ಮಹಿಳೆಯರ ಕೈಯಲ್ಲಿ ಅರಳಿದ ಕಲಾಕೃತಿ

ಮಣಿಪಾಲದಲ್ಲಿ ಆವೆ ಮಣ್ಣಿನ ಕಲಾಕೃತಿ ಶಿಬಿರ

Team Udayavani, Oct 12, 2019, 5:27 AM IST

1110UCTP05

ಉಡುಪಿ: ಮಹಿಳೆಯರು ಎಂದಾಕ್ಷಣ ಅಡುಗೆ ಕೋಣೆ ನೆನಪಾಗುತ್ತದೆ. ಜತೆಗೆ ಟಿವಿ ಎದುರು ಗಂಟೆಗಟ್ಟಲೆ ಕುಳಿತು ಧಾರಾವಾಹಿ ನೋಡುತ್ತಾರೆ ಎನ್ನುವ ಭಾವ ಮೂಡುತ್ತದೆ. ಅದರೆ, ಇದನ್ನು ಹುಸಿಗೊಳಿಸಿರುವ ಈ ಮಹಿಳೆಯರು ತಮ್ಮೊಳಗಿನ ಕಲಾಕೃತಿ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಬೆರಗು ಮೂಡಿಸಿದ್ದಾರೆ.

ವೇದಿಕೆ ಮುಖ್ಯ
ಮಹಿಳೆಯರಿಗೆ ಮನೆ ಕೆಲಸ, ಮಕ್ಕಳ ಜವಾಬ್ದಾರಿ ನಿಭಾಯಿಸಿಕೊಂಡು ಕೆಲಸಕ್ಕೆ ಹೋಗುವುದರ ಜತೆಗೆ ಹವ್ಯಾಸದ ಕಡೆ ಗಮನ ಹರಿಸುವುದು ಅಷ್ಟು ಸರಳ ಕೆಲಸವಲ್ಲ. ಅವಳಲ್ಲಿನ ನಿಗೂಢ ಕಲೆ ಅಭಿವ್ಯಕ್ತವಾಗಬೇಕಾದರೆ ಪ್ರೋತ್ಸಾಹ ಹಾಗೂ ವೇದಿಕೆ ಮುಖ್ಯ. ಅನೇಕರಿಗೆ ಸರಿಯಾದ ವೇದಿಕೆ ದೊರಕದೆ ಅದೆಷ್ಟೋ ಪ್ರತಿಭೆಗಳು ಕಣ್ಮರೆಯಾಗಿದೆ.

ಎರಡು ದಿನಗಳ ಶಿಬಿರ
ಮಣಿಪಾಲ ತ್ರಿವರ್ಣ ಕಲಾ ಕೇಂದ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಆವೆಮಣ್ಣಿನ ಕಲಾಕೃತಿ ಶಿಬಿರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಕಲಾಕೃತಿ ಸೃಷ್ಟಿಸಿ ಸಂಭ್ರಮಿಸಿದರು
ಮಹಿಳೆಯರು ತಮ್ಮ ನಿತ್ಯ ಕೆಲಸವನ್ನು ಬದಿಗಿಟ್ಟು ಬಹಳ ಖುಷಿಯಿಂದ ತಮ್ಮ ಸ್ಮತಿಪಟಲದಲ್ಲಿ ದಾಖಲಾಗಿದ್ದ ಪ್ರಾಣಿ, ಪಕ್ಷಿ , ಹಣ್ಣು, ದೇವರ ಮೂರ್ತಿ, ಹೂವು ಸೇರಿದಂತೆ ವಿವಿಧ ವಸ್ತುಗಳನ್ನು ಅವರ ಸಾಮರ್ಥ್ಯ ಅನುಗುಣವಾಗಿ ಕಲಾಕೃತಿಗಳನ್ನು ಸೃಷ್ಟಿಸಿ ಸಂಭ್ರಮಿಸಿದರು.

ಎಂಜಿನಿಯರಿಂಗ್‌ ಪದವೀಧರೆ
ಮಣಿಪಾಲ ಅಂಬಿಕಾ ಶೆಟ್ಟಿ ಎಂಜಿನಿಯರಿಂಗ್‌ ಪದವೀಧರೆ. ಮಗುವಿಗೆ ಎಳೆಯ ಪ್ರಾಯದಲ್ಲಿ ಚಿತ್ರಕಲೆ ಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಕುಳಿತುಕೊಂಡು ಕಲಾಕೃತಿಯನ್ನು ರಚಿಸುವುದರ ಜತೆಗೆ ಮಗುವಿಗೆ ಕಲಿಸುವ ಉದ್ದೇಶವನ್ನು ಹೊಂದಿದ್ದಾರೆ.

ಬ್ಯಾಂಕರ್‌ಗೆ ಗೃಹಾಲಂಕಾರದ ಗುರಿ
ಬ್ಯಾಂಕ್‌ ಉದ್ಯೋಗಿ ಅನುಷಾ ಅವರಿಗೆ ಬಾಲ್ಯ ದಿಂದಲೂ ಚಿತ್ರಕಲಾ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಸಮಯ ಸಿಕ್ಕಾಗ ಚಿತ್ರ ಬಿಡಿಸುತ್ತಾರೆ. ಪ್ರಸ್ತುತ ಪರ್ಕಳ ಬ್ಯಾಂಕ್‌ನಲ್ಲಿ ಉದ್ಯೋಗಿ. ಒತ್ತಡ ಕಡಿಮೆ ಮಾಡಿಕೊಳ್ಳಲು ಕಲಾಕೃತಿ ರಚನಾ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ತಾನು ಸೃಷ್ಟಿಸಿದ ಕಲಾಕೃತಿಯಿಂದ ಮನೆಯನ್ನು ಅಲಂಕರಿಸುವ ಗುರಿ ಹೊಂದಿದ್ದಾರೆ.

ಬಿಡುವಿನ ಅವಧಿಯಲ್ಲಿ ಚಿತ್ರ ಬಿಡಿಸುತ್ತೇನೆ. ಮಣ್ಣಿನಲ್ಲಿ ಕಲಾಕೃತಿಯನ್ನು ರಚಿಸುವ ಬಯಕೆ ಇತ್ತು. ಇದೀಗ ಕಲಾಕೃತಿ ರಚನಾ ಶಿಬಿರ ಹೊಸ ಅವಕಾಶವನ್ನು ನೀಡಿದೆ.
-ಪ್ರಜ್ಞಾ, ವಿದ್ಯಾರ್ಥಿನಿ

ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಶಿಬಿರದಲ್ಲಿ ತರಬೇತಿ ಪಡೆದವರು ಬಿಡುವಿನ ಸಮಯದಲ್ಲಿ ಇಷ್ಟದ ವಸ್ತುಗಳನ್ನು ರಚಿಸಬಹುದು.
-ಹರೀಶ್‌ ಸಾಗ,ತ್ರಿವರ್ಣ ಕಲಾಕೇಂದ್ರ, ಮಾರ್ಗದರ್ಶಕ

75ರಲ್ಲೂ ಕಲಿಕೆಯ ಹಂಬಲ
ಮಣಿಪಾಲದ ನಿವೃತ್ತ ಮುಖ್ಯಶಿಕ್ಷಕ ಡಿ.ವಿ. ಶೆಟ್ಟಿಗಾರ್‌ (75) ಕಳೆದ ಎರಡು ವರ್ಷಗಳಿಂದ ತ್ರಿವರ್ಣ ಚಿತ್ರಕಲಾ ಕೇಂದ್ರದಲ್ಲಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾರೆ. ನಿವೃತ್ತಿ ಜೀವನವನ್ನು ಲವಲವಿಕೆಯಿಂದ ಕಳೆಯಲು ಮಣ್ಣಿನ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಟಾಪ್ ನ್ಯೂಸ್

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.