ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ
Team Udayavani, Aug 14, 2022, 12:35 AM IST
ಉಡುಪಿ: ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಮಣಿಪಾಲದಲ್ಲಿ ಉದ್ಯಮ ನಡೆಸುತ್ತಿರುವ ತಬಸ್ಸುಮ್ ಅವರು 2022ರ ಜ. 13ರಂದು ಹೊಸಪೇಟೆಯ ನಿವಾಸಿ ಜಿ. ರಾಜ ಹುಸೇನ್ ಅವರನ್ನು ಉಡುಪಿಯ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರಾರ್ ವಿವಾಹವಾಗಿದ್ದರು. ಮದುವೆ ಸಂದರ್ಭದಲ್ಲಿ ಆತನಿಗೆ 1 ವಾಚ್ ಹಾಗೂ 1. 50 ಲ.ರೂ. ನೀಡಲಾಗಿತ್ತು.
ಮದುವೆಯಾದ ವಾರದ ಬಳಿಕ ಆತ ಹಣಕ್ಕಾಗಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈಗಾಗಲೇ ಒಂದು ಮದುವೆ ಯಾಗಿದ್ದ ಆತನ ಮೊದಲ ಹೆಂಡತಿ ಶಹನಾಜ್ ಬೇಗಂ, ಆಕೆಯ ಅಣ್ಣ ಶಬ್ಬೀರ್, ಅಣ್ಣನ ಹೆಂಡತಿ ಶಮಾ ಪರ್ವೀನ್, ಮೊದಲ ಹೆಂಡತಿಯ ಪುತ್ರ ಅಜರುದ್ದೀನ್ ಹಾಗೂ ಇರ್ಫಾನ್ ಅವರು ಮನೆಗೆ ಬಂದು ಚಿನ್ನ ಹಾಗೂ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು.
ವಿಚಾರಿಸಿದಾಗ ಅವರು ರಾಜ ಹುಸೇನ್ ಅವರ ಅಂಗಡಿ ನಷ್ಟದಲ್ಲಿದೆ. ನೀನು ಹಣ ನೀಡಬೇಕು, ಇಲ್ಲದಿದ್ದರೆ ಹೊಸಪೇಟೆಯಲ್ಲಿ ಬಟ್ಟೆ ಅಂಗಡಿ ಹಾಕಬೇಕೆಂದು ತಿಳಿಸಿದ್ದರು. ಅನಂತರ ಬಟ್ಟೆ ಅಂಗಡಿ ಹಾಕಲೆಂದು ಕೈಸಾಲ ಪಡೆದು ಆತನಿಗೆ 3.60 ಲ.ರೂ.ಗಳನ್ನು ನೀಡಿದ್ದೇನೆ. ನಮಗೆ ಸಂಬಂಧಿಸಿದ 2 ಬೈಕ್ಗಳನ್ನೂ ನಮ್ಮ ಇಚ್ಛೆಯ ವಿರುದ್ಧವಾಗಿ ಆತ ಇಟ್ಟುಕೊಂಡಿದ್ದಾನೆ. ಒಂದು ಬಾರಿ 50 ಸಾವಿರ ರೂ., ಮತ್ತೂಂದು ಬಾರಿ 1 ಲ.ರೂ. ನೀಡಲಾಗಿದೆ. ಬಳಿಕ ಜು. 7ರಂದು ಹಬ್ಬದ ಸಲುವಾಗಿ ಹೊಸಪೇಟೆಗೆ ತೆರಳಿ ಹಿಂದಿರುಗಿ ಬಂದ ಬಳಿಕ ರಾಜ ಹುಸೇನ್ ಗಲಾಟೆ ಮಾಡಿ ಮುಖ, ಹೊಟ್ಟೆಗೆ ಕಾಲಿನಿಂದ ತುಳಿದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಬಸ್ಸುಮ್ ಅವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ