ಲಾರಿಗೆ ಟ್ಯಾಂಕರ್ ಢಿಕ್ಕಿ; ಚಾಲಕ ಸಾವು
Team Udayavani, May 2, 2019, 6:10 AM IST
ಕಾಪು: ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲೆ°ತಿಸಿದ ಟ್ಯಾಂಕರ್ ಎದುರಿನಿಂದ ಕೋಕ್ ಹೇರಿಕೊಂಡು ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು, ಟ್ಯಾಂಕರ್ ಚಾಲಕ ಮೃತಪಟ್ಟ ಘಟನೆ ರಾ. ಹೆ. 66ರ ಕಟಪಾಡಿ ಜಂಕ್ಷನ್ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.ತಮಿಳುನಾಡು ಸೇಲಂ ನಿವಾಸಿ ಸೆಲ್ವ ಕುಮಾರ್ (41) ಮೃತಪಟ್ಟವ.
ಮಂಗಳವಾರ ಮಧ್ಯರಾತ್ರಿ ಮಂಗಳೂರಿನಿಂದ ಕೋಕ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ ಕಟಪಾಡಿ ಜಂಕ್ಷನ್ ಬಳಿ ಬ್ಯಾರಿಕೇಡ್ ಸಮೀಪದಲ್ಲಿ ನಿಧಾನವಾಗಿ ಸಾಗುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಟ್ಯಾಂಕರ್ ಢಿಕ್ಕಿ ಹೊಡೆ ದಿದೆ.
ಟ್ಯಾಂಕರ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದ ರಲ್ಲಿ ಸಿಲುಕಿ ಒದ್ದಾಡುತ್ತಿದ್ದ ಚಾಲಕನನ್ನು ಹೊರತೆಗೆಯಲು ಸಾರ್ವಜನಿಕರು ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಶ್ರಮಿಸಬೇಕಾಯಿತು.ಬಳಿಕ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯದಲ್ಲೇ ಕೊನೆ ಯು ಸಿರೆಳೆದಿದ್ದಾನೆ. ಸೆಲ್ವ ಕುಮಾರ್ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾನೆ.ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟಪಾಡಿಯಲ್ಲೂ ಕಾಡಿದ ಬ್ಯಾರಿಕೇಡ್!
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಳವಡಿಸಿರುವ ಬ್ಯಾರಿಕೇಡ್ ಮತ್ತೆ ಟ್ಯಾಂಕರ್ ಚಾಲಕನಿಗೆ ಮುಳುವಾಗಿದೆ.ಪೊಲಿಪು ಜಂಕ್ಷನ್ ಸಮೀಪ ಬ್ಯಾರಿಕೇಡ್ಗೆ ಢಿಕ್ಕಿ ಹೊಡೆದಿದ್ದ ಈತ ಕಟಪಾಡಿಯಲ್ಲೂ ಬ್ಯಾರಿ ಕೇಡ್ ಕಾರಣದಿಂದಲೇ ಅಪ ಘಾತಕ್ಕೀಡಾಗಿದ್ದ.ಬ್ಯಾರಿಕೇಡ್ ಇರುವ ಕಾರಣ ಲಾರಿ ಚಾಲ ಕನು ನಿಧಾನವಾಗಿ ಸಾಗುತ್ತಿದ್ದಾಗ ಹಿಂದಿನಿಂದ ಟ್ಯಾಂಕರ್ ಢಿಕ್ಕಿ ಹೊಡೆದಿದೆ.
ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ
ಕುಡಿದ ಮತ್ತಿನಲ್ಲಿ ಟ್ಯಾಂಕರ್ ಚಲಾಯಿಸುತ್ತಿದ್ದ ಸೆಲ್ವ ಕುಮಾರ್ ಗ್ಯಾಸ್ ತುಂಬಿಸಲೆಂದು ಮಂಗಳೂರಿನ ಎಂ.ಆರ್.ಪಿ.ಎಲ್.ನತ್ತ ತೆರಳುತ್ತಿದ್ದ.ಈತ ಪೊಲಿಪು ಜಂಕ್ಷನ್ ಬಳಿ ಯಲ್ಲಿ ವೇಗ ತಡೆಗಾಗಿ ಅಳವಡಿಸಿದ್ದ ಬ್ಯಾರಿ ಕೇಡ್ ಮೇಲೆ ಟ್ಯಾಂಕರ್ ಚಲಾಯಿಸಿದ್ದ. ಈ ಸಂದರ್ಭ ಪೊಲೀಸರ ಕಣ್ತಪ್ಪಿಸುವ ಉದ್ದೇಶದಿಂದ ವಿದ್ಯಾನಿಕೇತನ ಶಾಲೆಯ ಬಳಿ ತಿರುಗಿ ಉಡುಪಿಯತ್ತ ಬರುತ್ತಿದ್ದಾಗ ಅಪಘಾತ ನಡೆಸಿ ಕೊನೆ ಯುಸಿರೆಳೆದಿದ್ದಾನೆ.