ಭಾವನ ಹತ್ಯೆಗೈದು ಠಾಣೆಗೆ ಕೈ ತಂದ!
Team Udayavani, Aug 16, 2021, 3:26 PM IST
ಮೈಸೂರು: ಮದುವೆಯಾದ ಕೇವಲ 5ತಿಂಗಳಲ್ಲಿ ತಂಗಿ ಮೇಲೆ ಅನುಮಾನ ಪಟ್ಟು,ಆಕೆಗೆ ಕಿರುಕುಳ ನೀಡಲೆತ್ನಿಸಿದ ಭಾವನನ್ನುಬಾಮೈದುನರೇ ಹತ್ಯೆಗೈದಘಟನೆ ಭಾನುವಾರಮಧ್ಯಾಹ್ನ ಗೌಸಿಯಾ ನಗರದಲ್ಲಿ ನಡೆದಿದೆ.ಮೊಹಮ್ಮದ್ ಸುರಾನ್ಕೊಲೆಯಾದ ವ್ಯಕ್ತಿ.ಈತನ ಬಾಮೈದ ಕದೀರ್, ಈತನ ಇಬ್ಬರುಸಹೋದರರು ಹತ್ಯೆ ಮಾಡಿ ದ್ದಾರೆ.
ರಾಡ್ನಿಂದ ತೀವ್ರವಾಗಿ ಹಲ್ಲೆ: ಕಳೆದ 5ತಿಂಗಳ ಹಿಂದೆ ಸುರಾನ್ ಎಂಬಾತ ರುಬಿನಾಎಂಬಾಕೆಯನ್ನು ವಿವಾಹವಾಗಿದ್ದ. ಆರಂಭದಕೆಲ ದಿನ ಪತ್ನಿಯೊಂದಿಗೆ ಅನ್ಯೋನ್ಯವಾಗಿದ್ದಸುರಾನ್, ತದನಂತರ ಆಕೆಯ ಶೀಲದ ಬಗ್ಗೆಶಂಕಿಸಿ ಕಿರುಕುಳ ಕೊಡುತ್ತಿದ್ದ. ರೂಬಿನಾಕುಟುಂಬಸ್ಥರು ಎಷ್ಟೇ ರಾಜಿ ಪಂಚಾಯ್ತಿಮಾಡಿದರೂ ಜಗಳವಾಡೋದು ಬಿಟ್ಟಿರಲಿಲ್ಲಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ರುಬಿನಾಳಸಹೋದರರಾದ ಕದೀರ್ ಪಾಷಾ, ಅಜ್ಮನ್ಪಾಷಾ, ಹಲಾಮತ್ ಪಾಷಾ ತಮ್ಮ ತಂಗಿ ಪತಿಮೊಹಮ್ಮದ್ ಸುರಾನ್ನ ಕೈ ಕತ್ತರಿಸಿಮನಸೊÕà ಇಚ್ಚೆ ಚಾಕು ಮತ್ತು ರಾಡ್ ನಿಂದಹÇÉೆ ಮಾಡಿ ಹತ್ಯೆ ಮಾಡಿ ದ್ದಾರೆಂದು ತಿಳಿದುಬಂದಿದೆ.
ಬ್ಯಾಗ್ನಲ್ಲಿ ಕೈಗಳನ್ನು ತಂದ: ಬಳಿಕ ಸುರಾನ್ನ ಎರಡೂ ಕೈಗಳನ್ನು ಕತ್ತರಿಸಿದ ಕದೀರ್,ಅವುಗಳನ್ನು ಬ್ಯಾಗೊಂದರಲ್ಲಿ ಹಾಕಿಕೊಂಡುಠಾಣೆಗೆ ಬಂದು ಶರಣಾಗಿ ದ್ದಾನೆ. ಪ್ರಕರಣಕುರಿತು ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಪಿ.ಕೆ.ರಾಜು ತನಿಖೆ ನಡೆಸುತ್ತಿ ದ್ದಾರೆ.