
Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ
Team Udayavani, Sep 27, 2023, 3:13 PM IST

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇಂದು ದಸರಾ ಗಜಪಡೆಗಳಿಗೆ ಎರಡನೇ ಹಂತದ ತೂಕ ಪರೀಕ್ಷೆ ನಡೆಸಲಾಯಿತು.
ಬರೋಬ್ಬರಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್ ಅರ್ಜುನ ಈ ಬಾರಿಯೂ ಅತಿ ಹೆಚ್ಚು ತೂಕದ ಆನೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.
ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಒಟ್ಟು 14 ಆನೆಗಳು ಆಗಮಿಸಿ ತೂಕ ಪರೀಕ್ಷೆಯಲ್ಲಿ ಭಾಗಿಯಾದವು. ಇಂದು ನಡೆದ ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ ಕೆಲವೊಂದು ಆನೆಗಳಿಗೆ ಇದು ಮೊದಲ ಹಂತದ ತೂಕ ಪರೀಕ್ಷೆಯೂ ಆಗಿತ್ತು.
ಇಂದು ನಡೆಸಿದ ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 140 ಕೆಜಿ ತೂಕ ಹೆಚ್ಚಿಸಿಕೊಂಡಿದೆ, ಇದರ ಜೊತೆ ಭೀಮ ಈ ಬಾರಿ ಬರೋಬ್ಬರಿ 315 ಕೆಜಿ ತೂಕ ಹೆಚ್ಚಿಸಿಕೊಂಡಿದೆ, ಅದರಂತೆ ಮಹೇಂದ್ರ 135 ಕೆಜಿ, ಧನಂಜಯ 50 , ಗೋಪಿ 65, ಕಂಜನ್ 155, ವಿಜಯ 55, ವರಲಕ್ಷ್ಮಿ 150 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದೆ.
ಮೊದಲ ಹಂತದ ತೂಕ ಮಾಪನದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನ 5680 ಕೆಜಿ ತೂಗಿದ್ದು, ಸುಗ್ರೀವ 5035 ಕೆಜಿ ತೂಗಿದ್ದಾನೆ. ಇದರ ಜೊತೆ ಪ್ರಶಾಂತ 4970 , ರೋಹಿಣಿ 3350, ಹಿರಣ್ಯ 2915 , ಲಕ್ಷ್ಮಿ 3235 ಕೆಜಿ ತೂಗಿದ್ದಾರೆ.
ಇದನ್ನೂ ಓದಿ: World Tourism Day: ಭೂಲೋಕದ ಸ್ವರ್ಗ…ಪಾಂಡವರು ಸ್ಥಾಪಿಸಿದ ಬೆಟ್ಟದ ಭೈರವೇಶ್ವರ ದೇವಾಲಯ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahadevapura: 2 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದಾಕೆ ನೇಣಿಗೆ ಶರಣು

ಪ್ರತೀ ತಿಂಗಳು 70ಕ್ಕೂ ಅಧಿಕ ಭ್ರೂಣಹತ್ಯೆ!- ತೊಟ್ಟಿ, ಶೌಚಾಲಯ ಸೇರುತ್ತಿದ್ದ ಭ್ರೂಣಗಳು

Politics: ನಾಳೆಯಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ

ಸೆಸ್ ಹೆಚ್ಚಳಕ್ಕೆ GIS ಅನುಸರಿಸಲು ಸೂಚನೆ: ಸಂತೋಷ್ ಲಾಡ್

Politics: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರ ಪತನ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ

ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಒದಗಿಸುವ ಪ್ರಮಾಣಿಕ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ

Illegal liquor; ಅಕ್ರಮ ಮದ್ಯ; ಮೌನಕ್ಕೆ ಜಾರಿದ ಅಬಕಾರಿ ಇಲಾಖೆ

Election; ಸನಾತನ ಧರ್ಮಕ್ಕೆ ನಿಂದಿಸಿದರೆ..: ಕಾಂಗ್ರೆಸ್ ವಿರುದ್ಧ ವೆಂಕಟೇಶ್ ಪ್ರಸಾದ್ ಟೀಕೆ

Dialysis machine: ಚಾ.ನಗರ ಜಿಲ್ಲೆಗೆ ಬೇಕು ಮತ್ತಷ್ಟು ಡಯಾಲಿಸಿಸ್ ಯಂತ್ರಗಳು

Milk Union: ಹಾಲು ಉತ್ಪಾದಕರಿಗೆ ದರ ಕಡಿತದ ಬರೆ!