ಕಾರ್ಕಳ – ಉಡುಪಿ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ
Team Udayavani, Dec 1, 2018, 1:25 AM IST
ಕಾರ್ಕಳ: ಕಾರ್ಕಳದಿಂದ ಉಡುಪಿ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಅಯ್ಯಪ್ಪ ನಗರದಿಂದ ಬೈಲೂರು ತನಕದ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಕೇಂದ್ರ ರಸ್ತೆ ಸಾರಿಗೆ ನಿಧಿಯಿಂದ ಮಂಜೂರುಗೊಂಡ ಸುಮಾರು 25 ಕೋ.ರೂ. ಅನುದಾನದ ಕಾಮಗಾರಿಗೆ ಕುಕ್ಕುಂದೂರು ಟಪ್ಪಾಲುಕಟ್ಟೆ ಬಳಿ ಗುದ್ದಲಿಪೂಜೆ ನೆರವೇರಿತು. ವೇ|ಮೂ| ಸದಾಶಿವ ಭಟ್ ಗುದ್ದಲಿ ಪೂಜೆ ನೆರವೇರಿಸಿದರು. ಸಮಾಲೋಚನ ಸಭೆಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಕಾರ್ಕಳವನ್ನು ಸಂಪರ್ಕಿಸುವ ನಾಲ್ಕು ದಿಕ್ಕುಗಳ ರಸ್ತೆಗಳನ್ನು ಈಗಾಗಲೇ ಕೇಂದ್ರದ ರಸ್ತೆ ಸಾರಿಗೆ ನಿಧಿ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗಿದೆ. 1 ವರ್ಷದ ಹಿಂದೆ ಅನುದಾನ ಬಿಡುಗಡೆಗೊಂಡಿದ್ದರೂ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು ಎಂದರು. ಜಾರ್ಕಳ ಮತ್ತು ಪ್ರಮುಖ ಶಿಕ್ಷಣ ಕ್ಷೇತ್ರಗಳ ಬಳಿ ವಿಸ್ತರಣೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಶೀಘ್ರ ಕೆಲಸಕಾರ್ಯಗಳು ನಡೆದು ಜನತೆಗೆ ಅನುಕೂಲವಾಗಲಿ ಎಂದರು.
ಜಿ.ಪಂ. ಸದಸ್ಯರಾದ ಸುಮಿತ್ ಶೆಟ್ಟಿ, ಉದಯ ಕೋಟ್ಯಾನ್, ರೇಶ್ಮಾ ಉದಯ ಶೆಟ್ಟಿ, ಜ್ಯೋತಿ ಹರೀಶ್, ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಸುಧಾಕರ ಶೆಟ್ಟಿ, ಕಮಲಾಕ್ಷ ನಾಯಕ್, ಅಶೋಕ ಶೆಟ್ಟಿ, ಹರೀಶ್ ನಾಯಕ್ ಮರ್ಣೆ, ವಿದ್ಯಾ ಸಾಲ್ಯಾನ್ ಪಳ್ಳಿ, ನಿರ್ಮಲಾ, ಸುಮನಾ ರಾವ್, ಸದಾನಂದ ಪ್ರಭು, ವಸಂತ ಕುಲಾಲ್, ಶ್ವೇತಾ ಶೆಟ್ಟಿ, ರಾಜೇಶ್ ರಾವ್, ಶಿವರಾಮ ಶೆಟ್ಟಿ ಮತ್ತು ತ್ರಿವಿಕ್ರಮ ಕಿಣಿ ಉಪಸ್ಥಿತರಿದ್ದರು. ಅಗಲಿದ ಮಾಜಿ ಕೇಂದ್ರ ಸಚಿವರಾದ ಜಾಫರ್ ಶರೀಫ್ ಮತ್ತು ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾ.ಪಂ. ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್ ಸ್ವಾಗತಿಸಿದರು. ಪ್ರಸಾದ್ ಕುಮಾರ್ ಐಸಿರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ