ವೈದ್ಯರ ಬಳಿಗೆ ವಿದ್ಯಾರ್ಥಿಗಳು
Team Udayavani, Mar 15, 2020, 5:47 PM IST
ರಾಮನಗರ: ನಗರದ ಪಟೇಲ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ವಯಂ ಪ್ರೇರಿತರಾಗಿ ಆಗಮಿಸಿ ತಮಗೆ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದಾರೆ.
ನರ್ಸಿಂಗ್ ಹಾಸ್ಟೆಲ್ನ ವಿದ್ಯಾರ್ಥಿಯೊಬ್ಬ ಮುಂಬೈನಿಂದ ಹಿಂದಿರುಗಿದ್ದ. ಆತ ಆರೋಗ್ಯವಾಗಿಯೂ ಇದ್ದಾನೆ. ಆದರೂ ಕೆಲವು ವಿದ್ಯಾರ್ಥಿಗಳು ಆತ ಸೋಂಕು ಹಚ್ಚಿಕೊಂಡು ಬಂದಿರಬೇಕು ಎಂದು ಅನುಮಾನ ವ್ಯಕ್ತಪಡಿಸಿ ಆತನೂ ಸೇರಿದಂತೆ ಸುಮಾರು 10-15 ಮಂದಿ ವಿದ್ಯಾರ್ಥಿ ಗಳು ಮಾಸ್ಕ್ ಧರಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರ ಬಳಿ ಪರೀಕ್ಷಿಸಿ ಕೊಂಡಿದ್ದಾರೆ. ಕೆಮ್ಮು, ನೆಗಡಿ ಮುಂತಾದ ಯಾವ ಲಕ್ಷಣಗಳು ಇಲ್ಲದಿದ್ದರೂ ತಮ್ಮನ್ನು ಪರೀಕ್ಷೆ ಒಡ್ಡಿಕೊಂಡ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿದ ವೈದ್ಯರಾದ ಡಾ.ಯಶೋಧ, ಡಾ.ರೇವಣ್ಣ, ಮೈಕ್ರೋಬಯಾಲಜಿಸ್ಟ್ ಸೌಮ್ಯ ತಿಳಿ ಹೇಳಿ ಕಳುಹಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸ ಡಾ. ವಿಜಯನರಸಿಂಹ ಅವರ ಸೂಚನೆ ಮೇರೆಗೆ ವೈದ್ಯ ಡಾ.ರಾಜು ರಾಥೋಡ್ ಪಟೇಲ್ ನರ್ಸಿಂಗ್ ಶಾಲೆಯ ಹಾಸ್ಟೆಲ್ಗೆ ತೆರಳಿ ವೈರಸ್ ಬಗ್ಗೆ, ಅದು ಹರಡುವ ವಿಧಾನದ ಬಗ್ಗೆ ಪಠ ಮಾಡಿ, ಧೈರ್ಯ ತುಂಬಿ ಬಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಎ.ಜೆ.ಸುರೇಶ್, ಕೆಲವು ವಿದ್ಯಾರ್ಥಿಗಳು ಆತಂಕಗೊಂಡು ತಾವಾಗಿಯೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಂಡಿದ್ದಾರೆ. ಮುಂಬೈನಿಂದ ಹಿಂದಿರುಗಿದ ವಿದ್ಯಾರ್ಥಿ ಆರೋಗ್ಯವಾಗಿದ್ದಾನೆ. ಇಡೀ ಕ್ಯಾಂಪಸ್ನಲ್ಲಿ ಸ್ವತ್ಛತೆ ಕಾಪಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ