ಜಗಳ ಬಿಡಿಸಲು ಹೋದ ಸ್ನೇಹಿತರು: ಇಬ್ಬರ ಬರ್ಬರ ಹತ್ಯೆ
Team Udayavani, Feb 20, 2022, 5:50 PM IST
ಶಿವಮೊಗ್ಗ: ಮನೆಯಲ್ಲಿನ ಜಗಳ ಬಿಡಿಸಲು ಹೋಗಿದ್ದ ಇಬ್ಬರು ಸ್ನೇಹಿತರನ್ನು, ಸ್ನೇಹಿತರೇ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗದ ಸೂಳೆಬೈಲಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಸಲೀಂ (22), ಅಬ್ದುಲ್ (23) ಮೃತಪಟ್ಟ ದುರ್ದೈವಿಗಳು. ಸ್ನೇಹಿತ ಟಿಪ್ಪು ಶನಿವಾರ ರಾತ್ರಿ ತನ್ನ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದ. ಗಲಾಟೆ ಬಿಡಿಸಲು ಹೋದ ಸಲೀಂ ಹಾಗೂ ಅಬ್ದುಲ್ರನ್ನು ತನ್ನ ಮನೆ ವಿಷಯಕ್ಕೆ ತಲೆ ಹಾಕಿದ್ದಾರೆ ಎಂದು ಸಿಟ್ಟಿಗೆದ್ದು ತನ್ನ ಇತರ ಸ್ನೇಹಿತರಾದ ನದ್ದು, ಅಲ್ಲಾಭಕ್ಷಿ, ಜಬೀವುಲ್ಲಾ, ದಾದಾಪೀರ್, ವಸೀಂ, ನಸ್ರುಲ್ಲಾ ಜತೆ ಸೇರಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ದಾದಾಪೀರ್ ಹಾಗೂ ಅಲ್ಲಾಭಕ್ಷಿಯನ್ನು ಬಂಧಿಸಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.