ಕನಕನಿಗೆ ಅಪಚಾರ:ಹೋರಾಡುವವರ ಜತೆ ನಾನೂ ಭಾಗಿ


Team Udayavani, Nov 13, 2017, 11:37 AM IST

121117Astro08.jpg

ಉಡುಪಿ: ಪೂರ್ವಾಭಿಮುಖನಾಗಿದ್ದ ಶ್ರೀಕೃಷ್ಣ ಕನಕನ ಭಕ್ತಿ ನೋಡಿ ಪಶ್ಚಿಮಾಭಿಮುಖನಾಗಿರುವುದು ಸತ್ಯ. ಆದರೆ ಆ ಬಗ್ಗೆ ಕೆಲವರು ಅಪ ಚಾರ ಎಸಗು ತ್ತಾರೆ. ಅವರ ವಿರುದ್ಧ ಹೋರಾಟ ನಡೆಸು ವವರ ಜತೆಗೆ ನಾನು ಭಾಗಿ ಯಾಗಲು ಸಿದ್ಧನಿದ್ದೇನೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

ಹಾಲುಮತ ಮಹಾಸಭಾದ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕನಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಕೃಷ್ಣ ಮಠದ ಹೊರಗಿರುವ ಕಿಂಡಿಯ ಮೂಲಕ ಕನಕ ಶ್ರೀಕೃಷ್ಣನನ್ನು ನೋಡಿದರೆ, ಒಳ ಗಿರೋದು ಕೃಷ್ಣ ಕನಕನನ್ನು ನೋಡಿ ದರ್ಶನ ಮಾಡಿದ ಕಿಂಡಿ. ಕೃಷ್ಣ ಪಶ್ಚಿಮಕ್ಕೆ ತಿರುಗಿ ದ್ದಾನೆ ಎನ್ನುವುದಕ್ಕೆ ವಾದಿರಾಜರು ಮತ್ತು ವ್ಯಾಸರಾಜರು ಸಾಕ್ಷಿ. ಅವರ ಸ್ತೋತ್ರದಲ್ಲಿಯೂ ಇದರ ಉಲ್ಲೇಖವಿದೆ. ಮಠದ ಒಳಗಿರುವ ಕನಕ ಮೂರ್ತಿಗೆ ಪ್ರತಿದಿನ ಪೂಜೆ ನಡೆಯುತ್ತದೆ. ಶ್ರೀಕೃಷ್ಣ ಯಾವತ್ತಿಗೂ ಹಿಂದುಳಿದ ಭಕ್ತರ ಪರ ವಿರು ತ್ತಾನೆ ಎಂದರು.

ಏಕತೆ ಸಂದೇಶ ನೀಡಿದ ಕನಕದಾಸರು
ಕನಕರು ಬಸವಣ್ಣನಂತೆ ಕ್ರಾಂತಿಕಾರಿಯಾಗಿದ್ದರು. ಹಿಂದುಳಿದ ವರ್ಗದಲ್ಲಿ  ಅವತರಿಸಿದ ಕನಕ ದಾಸರು ಇಡೀ ರಾಜ್ಯಕ್ಕೆ ಏಕತಾ ಸಂದೇಶ ನೀಡಿ ದವರು. ಶ್ರೀಕೃಷ್ಣನನ್ನು ತಿರುಗಿಸುವ ಮೂಲಕ ಸಮಾಜದ ಕಣ್ಣು ತೆರೆಸಿದ್ದಾರೆ. ಶ್ರೀಕೃಷ್ಣ ಪೂರ್ವ ದಿಂದ ಪಶ್ಚಿಮಕ್ಕೆ ತಿರುಗಿದ್ದಾನೆ. ಯುವಜನತೆ ಪಾಶ್ಚಾತ್ಯದಿಂದ ನಮ್ಮ ಸಂಸ್ಕೃತಿಯತ್ತ  ತಿರುಗಬೇಕು ಎಂದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತ ನಾಡಿ, ಯಾವ ಸಮುದಾಯ ತಿರಸ್ಕಾರಕ್ಕೆ ಒಳ ಗಾಗಿ ದೆಯೋ ಇಂದು ಜಾಗೃತವಾಗುತ್ತಿದೆ. ತುಳಿತ ಕ್ಕೊಳಗಾದವರು ದೂರವಾಗುತ್ತಾರೆ ಎಂಬುದನ್ನು ಎಲ್ಲರು ತಿಳಿಯಬೇಕು. ಹಾಲುಮತ ಬಹುದೊಡ್ಡ ಪರಂಪರೆ, ಇತಿಹಾಸ ಹೊಂದಿದೆ. ಆದರೆ ಅದು ಕೈಚೆಲ್ಲಿ ಹೋಗಿದೆ. ಸಮುದಾಯ ರಾಜಕೀಯ, ಸಾಮಾಜಿಕವಾಗಿ ಪ್ರಗತಿ ಕಾಣಬೇಕು. ಆಗ ಮಾತ್ರ ಜಾಗೃತಿಯಾಗಲು ಸಾಧ್ಯ ಎಂದು ಹೇಳಿದರು.

ಹಾಲುಮತ ಮಹಾಸಭಾ ನನ್ನನ್ನು ಉಡುಪಿಗೆ ಬರುವಂತೆ ಮಾಡಿದ್ದು, ಉಡುಪಿ-ಕಾಗಿನೆಲೆಗೆ ಸೇತುವೆಯಾಗಿದೆ. ಪೇಜಾವರ ಶ್ರೀಗಳು ಕನಕನ ವಿಚಾರದ ಕುರಿತಂತೆ ಎಲ್ಲ ಅನುಮಾನಗಳನ್ನು ದೂರ ಮಾಡಿದ್ದಾರೆ ಎಂದರು.

ಬುದ್ಧಿಜೀವಿಗಳಿಂದ ಅಪಚಾರ
ಕೆಲವು ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಕನಕನಭಕ್ತಿಗೆ ಕೃಷ್ಣ ತಿರುಗಿ ನಿಂತಿಲ್ಲ ಎನ್ನುತ್ತಾರೆ. ಆದರೆ ಕನಕನ ಕಿಂಡಿ ಕನಕನ ಪವಾಡ ಇದೆಲ್ಲ ಇತಿಹಾಸ. ಯಾರೂ ಇದನ್ನು ಬದಲಿಸಲು ಸಾಧ್ಯವಿಲ್ಲ. ಕನಕನ ಕಿಂಡಿಯಿಂದ ಉಡುಪಿಗೂ ಕೀರ್ತಿ ಬಂದಿದೆ ಎಂದು ಕಾಗಿನೆಲೆ ಸ್ವಾಮೀಜಿ ಹೇಳಿದರು.

ಶ್ರೀ ಪೇಜಾವರ ಮಠದ ಕಿರಿಯ ಯತಿ, ಸುವರ್ಣಮುಖೀ ಸಂಸ್ಕೃತಧಾಮದ ಸಂಸ್ಥಾಪಕ ಆಚಾರ್ಯ ಡಾ| ಅಮೆರಿಕ ನಾಗರಾಜ್‌, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಮೈಸೂರು ಶಾಸಕ ಎಂ.ಕೆ.  ಸೋಮಶೇಖರ, ವಿಶ್ವನಾಥ್‌, ರಾಜಶೇಖರ ಇಟ್ನಾಳ, ಗಾಜಿಗೌಡ್ರು, ಡಾ| ನಾಗಾಲಕ್ಷ್ಮೀ, ಪಳನಿಸ್ವಾಮಿ, ಪುಷೋತ್ತಮ ಮರಿಗೌಡ, ರಾಮಪ್ಪ, ಆರ್‌. ಶಂಕರ್‌ ಉಪಸ್ಥಿತರಿದ್ದರು. ಮಾಲೇಗೌಡ ಪ್ರಸ್ತಾವನೆಗೈದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು.

ಕನಕ-ಉಡುಪಿಗೆ ಅವಿನಾಭಾವ ಸಂಬಂಧವಿದೆ. ಕಾಗಿನೆಲೆ ಮಠದ ಶಾಖೆಯನ್ನು ಉಡುಪಿಯಲ್ಲಿ ಸ್ಥಾಪಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಈ ವಿಚಾರದ ಕುರಿತಾಗಿ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸುತ್ತೇನೆ. 50 ವರ್ಷದ ಹಿಂದಿನ ಕನಕ ಗುಡಿಯ ಪುನರ್‌ ನಿರ್ಮಾಣಕ್ಕೂ ಅನುದಾನ ತರಲು ಪ್ರಯತ್ನಿಸುತ್ತೇನೆ.
– ಪ್ರಮೋದ್‌ ಮಧ್ವರಾಜ್‌
ಜಿಲ್ಲಾ  ಉಸ್ತುವಾರಿ ಸಚಿವ

ನಿಮ್ಮದು ಗಂಗಾಮತ-ನಮ್ಮದು ಹಾಲುಮತ
ಹಾಲುಮತ ಸಮುದಾಯದ ವತಿಯಿಂದ ಕಾಗಿನೆಲೆ ಶ್ರೀಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಸಮ್ಮಾನಿಸಿ, ನಿಮ್ಮದು ಗಂಗಾಮತ ನಮ್ಮದು ಹಾಲುಮತ. ಯಾವುದೇ ಪ್ರಾಣಿಯೂ ಜನ್ಮತಾಳಿದ ಕೂಡಲೇ ಬೇಕಾ ಗಿರುವುದು ಹಾಲು. ಅದು ಬೆಳೆಯುವಾಗ ಬೇಕಾಗಿರುವುದು ನೀರು. ಹೀಗಾಗಿ ಹಾಲುಮತ-ಗಂಗಾಮತ ಕೂಡಿ ಜಗತ್ತು ಆಳಬಹುದು ಎಂದರು.

 ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕನಕನ ಕಿಂಡಿಯ ಮೂಲಕವೇ ಶ್ರೀಕೃಷ್ಣನ ದರ್ಶನ ಪಡೆದರು. ಆದರೆ ಶ್ರೀಕೃಷ್ಣ ಮಠದೊಳಗೆ ಪ್ರವೇಶಿಸಲಿಲ್ಲ. ಸಾವಿರಾರು ಪೂರ್ಣಕುಂಭ, ಚೆಂಡೆ, ಸ್ತಬ್ಧಚಿತ್ರಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ನಗರದ ಜೋಡುಕಟ್ಟೆಯಿಂದ ಸರ್ವಿಸ್‌ ಬಸ್‌ ನಿಲ್ದಾಣ ಮಾರ್ಗವಾಗಿ ಕಲ್ಸಂಕ ಮೂಲಕ ರಥಬೀದಿಗೆ ಆಗಮಿಸಿ ದರು. ಮಠದ ದಿವಾನ ರಘುರಾಮಾಚಾರ್ಯ ಹೂ ಮಾಲೆ ಹಾಕಿ ಸ್ವಾಗತಿಸಿದರು. 

 ಪೇಜಾವರ ಶ್ರೀಗಳಿಗೆ ಆಹ್ವಾನ
ಪರ್ಯಾಯ ಪೇಜಾವರ ಶ್ರೀಗಳಿಗೆ ಕಾಗಿನೆಲೆ ಶ್ರೀಗಳು ಕರಿಯ ಕಂಬಳಿಯನ್ನು ಹಾಕಿ ಗೌರವಿಸಿ, ಆರೋಗ್ಯಯುತವಾಗಿರುವಂತೆ ಹಾರೈಸಿದರು. 2018 ಫೆಬ್ರವರಿಯಲ್ಲಿ ನಡೆಯುವ ಕಾಗಿನೆಲೆ ಗುರುಪೀಠದ ರಜತಮಹೋತ್ಸವಕ್ಕೆ ಪೇಜಾವರ ಶ್ರೀಗಳಿಗೆ ಆಹ್ವಾನ ನೀಡಿದರು. ಕರಿಯ ಕಂಬಳಿ ನಮ್ಮ ಸಂಸ್ಕೃತಿಯ ಪ್ರತೀಕ. ಕನಕದಾಸರು ಕರಿಯ ಕಂಬಳಿ ಹೊದ್ದು  ಭಕ್ತಿ ಸಾಗರವನ್ನೇ ಹರಿಸಿದ್ದಾರೆ ಎಂದರು.

ಟಾಪ್ ನ್ಯೂಸ್

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MASOCON

MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024

Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

Udupi: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ

Udupi: ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

Sandalwood; ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

MASOCON

MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.