ಉತ್ತಮ ಫಸಲು ನಿರೀಕ್ಷೆಯಲ್ಲಿದ್ಧ ರೈತರಿಗೆ ಭಾರೀ ನಿರಾಸೆ!
Team Udayavani, Oct 31, 2019, 12:25 PM IST
ಸಂಡೂರು: ತಾಲೂಕಿನಾದ್ಯಂತ ರೋಹಿಣಿ ಮಳೆಗೆ ಬಿತ್ತಿದ ಜೋಳ ಅಲ್ಪ ಸ್ವಲ್ಪ ಬೆಳೆದಿದ್ದು, ಅವುಗಳನ್ನು ಹೊಲಗಳಲ್ಲಿಯೇ ಗೂಡು ಹಾಕಿ ರಕ್ಷಿಸಿಕೊಳ್ಳುವ ಪ್ರಯತ್ನ ರೈತರು ನಡೆಸಿದರೂ ಸಹ ಅದು ಫಲಕಾರಿಯಾಗಿಲ್ಲ.
ಹೌದು, ನಿರಂತರ ಮಳೆಯಿಂದ ಗೂಡು ಹಾಕಿದ ಜೋಳದ ಬೆಳೆಯ ಗೂಡುಗಳು ಮೊಳಕೆಯೊಡೆದು ನಷ್ಟವಾಗಿದ್ದು, ಸಜ್ಜೆ, ನವಣೆ, ನೆಲಕಚ್ಚಿವೆ. ಅಲ್ಲದೆ ಮೆಕ್ಕೆ ಜೋಳ ಉತ್ತಮ ಬೆಳೆ ಬಂದಿದೆ. ಅದರೆ ಅವುಗಳನ್ನು ಕಾಳು ಮಾಡಿ ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ.
ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ದುಸ್ಥಿತಿ ಉಂಟಾಗಿದೆ. ಬಹಳಷ್ಟು ಹಳ್ಳಿಗಳಲ್ಲಿ ಒಕ್ಕಲು ಕಣಗಳಿಲ್ಲದೇ ರಸ್ತೆಗಳಲ್ಲಿಯೇ ಕಣಗಳನ್ನು ಮಾಡುತ್ತಿದ್ದಾರೆ. ಇದರಿಂದ ತಕ್ಷಣಕ್ಕೆ ಬರುತ್ತಿರುವ ಮಳೆಯಿಂದ ರಸ್ತೆಯಲ್ಲಿಯೇ ತಾವು ಬೆಳೆದ ಧಾನ್ಯಗಳು ನಷ್ಟಕ್ಕೆ ಗುರಿಯಾಗಿವೆ. ಪ್ರಮುಖವಾಗಿ ಜೋಳ ಗೂಡುಗಳಲ್ಲಿಯೇ ಮೊಳಕೆಯೊಡದರೆ, ರಾಗಿ ಬೆಳೆ ಬೆಳೆದು ನಿಂತು ಹೊಲದಲ್ಲಿಯೇ ಉದುರುತ್ತಿವೆ. ಇನ್ನೂ ತಡವಾಗಿ ಬಿತ್ತಿದ ನವಣೆ ನೆಲಕಚ್ಚಿದೆ.
ಮತ್ತೂಂದು ಕಡೆ ಮೆಕ್ಕೆ ಜೋಳ ಪೂರ್ಣ ಪ್ರಮಾಣದಲ್ಲಿ ನೆಲಸಮವಾಗಿ ಬಿದ್ದಿದ್ದು, ವಿಪರೀತ ನಷ್ಟಕ್ಕೆ ಕಾರಣವಾಗಿವೆ. ಇನ್ನೂ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಅವರು ಈ ಬಗ್ಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 60.5 ಹೆಕ್ಟೇರ್ ಪ್ರದೇಶದ ಬೆಳೆ ಮಳೆಯಿಂದ ನಷ್ಟವಾಗಿವೆ. ಅದರಲ್ಲಿ ಪ್ರಮುಖವಾಗಿ ರಾಗಿ 1.10, ಮೆಕ್ಕೆಜೋಳ 52 ಹೆಕ್ಟೇರ್, ಶೇಂಗಾ 1.62 ಹೆ., ಹತ್ತಿ 5.87 ಹೆ. ನಷ್ಟವಾಗಿವೆ. ಅಲ್ಲದೆ ಇತ್ತೀಚೆಗೆ ತಾಲೂಕಿನ ಅಂತಾಪುರ, ಮೆಟ್ರಿಕಿ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯಾಗಿ ಬೆಳೆಯುತ್ತಿದ್ದ ಮೆಣಸಿನಕಾಯಿ ಬೆಳೆ 50 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ನಷ್ಟವಾಗಿವೆ.
ಇದರಿಂದ ರೈತರು ಕೈಗೆ ಬಂದಂತಹ ಬೆಳೆ ಬಾಯಿಗೆ ಬರದೆ ಲಕ್ಷಾಂತರ ಸಾಲಮಾಡಿ ಬೆಳೆದ ಹತ್ತಿ ಬೆಳೆಯೂ ನೀರಿನಲ್ಲಿ ತೋಯಿದು ಬಿಡಿಸಲು ಬರದಂತಾಗಿದೆ.
ಇದರ ಮಧ್ಯದಲ್ಲಿಯೇ ರೋಗಬಾಧೆಯೂ ಸಹ ಕಾಡುತ್ತಿವೆ. ರೈತರು ಕಷ್ಟಪಟ್ಟು ಒಂದು ಕಡೆ ಬಿತ್ತಿದ ಬೆಳೆ ಮಳೆಯಿಲ್ಲದೆ ನಷ್ಟವಾದರೆ, ಮತ್ತೂಂದು ಕಡೆ ವಿಪರೀತ ಮಳೆಯಿಂದ ಕೈಗೆ ಬಂದೆ ಬೆಳೆ ಕೈಗೆ ಸಿಗದಂತಾಗಿದೆ. ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ ನೆಲಕಚ್ಚಿದೆ.
ದಾಳಿಂಬೆ ಹೂ ಉದುರಿದೆ, ಬಾಳೆ ನೆಲಕ್ಕುರುಳಿವೆ. ಒಂದಲ್ಲ ಒಂದು ರೀತಿಯಲ್ಲಿ ರೈತರೂ ಮಾತ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ, ಬೆಳೆ ಬಂದರೂ ಕೈಗೆ ಸಿಗದಾಗಿದೆ. ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಸ್ವಾಮಿ ಹಾಗೂ ತಾ.ಪಂ ಸದಸ್ಯರಾದ ಮೆಘನಾಥ, ರಾಮಾಂಜಿನ ಸಭೆಯಲ್ಲಿ ಒತ್ತಾಯಿಸಿ ಸೂಕ್ತ ಪರಿಹಾರ ಮತ್ತು ನಷ್ಟದ ಸರಿಯಾದ ವರದಿ ಸಲ್ಲಿಸುವಂತೆ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ