ಸಾಗುವಾನಿ ಮರ ಸಾಗಾಟ ಯತ್ನ: ಇಬ್ಬರ ಬಂಧನ
Team Udayavani, Aug 6, 2017, 7:30 AM IST
ಉಡುಪಿ: ಉಡುಪಿಯ ಇನ್ನಂಜೆ ರೈಲು ನಿಲ್ದಾಣದ ಬಳಿ ಇದ್ದ ಸಾಗುವಾನಿ ಮರವನ್ನು ಅಕ್ರಮವಾಗಿ ಕತ್ತರಿಸಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೊಂಕಣ ರೈಲ್ವೇ ರಕ್ಷಣಾ ದಳದವರು ಪತ್ತೆ ಮಾಡಿ ಬಂಧಿಸಿದ್ದಾರೆ.
ಇನ್ನಂಜೆಯ ಗುಣಕರ ಮಂಡೇಡಿ, ಪಾಂಗಾಳ ಸರಸ್ವತಿ ನಗರದ ಸಂಪತ್ ಬಂಧಿತ ಆರೋಪಿಗಳು. ಅವರಿಂದ 50,000 ಬೆಲೆ ಬಾಳುವ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾ ಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಕೊಂಕಣ ರೈಲ್ವೇ ರಕ್ಷಣಾ ದಳದ ನಿರೀಕ್ಷಕ ಶಿವರಾಮ ರಾಥೋಡ್, ಉಪ ನಿರೀಕ್ಷಕ ಸಂತೋಷ್ ಗಾಂವ್ಕರ್, ಸಿಬಂದಿ ಆಶ್ವಥ್, ಗುರುರಾಜ್, ವೇಣು ಮತ್ತು ಲೋಬೋ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ