗಿನಗದು ನೆರವು ಸೇರಿದಂತೆ ವಿವಿಧಯೋಜನೆಯನ್ನು ಡಾ.ವೀರೇಂದ್ರಹೆಗ್ಗಡೆದಂಪತಿ ಮುಂದುವರಿಸಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೋಜನಾಧಿಕಾರಿ ಮಮತಾಶೆಟ್ಟಿ ತಿಳಿಸಿದರು.
ತಾಲೂಕಿನ ಬೂಕನಕೆರೆ ಗ್ರಾಮದಲ್ಲಿಶ್ರೀಕ್ಷೇತ್ರದ ನಿಧಿಯಿಂದ ನಿರ್ಗತಿಕ ಯೋಜನೆಯಡಿ ವೃದ್ಧೆªಯೊಬ್ಬರಿಗೆ ಮಾಸಾಶನ ವಿತರಣೆಮಾಡಿ ಮಾತನಾಡಿದರು. ಈಗ ಮಹಾಮಾರಿಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿಸಾವಿರಾರು ಕುಟುಂಬಗಳ ನೋವಿಗೆ ಕಾರಣವಾ ಗಿದೆ. ನಾವು ನಮ್ಮ ಎಲ್ಲಾ ಪ್ರತಿನಿಧಿಗಳನ್ನುಬಳಸಿ ತಾಲೂಕಿನಲ್ಲಿ ಗುರುತಿಸಿರುವ 64ಬಡವರು, ನಿರ್ಗತಿಕರಿಗೆ ತಲಾ 750 ರಿಂದ1000 ರೂ.ಗಳವರೆಗೆ 48500 ರೂ.ಗಳನ್ನುಅವರ ಮನೆಗಳಿಗೆ ತೆರಳಿ ವಿತರಣೆ ಮಾಡಿದ್ದೇವೆ. ಲಾಕ್ಡೌನ್ ಮುಂದುವರಿದರೆಪೂಜ್ಯರ ಸೂಚನೆಯಂತೆ ಮತ್ತಷ್ಟು ಆರ್ಥಿಕನೆರವು ನೀಡಲಾಗುತ್ತದೆ ಎಂದರು.
ವಾಹನಗಳ ವ್ಯವಸ್ಥೆ: ಕೊರೊನಾದಿಂದಾಗಿಗ್ರಾಮೀಣ ಭಾಗದ ಜನರಿಗೆ ವಾಹನಕ್ಕೆತೊಂದರೆಯಾಗುತ್ತಿರುವುದನ್ನು ಗಮನಿಸಿರುವಪೂಜ್ಯರು ಕೊರೊನಾ ಪೀಡಿತರಿಗೆ ಅನುಕೂಲವಾಗಲಿ ಎಂದು ತಾಲೂಕಿನಲ್ಲಿ ನಮ್ಮ ಸಂಘದವತಿಯಿಂದ ಪ್ರಯಾಣಿಕರ ವಾಹನಓಡಿಸಲಾಗುತ್ತಿದೆ.
ಯಾರಿಗೆ ವಾಹನದಅವಶ್ಯಕತೆ ಇರುತ್ತದೆಯೋ ಅವರು ನಮ್ಮಸಂಘದ ಸ್ಥಳೀಯ ಮೇಲ್ವಿಚಾರಕರು ಅಥವಾತಾಲೂಕು ಯೋಜನಾಧಿಕಾರಿಗಳಿಗೆ ಕರೆಮಾಡಿದರೆ ನಾವು ಅವರ ಮನೆ ಬಾಗಿಲಿಗೆವಾಹನ ಕಳುಹಿಸಿ ಆರೋಗ್ಯ ಚಿಕಿತ್ಸೆ ಕೊಡಿಸಲುವ್ಯವಸ್ಥೆ ಮಾಡುತ್ತೇವೆ.ಜೊತೆಗೆ ಯಾರಿಗಾದರೂ ಊಟದಸಮಸ್ಯೆ ಇದ್ದರೂ ಮುಂದಿನ ದಿನಗಳಲ್ಲಿವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.ಈ ವೇಳೆ ಶ್ರೀಕ್ಷೇತ್ರ ಯೋಜನೆಯಮೇಲ್ವಿಚಾರಕಿ ಅನ್ನಪೂರ್ಣ, ಮಹಾದೇವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ