ವ್ಯಕ್ತಿ ಕೊಂದಿದ್ದ ಸಲಗಗಳು ಕಾಡಿನತ್ತ


Team Udayavani, May 6, 2019, 3:00 AM IST

vyakti

ಎಚ್‌.ಡಿ.ಕೋಟೆ: ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದು ಕೂಲಿ ಕಾರ್ಮಿಕನೋರ್ವನನ್ನು ದಾರುಣವಾಗಿ ಕೊಂದು ಹಾಕಿದ್ದ ಎರಡು ಸಲಗಗಳನ್ನು ಕಾರ್ಯಚರಣೆ ನಡೆಸಿ ಕಾಡಿಗಟ್ಟುವಲ್ಲಿ ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮೇ 4ರ ಶನಿವಾರ ಹೆಬ್ಟಾಳ ಜಲಾಶಯದ ನಾಲೆ ಲೈನಿಂಗ್‌ ಕಾಮಗಾರಿ ಕೆಲಸಕ್ಕೆ ಬಂದಿದ್ದ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆ ಶಹಾಪುರ ದಸರಾ ಆನೆಗಳಿಂದ ಕಾರ್ಯಾಚರಣೆ: ತಾಲೂಕಿನ ಕಿಕ್ಕೇರಿ ಗ್ರಾಮದ ನಿವಾಸಿ ಹನುಮಂತರಾಯಪ್ಪ 53 ವರ್ಷ ಎಂಬುವವರ ಮೇಲೆ ತಾಲೂಕಿನ ಮಾದಾಪುರ ಗ್ರಾಮದ ದೇವರಾಜ ಕಾಲೋನಿ ಸಮೀಪ ಆನೆ ದಾಳಿ ಮಾಡಿ ದಂತದಿಂದ ಚುಚ್ಚಿ ಕೊಂದು ಹಾಕಿತ್ತು.

ಘಟನೆ ಬಳಿಕ ಎಚ್ಚೆತ್ತ ಅರಣ್ಯಾಧಿಕಾರಿಗಳು ಹೆಚ್ಚಿನ ಸಿಬ್ಬಂದಿ ಜತೆಗೆ ದಸರಾ ಆನೆಗಳನ್ನು ಕರೆಸಿ ಸಂಜೆ 6 ನಂತರ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಲು ಕಾರ್ಯಚರಣೆ ಪ್ರಾರಂಭಿಸಿ ಸುಮಾರು ರಾತ್ರಿ 8 ಗಂಟೆ ವೇಳೆಗೆ ಸರಗೂರು ಸಾಮಾಜಿಕ ವಲಯಾರಣ್ಯದ ಚಿಕ್ಕದೇವಮ್ಮ ಬೆಟ್ಟದ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾದರು.

ಓಂಕಾರ್‌ ಅರಣ್ಯಕ್ಕೆ: ಈ ಪ್ರದೇಶದ ಸಂರಕ್ಷಿತಾ ಅರಣ್ಯ ಪ್ರದೇಶವಾಗಿದ್ದು, ಮತ್ತೆ ಇಲ್ಲಿಂದ ಸಲಗಗಳು ಹೊರಗೆ ಬರುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ತಿಳಿದಿರುವ ಅಧಿಕಾರಿಗಳು, ಭಾನುವಾರ ಕಾರ್ಯಚರಣೆ ನಡೆಸಿ, ಆನೆಗಳನ್ನು ಬಂಡೀಪುರ ವನ್ಯಜೀವಿ ವಲಯದ ಓಂಕಾರ್‌ ಅರಣ್ಯ ಪ್ರದೇಶಕ್ಕೆ ಸೇರಿಸಲಾಗುವುದು ಎಂದು ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯಾಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ದಂತದಿಂದ ಚುಚ್ಚಿದ್ದವು: ಕಾಡಾನೆಗಳು ಮೇ 4 ರ ಶನಿವಾರ ಮೊದಲು ಬೆಳಗ್ಗೆ 6ರ ಸಮಯದಲ್ಲಿ ಪಡುಕೋಟೆಯಲ್ಲಿ ಕಾಣಿಸಿಕೊಂಡವು. ನಂತರ ಕೊಡಸೀಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಮಲಾರ ಕಾಲೋನಿ ಮಾರ್ಗವಾಗಿ ಮಾದಾಪುರ ತಲುಪಿದವು.

ಗ್ರಾಮದ ದೇವರಾಜ ಕಾಲೋನಿ ಬಳಿ ನಡೆಯುತ್ತಿರುವ ಹೆಬ್ಟಾಳ ನಾಲೆಗಳ ಲೈನಿಂಗ್‌ ಕಾಮಗಾರಿ ಕೆಲಸಕ್ಕಾಗಿ ತೆರಳಿದ್ದ ಹನುಮಂತರಾಯಪ್ಪ ಅವರ ಮೇಲೆ ಕಾಡಾನೆಗಳು ದಾಳಿ ಮಾಡಿ ತನ್ನ ದಂತದಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದರಿಂದ ಹನುಮಂತಪ್ಪ ಸಾವನ್ನಪ್ಪಿದ್ದರು.

ಕಾರ್ಯಾಚರಣೆಗೆ ತೊಂದರೆ: ತಾಲೂಕಿನ ಮಾದಾಪುರ ಗ್ರಾಮದ ದೇವರಾಜ ಕಾಲೋನಿ ಬಳಿ ಕಾಡಾನೆ ದಾಳಿ ಮಾಡಿ ಬಡ ಕೂಲಿ ಕಾರ್ಮಿಕನನ್ನು ಕೊಂದು ಹಾಕಿದ್ದ ವಿಷಯ ಮಾದಾಪುರ ಗ್ರಾಮ ಸೇರಿ ಅಕ್ಕಪಕ್ಕದ ಗ್ರಾಮದ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಜನರು ಕಾಡಾನೆಗಳನ್ನು ನೋಡಲು ಸೇರಿದ್ದರಿಂದ ಕಾರ್ಯಚರಣೆ ವಿಳಂಬ ಆಯ್ತು.

ಇನ್ನಾದರೂ ಕಾರ್ಯಚರಣೆ ಸಂದರ್ಭ ಜನರು ಸಾಗರೋಪಾದಿಯಲ್ಲಿ ಸೇರಿ ಕಾರ್ಯಾಚರಣೆಗೆ ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ಜಾಗೃತರಾಗಿ ಅರಣ್ಯ ಇಲಾಖೆ ಜೊತೆ ಸಹಕರಿಸುವಂತೆ ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಘಟನೆಗೆ ನೊಂದ ಅರಣ್ಯಾಧಿಕಾರಿ: ಕಾಡಿನಿಂದ ತಪ್ಪಿಸಿಕೊಂಡು ಬಂದು ತಾಲೂಕಿನ ಕೆಲ ಗ್ರಾಮಗಳ ಬಳಿ ಕಾಣಿಸಿಕೊಂಡಿದ್ದ ಕಾಡಾನೆಗಳನ್ನು ಕಂಡ ಜನರು ಸಿಳ್ಳೆ, ಕೂಗಾಟ, ಹುಚ್ಚಾಟದಿಂದಾಗಿ ಗಾಬರಿಗೊಂಡಿದ್ದವು.

ಈ ಕಾಡಾನೆಗಳು ಅದೇ ಹೆಬ್ಟಾಳ ನಾಲೆಯ ಲೈನಿಂಗ್‌ ಕಾಮಗಾರಿಯಲ್ಲಿ ತೊಡಗಲು ನಾಲೆ ಏರಿ ಮೇಲೆ ನಡೆದು ಬರುತ್ತಿದ್ದ ಹನುಮಂತರಾಯಪ್ಪ ಎಂಬ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ ಕೊಂದು ಹಾಕಿವೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯ ಅಧಿಕಾರಿಯೊಬ್ಬರು ಮರುಕ ವ್ಯಕ್ತಪಡಿಸಿದ್ದಾರೆ.

* ಬಿ.ನಿಂಗಣ್ಣಕೋಟೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.