ಮೇಲೇರದ-ಕೆಳಗಿಳಿಯದ ಫಲಿತಾಂಶ


Team Udayavani, May 1, 2018, 3:19 PM IST

ray-1.jpg

ರಾಯಚೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ರಾಯಚೂರು ಜಿಲ್ಲೆ ಕಳೆದ ಬಾರಿ ಪಡೆದಿದ್ದ 26ನೇ ಸ್ಥಾನಕ್ಕೆ ಅಂಟಿಕೊಂಡಿದೆ. ಆದರೆ, ಫಲಿತಾಂಶದಲ್ಲಿ ತುಸು ಚೇತರಿಕೆ ಕಂಡಿರುವುದು ಸಮಾಧಾನ ತಂದಿದೆ. ಜಿಲ್ಲೆ ಕಳೆದ ಬಾರಿ ಶೇ.49.56 ಫಲಿತಾಂಶ ಪಡೆದಿತ್ತು. ಆದರೆ, ಈ ಬಾರಿ ಶೇ.56.22 ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.9ರಷ್ಟು ಹೆಚ್ಚಳ ಕಂಡಿದೆಯಾದರೂ, ರಾಜ್ಯದ ಇತರೆ ಜಿಲ್ಲೆಗಳಿಗೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ. ಕಳೆದ ಬಾರಿ ಒಟ್ಟು 13,182 ವಿದ್ಯಾರ್ಥಿಗಳ ಪೈಕಿ 6,188 ವಿದ್ಯಾರ್ಥಿಗಳು ಪಾಸಾಗಿದ್ದರು. ಪ್ರಥಮ ಬಾರಿಗೆ ಪರೀಕ್ಷೆ ಬರೆದವರ ಫಲಿತಾಂಶ ಕೇವಲ ಶೇ. 39.29 ಆಗಿತ್ತು. ಆದರೆ, ಈ ಬಾರಿ ಎಷ್ಟು ಜನ ಉತ್ತೀರ್ಣರಾಗಿದ್ದಾರೆ ಎಂದು ಮಂಗಳವಾರ ತಿಳಿದು ಬರಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೀಮಾ ಸಾಧನೆ: ನಗರದ ವಿದ್ಯಾನಿಧಿ ಕಾಲೇಜಿನ ಸೀಮಾ ವಿಜ್ಞಾನ ವಿಭಾಗದಲ್ಲಿ 584 (ಶೇ.97.3) ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕೃಷಿ ಕ್ಷೇತ್ರ ಪರಿಪಾಲಕ ದುಂಡಪ್ಪ ಹುಲಗಬಳೆ ಅವರ ಮಗಳಾಗಿರುವ ಸೀಮಾ ನಿತ್ಯ ಸಾಕಷ್ಟು ಓದುತ್ತಿದ್ದರು. ತಮ್ಮ ಸಾಧನೆ ಬಗ್ಗೆ ಅವರೇ ಹೇಳಿದಂತೆ, ನಾನು ವೇಳಾಪಟ್ಟಿ ರೂಪಿಸಿ ಓದುತ್ತಿರಲಿಲ್ಲ. ತರಗತಿಯಲ್ಲಿ ಹೆಚ್ಚು ಗಮನವಿಟ್ಟು ಆಲಿಸಿ ಅದನ್ನೇ ಮನೆಯಲ್ಲಿ ಮನನ ಮಾಡುತ್ತಿದ್ದೆ. ಶಿಕ್ಷಕರು, ಸ್ನೇಹಿತರ ಸಹಕಾರದಿಂದ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಅವರು.

 ಶ್ರೇಯಾ ಲೋಯಾ: ನಗರದ ಎಸ್‌ಆರ್‌ಪಿಎಸ್‌ ಪಿಯು ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಶ್ರೇಯಾ ಲೋಯಾ ಅವರು 576 (ಶೇ. 97) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಕಾಲೇಜಿನಲ್ಲಿ ಎಂಟು ಗಂಟೆ ಕೇಳುತ್ತಿದ್ದ ಪಾಠ ಪ್ರವಚನ ಹಾಗೂ ಮನೆಯಲ್ಲಿ ನಾಲ್ಕು ತಾಸು ಓದಿರುವುದು ಗರಿಷ್ಠ ಅಂಕ ಪಡೆಯುವುದಕ್ಕೆ ಸಾಧ್ಯವಾಯಿತು ಎನ್ನುವುದು ಶ್ರೇಯಾ ಮಾತು. 

“ಅಂಕ ಪಡೆಯುವುದಕ್ಕಾಗಿ ಕಠಿಣ ಅಧ್ಯಯನ ಮಾಡಿಲ್ಲ; ಸಹಜವಾಗಿ ಓದಿಕೊಂಡು ಬಂದಿದ್ದು ಉತ್ತಮ ಫಲಿತಾಂಶಕ್ಕೆ ದಾರಿ ಆಗಿದೆ. ಓದಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಮುಂದಿನ ಪಾಠ ಓದುತ್ತಿರಲಿಲ್ಲ. ಅವಳ ಈ ಸಾಧನೆಗೆ ಕಾಲೇಜಿನ ಗುಣಮಟ್ಟದ ಪಾಠ ಕೂಡ ಕಾರಣ’ ಎಂದು ಶ್ರೇಯಾ ಅವರ ತಂದೆ ಲಕ್ಷ್ಮೀಕಾಂತ ಲೋಯಾ ತಿಳಿಸಿದರು. ಮಗಳ ಆಸಕ್ತಿಯಂತೆ ವೈದ್ಯಕೀಯ ಓದಿಸುತ್ತೇವೆ ಎನ್ನುತ್ತಾರೆ ತಂದೆ. 

ಶ್ರೀನಿತ್ಯಾ ಸಾಧನೆ: ಇನ್ನು ಪ್ರಮಾಣ ಕಾಲೇಜಿನ ಎನ್‌.ಆರ್‌. ಶ್ರೀನಿತ್ಯಾ ವಿಜ್ಞಾನ ವಿಭಾಗದಲ್ಲಿ 576 (ಶೇ.96) ಅಂಕ ಪಡೆದಿದ್ದಾರೆ. ಎಸ್‌ಆರ್‌ಪಿಎಸ್‌ ಕಾಲೇಜಿನ ಶ್ರೇಯಾ ಕೂಡ ಶೇ.97 ಅಂಕ ಪಡೆದಿದ್ದಾರೆ. ಸಿಂಧನೂರಿನ ದುದ್ದುಪುಡಿ ಕಾಲೇಜಿನ ವಾಣಿಜ್ಯ ವಿಭಾಗದ ಅಖೀಲಾ 592 (ಶೇ.98.6) ಅಂಕ ಪಡೆಯುವ ಮೂಲಕ ಗಣನೀಯ ಸಾಧನೆ ಮಾಡಿದ್ದಾರೆ.

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.