Sagara: ಮರದಲ್ಲಿ ಮೂಡಿದ ಕರ್ನಾಟಕದ ಭೂಪಟ!
Team Udayavani, Nov 2, 2023, 3:31 PM IST
ಸಾಗರ: ಇಲ್ಲಿನ ಸಿದ್ದಿವಿನಾಯಕ ವುಡ್ ವರ್ಕ್ಸ್ನ ವಕ್ವಾಡಿ ಗಣೇಶ್ ಆಚಾರ್ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಾಡುಜಾತಿ ಮರದಿಂದ ತಯಾರಿಸಿದ ಕರ್ನಾಟಕ ಭೂಪಟ ಸಾಗರದ ಜನರ ಗಮನ ಸೆಳೆಯಿತು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆಟೋ ಚಾಲಕರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಭೂಪಟವನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.
ಒಂದೇ ಕಾಡು ಜಾತಿ ಹಲಗೆಯಲ್ಲಿ ಸುಮಾರು ಅರವತ್ತೆರಡು ಇಂಚು ಎತ್ತರ, ಮೂವತ್ತೆರಡು ಇಂಚು ಅಗಲವಿದ್ದು, ಎರಡು ಇಂಚು ದಪ್ಪದಲ್ಲಿ ವಿಶೇಷವಾಗಿ ಕರ್ನಾಟಕ ಭೂಪಟವನ್ನು ರಚನೆ ಮಾಡಲಾಗಿತ್ತು. 31 ಜಿಲ್ಲೆಗಳ ಹೆಸರನ್ನು ಶಿವಾನೆ ಮರದಲ್ಲಿ ಕೆತ್ತನೆ ಮಾಡಿ ಅಂಟಿಸಲಾಗಿತ್ತು. ಇಷ್ಟು ಎತ್ತರದ ಕರ್ನಾಟಕ ಭೂಪಟವನ್ನು ಮೊದಲ ಬಾರಿಗೆ ರಚಿಸಲಾಗಿದೆ ಎನ್ನುವ ಹೆಗ್ಗಳಿಕೆಗೆ ವಕ್ವಾಡಿ ಗಣೇಶ್ ಆಚಾರ್ಯ ಪಾತ್ರರಾದರು.
ಈ ವಿಶೇಷ ಆಕರ್ಷಣೆಯ ಕರ್ನಾಟಕ ಭೂಪಟವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿ ಗಣೇಶ್ ಆಚಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು
BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್