ತ್ರಿವಿಧ ದಾಸೋಹಿ ಜನ್ಮದಿನಕ್ಕೆ ಶ್ರೀಮಠ ಸಜ್ಜು


Team Udayavani, Apr 1, 2021, 3:31 PM IST

shree mata

ತುಮಕೂರು: ಸಿದ್ಧಗಂಗೆಯ ಸಿದ್ಧಿ ಪುರುಷರಾದಪದ್ಮಭೂಷಣ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಅವರ 114ನೇ ವರ್ಷದ ಜಯಂತಿ ಹಾಗೂಗುರುವಂದನೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳುನಡೆದಿದ್ದು, 111 ವರ್ಷಗಳ ಕಾಲ ಬದುಕಿ ಸಾರ್ಥಕಜೀವನ ನಡೆಸಿ ಲಿಂಗೈಕ್ಯರಾಗಿರುವ ಶ್ರೀಗಳು ಇಲ್ಲದಮೂರನೇ ಜಯಂತ್ಯುತ್ಸವ ಇದಾಗಿದ್ದು, ರಾಜ್ಯದವಿವಿಧ ಭಾಗಗಳಿಂದ ಶ್ರೀಮಠಕ್ಕೆ ಅಪಾರ ಸಂಖ್ಯೆಯಭಕ್ತರು ಬರುತ್ತಿದೆ.

ಶ್ರೀಗಳ ಗದ್ದುಗೆಗೆ ವಿಶೇಷಅಲಂಕಾರ ಸಿದ್ಧತೆ ನಡೆದಿದೆ.ಪ್ರತಿ ವರ್ಷ ಸ್ವಾಮೀಜಿಗಳ ಜನ್ಮದಿನದಂದುಶ್ರೀಮಠದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿತ್ತು.ಆದರೆ, ಈ ವರ್ಷ ಕೊರೊನಾ ಸೋಂಕು ವ್ಯಾಪಕವಾಗಿಹರಡುತ್ತಿರುವ ಹಿನ್ನೆಲೆ ಶ್ರೀಮಠದಲ್ಲಿ ಸರಳ ರೀತಿಯಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಭಕ್ತಿಪೂರ್ವಕ ಗುರುವಂದನಾ ಕಾರ್ಯಕ್ರಮವನ್ನುಏರ್ಪಡಿಸಿದ್ದು, ಈ ಹಿಂದೆ ಶ್ರೀಮಠದಲ್ಲಿ ಸ್ವಾಮೀಜಿಗಳಹುಟ್ಟುಹಬ್ಬದ ದಿನದಂದು ಏನೆಲ್ಲ ಕಾರ್ಯಕ್ರಮಗಳುನಡೆಯುತ್ತಿದ್ದವು.

ಅವೆಲ್ಲವೂ ಈ ವರ್ಷವೂನಡೆಯಲಿದ್ದು, ಆದರೆ, ಶ್ರೀಗಳ ಪಾದಪೂಜೆ ಬದಲಿಗೆಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ಅಭಿಷೇಕಗಳುನಡೆಯಲಿದೆ.ಏ.1ರಂದು ಶ್ರೀಗಳ ಹುಟ್ಟುಹಬ್ಬ ಈಗಾಗಲೇನಾಡಿನಾದ್ಯಂತ ಅಪಾರ ಸಂಖ್ಯೆಯ ಭಕ್ತರು ಶ್ರೀಮಠದಲ್ಲಿ ಬೀಡು ಬಿಟ್ಟಿದ್ದಾರೆ. ಪದ್ಮಭೂಷಣ ಲಿಂಗೈಕ್ಯಡಾ.ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಭಕ್ತಿಸಮರ್ಪಿಸಲು ತಯಾರಿ ನಡೆಸಿದ್ದು, ಶ್ರೀ ಸಿದ್ಧಗಂಗಾಮಠದಲ್ಲಿ ಅಲ್ಲದೆ ಇಡೀ ನಗರದಲ್ಲಿ ಶ್ರೀಗಳ ಹಬ್ಬದಸಂಭ್ರಮ ಮನೆ ಮಾಡಿದೆ.

ಶ್ರೀಗಳ ಜಯಂತಿ ಪ್ರಯುಕ್ತ ಶ್ರೀಮಠಕ್ಕೆ ರಾಜ್ಯದವಿವಿಧ ಭಾಗಗಳಿಂದ ಅಪಾರ ಭಕ್ತ ಸಮೂಹಆಗಮಿಸುತ್ತಿದ್ದು, ಮಠದ ಆವರಣದಲ್ಲಿಯೂ ಹಬ್ಬದಸಂಭ್ರಮ ಮನೆ ಮಾಡಿದೆ. ಏ.1ರಂದು ಬೆಳಗ್ಗೆ 5ಗಂಟೆಯಿಂದಲೇ ವಿವಿಧ ಧಾರ್ಮಿಕಕಾರ್ಯಕ್ರಮಗಳೊಂದಿಗೆ ಲಿಂ.ಡಾ.ಶ್ರೀ ಶಿವಕುಮಾರಸ್ವಾಮೀಜಿ ಹುಟ್ಟು ಹಬ್ಬ ಕಾರ್ಯಕ್ರಮ ನಡೆಯಲಿದೆ.

ಶ್ರೀ ಮಠದಲ್ಲಿ ಕಿರಿಯ ಶ್ರೀಗಳು ಬೆಳಗಿನ ಜಾವ 5ಗಂಟೆಗೆ ಶಿವಪೂಜೆ ಮುಗಿಸಿಕೊಂಡು ನಂತರ ಹಿರಿಯಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸುವರು.ನಂತರ ನಾಡಿನ ವಿವಿಧ ಕಡೆಗಳಿಂದ ಶ್ರೀಮಠಕ್ಕೆಆಗಮಿಸಿರುವ ನೂರಾರು ಮಠಗಳ ಮಠಾಧೀಶರಿಂದಗದ್ದುಗೆಗೆ ಪುಷ್ಪಾರ್ಚನೆ ಮೂಲಕ ಸ್ವಾಮೀಜಿಹುಟ್ಟುಹಬ್ಬವನ್ನು ಆಚರಿಸಲಾಗುವುದು.

ನಂತರಶ್ರೀಮಠಕ್ಕೆ ಆಗಮಿಸುವ ಭಕ್ತರು ಸ್ವಾಮೀಜಿಗಳಿಗೆಗುರುವಂದನೆ ಸಲ್ಲಿಸುವರು. ಈ ಸಂದರ್ಭದಲ್ಲಿನಾಡಿನ ವಿವಿಧ ರಾಜಕೀಯ ಗಣ್ಯರು, ಅಧಿಕಾರಿಗಳುಹಾಗೂ ಭಕ್ತಾದಿಗಳು ಆಗಮಿಸಿ ಲಿಂ.ಡಾ.ಶ್ರೀಶಿವಕುಮಾರ ಸ್ವಾಮಿ ಗದ್ದುಗೆಗೆ ಗುರುನಮನ ಸಲ್ಲಿಸಿಆಶೀರ್ವಾದ ಪಡೆಯುವರು. ಈ ಕಾರ್ಯಕ್ರಮಕ್ಕಾಗಿಈಗಾಗಲೇ ಶ್ರೀಮಠದಲ್ಲಿ ಸಿದ್ಧತೆಗಳು ಭರದಿಂದನಡೆದಿದ್ದು, ಬಂದಿರುವ ಭಕ್ತರಿಗೆಲ್ಲ ಪ್ರಸಾದವ್ಯವಸ್ಥೆಯನ್ನು ಶ್ರೀ ಮಠದಿಂದ ಮಾಡಲಾಗಿದ್ದು,ಮಠದಲ್ಲಿ ಸಂಭ್ರಮ ಮನೆ ಮಾಡಿದೆ.

ಭಕ್ತಿ ನಮನಕ್ಕೆ ಸಿದ್ಧತೆ: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಹಿರಿಯ ಶ್ರೀಗಳಾದ ಪದ್ಮಭೂಷಣ ಲಿಂ.ಡಾ. ಶ್ರೀಶಿವಕುಮಾರ ಮಹಾಸ್ವಾಮಿ 114ನೇಜಯಂತ್ಯುತ್ಸವದ ಪ್ರಯುಕ್ತ ಏ.1ರಂದುಗುರುವಂದನಾ ಮಹೋತ್ಸವದ ಅಂಗವಾಗಿಭಕ್ತಿನಮನ ವನ್ನು ವಿಶೇಷವಾಗಿ ನಡೆಸಲು ಸಿದ್ಧತೆಗಳುಪೂರ್ಣಗೊಂಡಿವೆ.

ಎಲ್ಲ ಕಡೆ ಅರವಟ್ಟಿಗೆ: ಬೇಸಿಗೆಯಾಗಿರುವುದರಿಂದಕುಡಿಯುವ ನೀರಿಗಾಗಿ ಎಲ್ಲ ಕಡೆ ಅರವಟ್ಟಿಗೆಮಾಡಲಾಗಿದೆ. ಬರುವ ಭಕ್ತರಿಗೆ ಊಟ ಬಡಿಸಲುಮತ್ತು ಊಟ ತಯಾರಿಸಲು ವ್ಯವಸ್ಥೆ ಮಾಡಲಾಗಿದೆ.ಒಂದು ಕಡೆ ಅಡುಗೆ ಮಾಡಲು 25 ಜನ ಇರುತ್ತಾರೆ.ಊಟ ಬಡಿಸಲು 500 ಜನ ಉಪಾಧ್ಯಾಯರು1,500 ವಿದ್ಯಾರ್ಥಿಗಳು ಕೆಲಸ ನಿರ್ವಹಿಸುವರು.

ಬಿಗಿ ಭದ್ರತೆ: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಕ್ರಮವನ್ನು ವಹಿಸಲಾಗಿದ್ದು, ಅದಕ್ಕಾಗಿ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣಮಾರ್ಗದರ್ಶನದಲ್ಲಿ ಭದ್ರತೆ ಒದಗಿಸಲಾಗಿದೆ. ಮಠಕ್ಕೆಬರುವ ವಾಹನಗಳು ಯಾವ ಯಾವ ಕಡೆಯಿಂದಬರಬೇಕು ಎನ್ನುವ ಬಗ್ಗೆ ಮಾಹಿತಿ ಫ‌ಲಕಗಳನ್ನುಹಾಕಿದ್ದಾರೆ. ಎಲ್ಲ ಕಡೆಯೂ ಭದ್ರತೆ ಹೆಚ್ಚಿಸಿದ್ದಾರೆ.ಕಾರ್ಯಕ್ರಮದಲ್ಲಿ ಯಾವುದೇ ತೊಂದರೆಯಾಗದಂತೆಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಗುರುವಂದನೆ: ತುಮಕೂರು ಜಿಲ್ಲಾ ನಾಗರಿಕಸಮಿತಿಯಿಂದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಜೆ ಗುರುವಂದನಾ ಕಾರ್ಯಕ್ರಮನಡೆಯಲಿದೆ. ಅಲ್ಲಿಯೂ ಪ್ರಸಾದ ವ್ಯವಸ್ಥೆಯನ್ನುಮಾಡಲಾಗಿದೆ.

ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.