ಯೋಗಾಭ್ಯಾಸವೊಂದೇ ಅಲ್ಲ ; ಯೋಗಿಕ ಆಹಾರವೂ ಅತ್ಯವಶ್ಯ


Team Udayavani, Jun 27, 2019, 10:25 AM IST

GANESH-BHAT

ಉಡುಪಿ: “ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಎಲ್ಲರೂ ಕೇಳಿದವರೇ. ಆದರೆ ಊಟ ಬಲ್ಲವರಂತೆ ಊಟ ಮಾಡುವವರಿಲ್ಲ ಅಷ್ಟೆ. ಆಯುರ್ವೇದ ಮತ್ತು ಯೋಗ ಶಾಸ್ತ್ರದಲ್ಲಿ ಆಹಾರ ಮತ್ತು ವಿಹಾರ ಎಂಬ ವಿಭಾಗದಡಿ ಆಹಾರ ಕ್ರಮ ವಿವರಿಸಲಾಗಿದೆ. ಆಧುನಿಕ ವಿಜ್ಞಾನವು ಡಯಟ್‌ ಆ್ಯಂಡ್‌ ನ್ಯೂಟ್ರಿಶಿಯನ್‌ ಎಂದು ಕರೆಯುತ್ತದೆ. ಕಾಬೋìಹೈಡ್ರೇಟ್‌, ಪ್ರೊಟಿನ್‌, ಮಿನರಲ್‌, ವಿಟಮಿನ್‌ ಇತ್ಯಾದಿ- ನಿರ್ದಿಷ್ಟ ಪ್ರಮಾಣದಲ್ಲಿ ಸಮತೂಕದಲ್ಲಿ ಸೇವಿಸಬೇಕು ಎನ್ನುತ್ತದೆ. ಆದರೆ ಇವೆಲ್ಲವೂ ಉಪಯೋಗಕ್ಕೆ ಬರುತ್ತದೆ ಎಂಬ ಖಾತ್ರಿ ಇಲ್ಲ. ನಮ್ಮ ಶರೀರಕ್ಕೆ ಅದರದ್ದೇ ಆದ ಶಕ್ತಿ ಇದೆ. ಅದಕ್ಕೆ ನೀವು ಎಷ್ಟೇ ವಿಟಮಿನ್‌ ಮಾತ್ರೆ ಕೊಟ್ಟರೂ ದೇಹ ಹೊಂದಿಕೊಳ್ಳದಿದ್ದರೆ ಅದು ಮಲಮೂತ್ರದಲ್ಲಿ ಹೊರಗೆ ಹೋಗುತ್ತದೆ. ಹೀಗಾಗಿ ಬ್ಯಾಲೆನ್ಸ್‌ ಡಯಟ್‌ ಎನ್ನುವುದೇ ಅವೈಜ್ಞಾನಿಕ.

ಆಧುನಿಕ ಪದ್ಧತಿಯಲ್ಲಿ ಪ್ರಯೋಗಾಲಯವಿದ್ದರೆ, ಭಾರತೀಯ ಪದ್ಧತಿಯಲ್ಲಿ ನಾಲಗೆಯೇ ಪ್ರಯೋಗಾಲಯ. ಆರು ಬಗೆಯ ರುಚಿಗಳನ್ನು (ಷಡ್ರಸ) ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಬೇಕು. ಇದು ಊಟ ಬಡಿಸುವ ಕ್ರಮದಲ್ಲೇ ಸಂಪ್ರದಾಯವಾಗಿ ಬೆಳೆದು ಬಂದಿದೆ. ಉಪ್ಪನ್ನು ದೂರದಲ್ಲಿ ಸ್ವಲ್ಪ ಹಾಕುತ್ತಾರೆ. ಪಲ್ಯ, ಕೋಸಂಬರಿ ಎಷ್ಟೆಷ್ಟನ್ನು ಹಾಕಬೇಕೆಂಬ ಕ್ರಮವಿದೆ. ಊಟ ಮಾಡುವಾಗ “ಸಾವಕಾಶವಾಗಿ ಊಟ ಮಾಡಿ’ ಎನ್ನುತ್ತಾರೆ. ಇದರ ಅರ್ಥ ಸ+ಅವಕಾಶ ಎಂದು. ಅವಕಾಶವಿರಿಸಿ ಊಟ ಮಾಡಿ ಎಂಬುದು. ಒಂದು ಭಾಗ ಘನ ಪದಾರ್ಥ, ಒಂದು ಭಾಗ ದ್ರವ ಪದಾರ್ಥ ಸೇವಿಸಿ ಇನ್ನೊಂದು ಭಾಗ ಖಾಲಿ ಬಿಡಬೇಕು.

ಹಿತ, ಮಿತ, ಋತದಲ್ಲಿ ಆಹಾರ ಸೇವಿಸಬೇಕು ಎಂದಿದೆ. ಪೋಷಕಾಂಶವಿದೆ ಎಂದು ಹೇಳಿ ರಾಜಸ, ತಾಮಸ ಆಹಾರ ಸೇವಿಸಿದರೆ ಅನಾರೋಗ್ಯ ಉಂಟಾಗುತ್ತದೆ. ಕೆಲವು ವಿಷಮ ಆಹಾರಗಳು ಇವೆ. ಉದಾ: ಹಾಲು- ಬಾಳೆಹಣ್ಣು, ಹುಳಿ ಪದಾರ್ಥ- ಹಾಲು, ಮೀನು – ಹಾಲು, ಬಿಸಿ ಮಾಡಿದ ಜೇನುತುಪ್ಪ ಇತ್ಯಾದಿ. ಬಿಸಿಲಿನಲ್ಲಿ ಬಂದು ಬಿಸಿ ಮಾಡಿದ ಜೇನು ಕುಡಿದರೆ ಸಾವೂ ಸಂಭವಿಸಬಹುದು, ಬೇರೆ ವಿಷವೇ ಬೇಡ. ಹೀಗೆ ಆಹಾರವೇ ಆರೋಗ್ಯಕ್ಕೂ, ಅನಾರೋಗ್ಯಕ್ಕೂ ಕಾರಣವಾಗುತ್ತದೆ.

ಯಾವ ಕಾಲದಲ್ಲಿ ಯಾವ ಆಹಾರ ಸೇವಿಸಬೇಕೆನ್ನುವ ಕ್ರಮವಿದೆ. ಉದಾಹರಣೆಗೆ ಚಾತುರ್ಮಾಸ್ಯವ್ರತದ ಆಹಾರ ಕ್ರಮ ಆ ಕಾಲಕ್ಕೆ ಸೂಕ್ತವಾದುದು. ಹೀಗೆ ದಿನಚರ್ಯೆಯೂ ಇದೆ.  ನಮ್ಮ ಶರೀರದಲ್ಲಿರುವ ಐದು ವಿಭಾಗಗಳಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ ಶರೀರಕ್ಕೆ ಯೋಗಾಸನದ ಮೂಲಕ ಚಿಕಿತ್ಸೆ ಕೊಡಿಸಲು ಸಾಧ್ಯ, ಉಳಿದ ವಿಜ್ಞಾನಮಯ ಮತ್ತು ಆನಂದ ಮಯ ಶರೀರವನ್ನು ತಲುಪಲು ನುರಿತ ಶಿಕ್ಷಕರು ದುರ್ಲಭ.

32 ವರ್ಷಗಳಿಂದ ಯೋಗ ತರಗತಿ
ಉಡುಪಿಯ ಕಡಿಯಾಳಿ ನಿವಾಸಿ ಗಣೇಶ ಭಟ್ಟರು 32 ವರ್ಷಗಳಿಂದ ಯೋಗ ತರಗತಿಗಳನ್ನು “ಯೋಗಧಾಮ’ ಸಂಸ್ಥೆ ಮೂಲಕ ನಡೆಸುತ್ತಿದ್ದಾರೆ. 30 ವರ್ಷ ಒಳಕಾಡು ದೈವಜ್ಞ ಮಂದಿರದಲ್ಲಿ ನಿತ್ಯ ಬೆಳಗ್ಗೆ ಯೋಗ ತರಗತಿ ನಡೆಸಿದ ಭಟ್‌ ಅವರು ಎರಡು ವರ್ಷಗಳಿಂದ ಕಡಿಯಾಳಿಯ ಮನೆಯಲ್ಲಿ ತರಗತಿ ನಡೆಸುತ್ತಾರೆ. ಸಂಜೆ ಚಿಕಿತ್ಸೆಯ ಮಾರ್ಗದರ್ಶನ ನೀಡುತ್ತಾರೆ. ಮಣಿಪಾಲ ಕೆಎಂಸಿ ಯೋಗ ವಿಭಾಗದ ಮೊದಲ ತಂಡದ ವಿದ್ಯಾರ್ಥಿಯಾದ ಇವರು ಯೋಗಿಕ ಆಹಾರ ವಿಹಾರದ ಕುರಿತು ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಇನ್ನಂಜೆ ವಿಷ್ಣುಮೂರ್ತಿ ಹಯವದನಸ್ವಾಮಿ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು.

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.