ಕೆಳ ಪರ್ಕಳ ರಸ್ತೆಗಾಗಿ 6 ಸಾವಿರ ಲೋಡು ಮಣ್ಣು!
400 ಮೀಟರ್ ರಸ್ತೆ, 7 ಮೀಟರ್ ಎತ್ತರಕ್ಕೇರಿಸಬೇಕಿದೆ
Team Udayavani, May 15, 2022, 10:39 AM IST
ಮಣಿಪಾಲ: ಪರ್ಕಳದಲ್ಲಿ ರಾ.ಹೆ. (169ಎ) ಕಾಮಗಾರಿ ಸಮರೋಪಾದಿಯಲ್ಲಿ ನಡೆಯು ತ್ತಿದ್ದು, ಕೆಳ ಪರ್ಕಳ ತಿರುವು ರಸ್ತೆ ಇರುವುದನ್ನು ನೇರ ರಸ್ತೆಯಾಗಿ ರೂಪಿಸಲಾಗುತ್ತಿದೆ ಇದಕ್ಕೆ ಸುಮಾರು 6 ಸಾವಿರ ಲೋಡ್ ಮಣ್ಣಿನ ಅಗತ್ಯವಿದೆ.
ತಿರುವಿನ ಬದಲಿಗೆ ನೇರ ರಸ್ತೆಗೆ 400 ಮೀಟರ್ ಉದ್ದ ಹೊಸದಾಗಿ ಕಾಮಗಾರಿ ಮಾಡಬೇಕಿದೆ. ಅಲ್ಲದೆ, ಈ ಪ್ರದೇಶ ಸಂಪೂರ್ಣವಾಗಿ ತಗ್ಗಿನಲ್ಲಿ (ಗುಂಡಿಯಿಂದ ಕೂಡಿದೆ) ಇರುವುದರಿಂದ ಸದ್ಯ ಇರುವ ರಸ್ತೆಯ ಎತ್ತರಕ್ಕೆ ತರಬೇಕಾದರೆ ಅಂದಾಜು 6 ಸಾವಿರ ಲೋಡು ಮಣ್ಣು ತುಂಬಿಸಬೇಕಿದೆ. ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿದ್ದ ಎರಡು ತಡೆಯಾಜ್ಞೆ ಪ್ರಕರಣದಲ್ಲಿ ಒಂದು ತೆರವಾಗಿದೆ. ಈಗಾಗಲೇ ನಿರ್ಮಾಣ ಕಾಮಗಾರಿ ಶುರುವಾಗಿದೆ. ಪ್ರಾರಂಭದಲ್ಲಿ ಮಳೆ ನೀರು ಹರಿಯುವ ತೋಡಿನ ಸಂಪರ್ಕ ವ್ಯವಸ್ಥಿತವಾಗಿ ಕಲ್ಪಿಸಬೇಕಿದ್ದು, 80 ಮೀಟರ್ ಉದ್ದದ ತೋಡಿನ ಕೆಲಸ ನಡೆಯುತ್ತಿದೆ.
ತಿರುವು, ತಗ್ಗು ಇಲ್ಲದ ನೇರ ರಸ್ತೆ
ಈಗಾಗಲೇ ಪರ್ಕಳದಲ್ಲಿ ಕೆನರಾ ಬ್ಯಾಂಕ್ ಸಮೀಪದ ತಂಪು ಪಾನೀಯ ಘಟಕದವರೆಗೆ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿದೆ. ಇಲ್ಲಿಂದ ನೇರ ಮಾರ್ಗದಲ್ಲಿ ತಿರುವು, ತಗ್ಗು ಇಲ್ಲದೆ ಮಣಿಪಾಲ ನಗರಸಭೆಯ ನೀರಿನ ಟ್ಯಾಂಕ್ ವರೆಗೆ ವ್ಯವಸ್ಥಿತ ರಸ್ತೆ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ತೋಡು ನಿರ್ಮಾಣ ಕಾಮಗಾರಿ ಬಳಿಕ ಜಾಗಕ್ಕೆ ಮಣ್ಣು ತುಂಬಿಸಿ ಎತ್ತರ ಮಾಡಬೇಕಿದೆ. 6ರಿಂದ 7 ಮೀ.ನಷ್ಟು ಎತ್ತರಕ್ಕೆ 400 ಮೀ. ಉದ್ದವೆಂದರೂ 6 ಸಾವಿರ ಲೋಡು ಮಣ್ಣನ್ನು ತುಂಬಿಸಬೇಕು. ಅನಂತರ ಎರಡು ಬದಿಯಲ್ಲಿ ಕಾಂಕ್ರೀಟ್ ಅಥವಾ ಕಲ್ಲಿನಗೋಡೆ ತಡೆಗೋಡೆಯಾಗಿಸಿ ಮೇಲ್ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಈಗಾಗಲೇ ಇದರ ಪೂರ್ವ ತಯಾರಿ ಕೆಲಸಗಳು ನಡೆಯುತ್ತಿವೆ. ಕೆಳ ಪರ್ಕಳದ ತಿರುವಿನ ರಸ್ತೆಯನ್ನು ಸ್ಥಳೀಯರ ಓಡಾಟಕ್ಕೆ ಹಾಗೆ ಉಳಿಸಲಾಗುತ್ತದೆ ಎಂದು ಗುತ್ತಿಗೆ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ನಿರ್ವಿಘ್ನವಾಗಿ ಸಾಗಲಿ
ಆರಂಭದಿಂದಲೂ ಒಂದಲ್ಲ ಒಂದು ಬಗೆಯ ವಿವಾದದಿಂದ ಅಚ್ಚುಕಟ್ಟಾಗಿ ಕಾಮಗಾರಿ ನಡೆಯಲು ಸಾಧ್ಯವಾಗಿರಲಿಲ್ಲ. ಭೂಸ್ವಾಧೀನ, ಪರಿಹಾರ ವಿತರಣೆ ಸಹಿತ ಮೊದಲಾದ ತಾಂತ್ರಿಕ ಕಾರಣಗಳಿಂದ ಇಲ್ಲಿನ ಕಾಮಗಾರಿ ವಿಳಂಬವಾಗುತ್ತಲೇ ಇತ್ತು. ಇನ್ನೂ ಮುಂದೆ ಕಾಮಗಾರಿ ನಿರ್ವಿಘ್ನವಾಗಿ ಸಾಗುವ ಮೂಲಕ ಶೀಘ್ರ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಬೇಕು ಎಂದು ನಾಗರಿಕರು ಆಶಯ ವ್ಯಕ್ತಪಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
MUST WATCH
ಹೊಸ ಸೇರ್ಪಡೆ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ