ಸಾಗರ: ಯಾತ್ರಿ ನಿವಾಸ್ ಲೋಕಾರ್ಪಣೆಗೆ ಈಗಲೂ ಕಾಲ ಕೂಡಿ ಬಂದಿಲ್ಲ!
Team Udayavani, Feb 15, 2022, 3:14 PM IST
ಸಾಗರ: ತಾಲೂಕಿನ ಕೆಳದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚಾಯ್ತಿ ಕಾರ್ಯಾಲಯದ ಹಿಂಭಾಗದಲ್ಲಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣವಾಗಿದ್ದರೂ ಪ್ರವಾಸಿಗರ ಬಳಕೆಗೆ ದೊರಕುತ್ತಿಲ್ಲ. ಐತಿಹಾಸಿಕ ಪ್ರಸಿದ್ಧ ಸ್ಥಳವಾದ ಕೆಳದಿಯಲ್ಲಿ ಯಾತ್ರಿ ನಿವಾಸ್ ನಿರ್ಮಾಣ ಹಲವು ಕಾರಣಗಳಿಂದ ಯೋಗ್ಯ ಕಾರ್ಯ. ಆದರೆ ಕಟ್ಟಡ ಲೋಕಾರ್ಪಣೆಯಾಗದ ಕಾರಣ ಸದ್ವಿನಿಯೋಗವಾಗುತ್ತಿಲ್ಲ.
ಶೌಚಾಲಯ ಮತ್ತು ಯಾತ್ರಿ ನಿವಾಸ್ ನಿರ್ಮಾಣ ಸಂಬಂಧ ಸರಕಾರದಿಂದ 2015 ರ ಮಾರ್ಚ್ 16 ರಂದು ಆದೇಶವಾಗಿದೆ. ಸರ್ಕಾರದ ಪ್ರವಾಸೋದ್ಯಮ ಇಲಾಖೆ 2018 ರಲ್ಲಿ ಈ ಕಟ್ಟಡದ ಕಾಮಗಾರಿ ಪ್ರಾರಂಭಿಸಿದೆ. 2021 ರಲ್ಲಿ ಕಾಮಗಾರಿ ಮುಗಿದಿದೆ. ಇಲಾಖೆಯ ಸುಮಾರು 50 ಲಕ್ಷ ರೂ. ಅನುದಾನದಲ್ಲಿ ಈ ಕಟ್ಟಡ, ಶೌಚಾಲಯ ನಿರ್ಮಾಣವಾಗಿದೆ. ಸುಸಜ್ಜಿತ ಕಟ್ಟಡ ಪ್ರವಾಸಿಗಳಿಗೆ ಬಳಕೆಗೆ ದೊರಕುತ್ತಿಲ್ಲ. ಸುತ್ತಲೂ ಕಾಡುಗಿಡಗಳು ಬೆಳೆದಿದ್ದು, ಸ್ಥಳೀಯ ಪಂಚಾಯ್ತಿ ಒಂದೆರಡು ಬಾರಿ ಸ್ವಚ್ಛತೆ ಕಾರ್ಯ ಮಾಡಿಕೊಟ್ಟಿದೆ.
ತಂಗುವ ಕೊಠಡಿಗಳು, ಶೌಚಾಲಯ ಸೌಲಭ್ಯ ರೂಪಿಸಲಾಗಿದೆ. ಆಕರ್ಷಕ ಹಿರೇ ಕೆರೆಯ ಮೋಹಕ ದೃಶ್ಯ ಕಾಣಸಿಗುವ ಸ್ಥಳದಲ್ಲಿ ಕಟ್ಟಡವಿದೆ. ಸಂಪರ್ಕ ರಸ್ತೆ ಆಗಬೇಕಿದೆ. ಸ.ನಂ. 172ರಲ್ಲಿನ 1 ಎಕರೆ ವ್ಯಾಪ್ತಿಯ ಜಾಗದ ಪಕ್ಕಾಪೋಡಿ ಆಗಬೇಕಾಗಿದೆ. ಕಟ್ಟಡಕ್ಕೆ ವಿದ್ಯುತ್ ಹಾಗೂ ನೀರಿನ ಸೌಕರ್ಯದ ವ್ಯವಸ್ಥೆ ಸಹ ಆಗಬೇಕಿದೆ.
ಇದೇ ರೀತಿ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ಸಹ ಇಲಾಖೆಯ ಯಾತ್ರಿ ನಿವಾಸ್ ಕಟ್ಟಡ 5 ವರ್ಷಗಳ ಕಾಲ ಲೋಕಾರ್ಪಣೆ ಭಾಗ್ಯ ಕಂಡಿರಲಿಲ್ಲ. ಅಂತಿಮವಾಗಿ ಶಾಸಕ ಎಚ್.ಹಾಲಪ್ಪ ಹರತಾಳು, ಅಧಿಕಾರಿಗಳು ವರದಹಳ್ಳಿಯ ಶ್ರೀಧರ ಮಹಾಮಂಡಲದ ಪರಸ್ಪರ ಸಮಾಲೋಚನೆಯ ಪರಿಣಾಮದಿಂದ ಲೋಕಾರ್ಪಣೆಯಾಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯ ಇಂದಿನ ತಾರೀಖಿನ ತನಕ ಲಭ್ಯವಾಗಿಲ್ಲ.
ಪ್ರವಾಸಿಗರ ಸಂಖ್ಯೆ ಹೆಚ್ಚಳವಿರುವ ಹಿನ್ನೆಲೆಯಲ್ಲಿ ಯಾತ್ರಿನಿವಾಸ್ ಸೌಲಭ್ಯ ಬಹಳ ಪ್ರಯೋಜನಕಾರಿ. ಇಲಾಖೆ ಆಡಳಿತಾತ್ಮಕ ಕಾರ್ಯಗಳನ್ನು ಶೀಘ್ರ ಪೂರೈಸಿ, ನಿರ್ವಹಣೆಯ ಹೊಣೆಗಾರಿಕೆ ತೀರ್ಮಾನಿಸಬೇಕಾಗಿದೆ. ಪ್ರವಾಸಿಗರಿಗೆ ಸುಸಜ್ಜಿತದ ಕಟ್ಟಡ ಸೌಲಭ್ಯ ದೊರಕುವಂತೆ ಅನುಕೂಲ ಮಾಡಿಕೊಡಬೇಕಿದೆ.
ಕೆಳದಿಯಲ್ಲಿನ ಇಲಾಖೆ ನಿರ್ಮಿಸಿರುವ ಯಾತ್ರಿ ನಿವಾಸ್ ನಿರ್ವಹಣೆ ಸಂಬಂಧ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಗ್ರಾಪಂಗೆ ವಹಿಸಿಕೊಡುವ ಆದೇಶ ಕೋರಿ, ನಿರ್ದೇಶಕರಿಗೆ ಪತ್ರ ಸಲ್ಲಿಸಿದೆ. ಸೂಚನೆ ಬಂದ ತಕ್ಷಣ ಉದ್ಘಾಟನೆ, ಹಸ್ತಾಂತರ ಮುಂತಾದವುಗಳ ಸಂಬಂಧ ಕ್ರಮ ತೆಗೆದುಕೊಳ್ಳಲಾಗುವುದು.– ರಾಮಕೃಷ್ಣ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ,ಶಿವಮೊಗ್ಗ
ಅಧಿಕಾರಿ, ಜನಪ್ರತಿನಿಗಳ ವಿಳಂಬ ಧೋರಣೆಯಿಂದಾಗಿ ಸುಸಜ್ಜಿತ ಕಟ್ಟಡ ಪಾಳು ಬಿದ್ದಿದೆ. ಸುತ್ತಲು ಕಾಡುಗಿಡಗಳು ಬೆಳೆದಿವೆ. ಉದ್ಘಾಟನೆ ಭಾಗ್ಯವಿಲ್ಲ; ಅನುದಾನ ವೆಚ್ಚ ವ್ಯರ್ಥವಾಗಿದೆ. ಶೀಘ್ರ ಉದ್ಘಾಟನೆ ಮಾಡಿ, ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಬೇಕು.– ಈ .ರಮೇಶ ಕೆಳದಿ, ಅಧ್ಯಕ್ಷರು, ಪ್ರಗತಿಪರ ಯುವ ಒಕ್ಕೂಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ
Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು
Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ
Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್