473 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ಸಿಟಿ ಯೋಜನೆ
Team Udayavani, Jan 19, 2022, 9:46 PM IST
ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ473 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ನಗರವನ್ನುಸ್ವತ್ಛ ಹಾಗೂ ಸುಂದರವಾಗಿ ರೂಪಿಸಲಾಗುವುದುಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಿಸಿದ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. 61ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿವೆ.
ಇನ್ನುಳಿದ ಕಾಮಗಾರಿಗಳನ್ನು ಕಾಲಮಿತಿಯಲ್ಲಿಪೂರ್ಣಗೊಳಿಸುವುದಾಗಿ ಹೇಳಿದರು.ಕುವೆಂಪು ರಸ್ತೆ ಕಾಮಗಾರಿ ಕೂಡಪ್ರಗತಿಯಲ್ಲಿದ್ದು, ಇನ್ನು 10 ದಿನಗಳಲ್ಲಿ ಆ ಕೆಲಸಕೂಡ ಮುಕ್ತಾಯವಾಗಲಿದೆ. ಈಗಾಗಲೇಅಭಿವೃದ್ಧಿಪಡಿಸಿರುವ ಪಾರ್ಕ್ಗಳು ಕೂಡ ಅತ್ಯಂತಸುಂದರವಾಗಿ ನಿರ್ಮಾಣವಾಗಿವೆ.
ಅವುಗಳನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿತಿಳಿಸಿದರು. ರಾಜ್ಯದಲ್ಲಿ ಶಿವಮೊಗ್ಗ ನಗರಅಭಿವೃದ್ಧಿಯಲ್ಲಿ 14 ನೇ ಸ್ಥಾನದಲ್ಲಿದೆ. 100ಬಸ್ ಶೆಲ್ಟರ್ ನಿರ್ಮಿಸಲು ಉದ್ದೇಶಿಸಿದ್ದು,46 ಪೂರ್ಣಗೊಂಡಿವೆ. 26 ಕಾಮಗಾರಿಗಳುಮುಗಿದಿದ್ದು, ಕೆಲವು ಕಾಮಗಾರಿಗಳುಅಂತಿಮ ಹಂತದಲ್ಲಿವೆ. ಇವುಗಳನ್ನು ತ್ವರಿತವಾಗಿಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.ನಗರದ ವಿವಿಧ ಕಡೆ ರಸ್ತೆ, ಚರಂಡಿ, ಫುಟ್ ಪಾತ್ಸೇರಿದಂತೆ ವಿವಿಧ ಕಡೆ ಕಾಮಗಾರಿ ಪರಿಶೀಲನೆನಡೆಸಿದ ಸಚಿವರು ಕಾಮಗಾರಿಯಲ್ಲಿ ಗುಣಮಟ್ಟಕಾಯ್ದುಕೊಳ್ಳಬೇಕೆಂದು ಸೂಚಿಸಿದರು.
ಕೆಲವೆಡೆಕಾಮಗಾರಿ ವಿಳಂಬ ಲೋಪ ಕಂಡು ಬಂದಹಿನ್ನಲೆಯಲ್ಲಿ ಅಧಿ ಕಾರಿಗಳನ್ನು ತರಾಟೆಗೆತೆಗೆದುಕೊಂಡರು. ಸಚಿವರು ಅಶೋಕ ವೃತ್ತದಿಂದಆಲ್ಕೊಳ ವೃತ್ತದವರೆಗೆ ರಸ್ತೆ, ಸುವರ್ಣ ಸಂಸƒRತಿಭವನ, ಶಿವಶಂಕರ್ ಗ್ಯಾರೇಜ್ ಹಿಂಭಾಗದಕನ್ಸರ್ ವೆನ್ಸಿ, ಕುವೆಂಪು ರಸ್ತೆ ಸೇರಿದಂತೆ ಇತರಕಡೆ ಕಾಮಗಾರಿ ಪರಿಶೀಲಿಸಿದರು. ಮೇಯರ್ಸುನಿತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕಎಸ್.ಎನ್. ಚನ್ನಬಸಪ್ಪ, ಜ್ಞಾನೇಶ್ವರ್, ಆಯುಕ್ತಚಿದಾನಂದ ವಠಾರೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ