Shirva: ವಾಟ್ಸಪ್ನಲ್ಲಿ ಮೆಸೇಜ್ ಮಾಡಿ ಆನ್ಲೈನ್ ಮೂಲಕ ಹಣ ಪಡೆದು ವಂಚನೆ
Team Udayavani, Nov 10, 2023, 7:38 PM IST
ಶಿರ್ವ: ಸ್ನೇಹಿತನ ನಂಬರ್ ಹ್ಯಾಕ್ ಮಾಡಿ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸಿ ಆನ್ಲೈನ್ ಮೂಲಕ ರೂ. 98,000/- ಹಣ ಪಡೆದು ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ.
ಶಿರ್ವದಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ಕಚೇರಿ ಹೊಂದಿದ್ದ ರಮಾನಂದ ಅವರು ವಿದೇಶದಲ್ಲಿದ್ದ ಸ್ನೇಹಿತ ಕೋಡು ದಿವಾಕರ ಅವರಿಗೆ ತೆರಿಗೆ ವಿಚಾರದಲ್ಲಿ ಸಲಹೆ ನೀಡು ತ್ತಿದ್ದರು. ನ. 8 ರಂದು ರಮಾನಂದ ಅವರು ಸ್ನೇಹಿತ ದಿವಾಕರ್ ಅವರಿಗೆ ತೆರಿಗೆ ವಿಚಾರದಲ್ಲಿ ಮೆಸೇಜ್ ಮಾಡಿದ್ದು,ಅದಕ್ಕೆ ತಾನು ಮೀಟಿಂಗ್ನಲ್ಲಿ ಇದ್ದೇನೆ ಬಳಿಕ ಹೇಳುತ್ತೇನೆ ಎಂದು ಮೆಸೇಜ್ ಮಾಡಿದ್ದಾರೆ. ಬಳಿಕ ತನಗೆ ಇಂಡಿಯಾದಲ್ಲಿ ಮೆಡಿಕಲ್ ಹೆಲ್ಪ್ಗಾಗಿ ರೂ. 98,000/-ಅವಶ್ಯಕತೆಯಿದ್ದು ನೀಡಿದ ಖಾತೆಗೆ ಹಣ ಕಳುಹಿಸ ಬೇಕು ಎಂದು ಮೆಸೇಜ್ ಮಾಡಿದ್ದಾರೆ.
ರಮಾನಂದ ಅವರು ಆ ಖಾತೆಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಲು ಪ್ರಯತ್ನಿಸಿದಾಗ ಅದು ಕನೆಕ್ಟ್ ಆಗದೇ ಇದ್ದು, ವಾಟ್ಸಪ್ನಲ್ಲಿ ನೀವು ಕಳುಹಿಸಿದ ಖಾತೆಗೆ ಹಣ ಹೋಗುವುದಿಲ್ಲ ಎಂದು ಮೆಸೇಜ್ ಮಾಡಿದಾಗ ಬೇರೊಂದು ಖಾತೆ ನಂಬ್ರ ನೀಡಿದ್ದಾರೆ.
ರಮಾನಂದ ಅವರಿಗೆ ದಿವಾಕರ ಅವರೊಂದಿಗೆ ಹಿಂದಿನಿಂದಲೂ ವ್ಯವಹಾರ ಇದ್ದುದರಿಂದ ಆಸ್ಪತ್ರೆ ವಿಚಾರವನ್ನು ನಂಬಿ ರೂ.98,000/- ಹಣವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದಾರೆ.ಬಳಿಕ ಸ್ವಲ್ಪ ಹೊತ್ತಿನಲ್ಲಿ ಮೊತ್ತ ತಪ್ಪಾಗಿದೆ, ರೂ.5,98,000/- ಹಣ ಕಳುಹಿಸಿ ಎಂದು ಹೇಳಿ ಖಾತೆಯ ವಿವರ ನೀಡಿ ಮತ್ತೆ 5 ಲ.ರೂ. ಕಳುಹಿಸಿ ಎಂದು ಮೆಸೇಜ್ ಮಾಡಿದ್ದಾರೆ. ಇದನ್ನು ನೋಡಿದ ರಮಾನಂದ ಅವರು ತನ್ನ ಖಾತೆಯಲ್ಲಿ ಅಷ್ಟು ಹಣ ಇಲ್ಲ ಎಂದು ಮೆಸೇಜ್ ಮಾಡಿದ್ದು, ಕರೆ ಮಾಡಿದಾಗ ಕನೆಕ್ಟ್ ಆಗಲಿಲ್ಲ. ತಾನು ಮೀಟಿಂಗ್ನಲ್ಲಿ ಇದ್ದೇನೆ ಬಳಿಕ ಕರೆ ಮಾಡುತ್ತೇನೆ ಎಂದ ದಿವಾಕರ್ ಮತ್ತೆ ಕಾಲ್ ಮಾಡಿರಲಿಲ್ಲ.
ದಿವಾಕರ ಅವರು ಯಾವಾಗಲೂ ರಮಾನಂದ ಅವರಿಗೆ ಕೂಡಲೇವಾಪಾಸು ಮೆಸೇಜ್ ಮಾಡುತ್ತಿದ್ದು ಈ ಸಮಯದಲ್ಲಿ ಎಷ್ಟು ಹೊತ್ತಾದರೂ ಮೇಸೇಜ್ ಮಾಡದಿದ್ದುದನ್ನು ಕಂಡು ಸಂಶಯಗೊಂಡು ದಿವಾಕರ ಅವರ ಪತ್ನಿಯ ಮೊಬೈಲಿಗೆ ಮೆಸೇಜ್ ಮಾಡಿದಾಗ ಅವರ ವಾಟ್ಸಪ್ ಹ್ಯಾಕ್ ಆದ ವಿಚಾರ ತಿಳಿದು ಬಂದಿದೆ.
ಕೋಡು ದಿವಾಕರ ಅವರ ವಾಟ್ಸಪ್ನ್ನು ಯಾರೋ ಹ್ಯಾಕ್ ಮಾಡಿ ತಾನೇ ಕೋಡು ದಿವಾಕರ ಎಂದು ನಂಬಿಸಿ ಮೆಸೇಜ್ ಮಾಡಿ ಆನ್ಲೈನ್ ಮೂಲಕ ರೂ. 98,000/- ಹಣ ಪಡೆದು ವಂಚಿಸಿ ಮೋಸ ಮಾಡಿದ್ದಾರೆ ಎಂದು ರಮಾನಂದ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ