ಅಂಬೇಡ್ಕರ್ ಯುವಶಕ್ತಿಯ ಹೊಸ ಐಕಾನ್: ಜಯನ್ ಮಲ್ಪೆ
Team Udayavani, Dec 11, 2018, 2:25 AM IST
ಮಲ್ಪೆ: ಅಂಬೇಡ್ಕರ್ ಅನಂತರ ಸಾಮುದಾಯಿಕ, ಸಾಮಾಜಿಕ, ರಾಜಕೀಯ ನಾಯಕತ್ವ ಗುರುತಿಸಿಕೊಳ್ಳುವಲ್ಲಿ ಸೋತಿದ್ದಾರೆ. ಈ ದುರಂತಕ್ಕೆ ದಲಿತರೇ ಹೊಣೆಗಾರರು ಎಂದೆನಿಸುತ್ತದೆ. ಪರಸ್ಪರ ದಲಿತ ಸಂಘಟನೆ, ರಾಜಕಾರಣಿಗಳು, ಹೋರಾಟಗಾರರು, ನೌಕರರು, ಅಧಿಕಾರಿಗಳು, ವಿದ್ಯಾರ್ಥಿಗಳ ನಡುವೆ ಸಾಧ್ಯವಾಗದ ಸಾಮರಸ್ಯದ ಸಂಬಂಧ, ದಲಿತ ಸಮುದಾಯದ ಬಹುತೇಕ ಕೇಡಿಗೆ ಕಾರಣವಾಗಿದೆ. ಅಂಬೇಡ್ಕರ ಪ್ರಬುದ್ಧ ಭಾರತ ಕಟ್ಟಲು ಪ್ರಯತ್ನಿಸುವ ಮೂಲಕ ಅಂಬೇಡ್ಕರ್ ಈ ದೇಶದ ಯುವಶಕ್ತಿಯ ಹೊಸ ಐಕಾನ್ ಆಗುತ್ತಿದ್ದಾರೆ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು. ಅವರು ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಏರ್ಪಡಿಸಿದ ಡಾ| ಬಾಬಾ ಸಾಹೇಬ ಅಂಬೇಡ್ಕರರ 62ನೇ ಮಹಾ ಪರಿನಿರ್ವಾಣ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದಸಂಸದ ಉಡುಪಿ ತಾ| ಸಂಚಾಲಕ ಮಹಾಲಿಂಗ ಕೋಟ್ಯಾನ್ ಮಾತನಾಡಿ ದಲಿತ ನಾಯಕರು ತಮ್ಮ ಭಿನ್ನಾಭಿಪ್ರಾಯ ಬಿಟ್ಟು ದಲಿತ ಸಮಾಜಕ್ಕಾಗಿ ಒಂದಾಗಬೇಕಾಗಿದೆ ಎಂದವರು ತಿಳಿಸಿದರು.
ದಲಿತ ಮುಖಂಡರಾದ ಸುಂದರ್ ಕಪ್ಪೆಟ್ಟು, ಗಣೇಶ್ ನೆರ್ಗಿ, ಸಂಧ್ಯಾ ತಿಲಕ್ರಾಜ್, ಸುರೇಶ್ ಪಾಲನ್ ತೊಟ್ಟಂ, ಶಶಿಕಲಾ ತೊಟ್ಟಂ, ದಿನೇಶ್ ಮೂಡಬೆಟ್ಟು, ಮಂಜುನಾಥ ಕಪ್ಪೆಟ್ಟು, ಸುಶೀಲ್ ಕುಮಾರ್ ಕೊಡವೂರು, ಮೋಹನ್ದಾಸ್ ಮಲ್ಪೆ, ಶಶಿ ಅಮ್ಮುಂಜೆ, ಮಹೇಶ್ ಬಲರಾಮ ನಗರ, ಕೆ. ಶಂಕರ್ ಮಂಡ್ಯ, ದೀಪಕ್ ಕೊಡವೂರು, ಪ್ರಮೀಳಾ ಹರೀಶ್, ಶೇಖರ್ ಮಂಡ್ಯ, ಮಹೇಶ್ ಮೂಡಬೆಟ್ಟು, ಶಶಿ ಕುಮಾರ್ ಮಂಡ್ಯ, ಪ್ರಸಾದ್ ಮಲ್ಪೆ ಉಪಸ್ಥಿತರಿದ್ದರು. ಮಲ್ಪೆ, ನೆರ್ಗಿ, ತೊಟ್ಟಂ, ಬಲರಾಮ ನಗರದವರು ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಅಂಬೇಡ್ಕರ್ ಯುವಸೇನೆಯ ಭಗವಾನ್ ದಾಸ್ ನೆರ್ಗಿ ಸ್ವಾಗತಿಸಿದರು. ಕವಿತಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024
Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ
ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′
Udupi: ವಿಡಿಯೋ ಕರೆ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ
Fraud: ಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ
MUST WATCH
ಹೊಸ ಸೇರ್ಪಡೆ
ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ
Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ
BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Sandalwood; ಎವಿಡೆನ್ಸ್ ಮೇಲೆ ಪ್ರವೀಣ್ ಕಾನ್ಫಿಡೆನ್
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024