ಸಿದ್ದಾಪುರ: ಐತಿಹಾಸಿಕ ಕಾಶಿಕಲ್ಲು ಕೆರೆ ಪುನಶ್ಚೇತನ
ಹೂಳು ತುಂಬಿಹೋಗಿದ್ದ ಜಲಮೂಲಕ್ಕೆ ಸಿಗುತ್ತಿದೆ ಹೊಸ ರೂಪ
Team Udayavani, May 23, 2019, 6:15 AM IST
ಸಿದ್ದಾಪುರ: ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ಕಾಶಿಕಲ್ಲು ಕೆರೆ ಪುನಃಶ್ಚೇತನ ನಡೆಯುತ್ತಿದ್ದು, ಸ್ಥಳೀಯವಾಗಿ ಅಂತರ್ಜಲ ವೃದ್ಧಿಯ ಆಶಾವಾದ ಮೊಳಕೆಯೊಡೆದಿದೆ.
ಕೆರೆಯ ಹೂಳೆತ್ತುವುದರೊಂದಿಗೆ ಶ್ರಮದಾನದ ಮೂಲಕ ಸ್ವತ್ಛತಾ ಕಾರ್ಯ ನಡೆಸಲು ಗ್ರಾಮ ವಿಕಾಸ ಸಮಿತಿ, ಜಲಭಾರತಿ ಕರ್ನಾಟಕ ಮತ್ತು ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದಿವೆ.
ಬಸವಪ್ಪ ನಾಯಕನ ಕೆರೆ
ಕ್ರಿ.ಶ. 1740-1755ರ ಸಮಯ ಸಿದ್ದಾಪುರ ಬಸವಪ್ಪ ನಾಯಕನ ಆಡಳಿತಕ್ಕೆ ಒಳಪಟ್ಟಿದ್ದು ಈವೇಳೆ ಕಾಶಿಕಲ್ಲು ಕೆರೆ ಸೇರಿದಂತೆ ಮುಸುರೆ ಕೆರೆ, ಬ್ರಹ್ಮನ ಕೆರೆ, ಛತ್ರದ ಕೆರೆ, ಬೀದಿಕೆರೆ, ನಾಗತೀರ್ಥ ಕೆರೆ ಹೀಗೆ ಆರು ಕೆರೆಗಳು ಮತ್ತು 600ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಬಾವಿಗಳು ನಿರ್ಮಾಣಗೊಂಡಿದ್ದವು. 6 ಕೆರೆಗಳಲ್ಲಿ ಒಂದಾದ ಬೀದಿಕರೆಯ ಹೂಳನ್ನು ಕಳೆದ ವರ್ಷ ಮೇಲೆತ್ತಲಾಗಿತ್ತು. ಈಗ ಕಾಶಿಕಲ್ಲು ಕೆರೆ ಕೆಲಸ ನಡೆಯುತ್ತಿದ್ದು, ಉಳಿದ 4 ಕೆರೆಗಳ ಪುನಶ್ಚೇತನ ಮಾಡಿದರೆ ಸಿದ್ದಾಪುರಕ್ಕೆ ಸಾಕಷ್ಟು ನೀರು ಉಣಿಸಬಹುದಾಗಿದೆ.
ಅವಗಣನೆಗೆ ತುತ್ತಾಗಿತ್ತು
ಕಾಶಿಕಲ್ಲು ಕೆರೆ ಸುಮಾರು ಒಂದು ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆಯ ಆಳದಿಂದ ಮೇಲ್ಮಟ್ಟದ ತನಕ ಸುಮಾರು 2 ಅಡಿ ಅಗಲದ ಶಿಲೆಕಲ್ಲು ಚಪ್ಪಡಿ ಹಾಸಲಾಗಿದೆ. ಮೇಲ್ಭಾಗದಲ್ಲಿ ಕೆಂಪು ಮುರಕಲ್ಲಿನ ಪ್ರಾಕಾರವಿದೆ. ಆದರೆ ಈ ಕೆರೆ ಬಹುಕಾಲದಿಂದ ಆಡಳಿತದ ನಿರ್ಲಕ್ಷ್ಯದ ಪರಿಣಾಮ ಸುಧಾರಣೆ ಕಂಡಿರಲಿಲ್ಲ. ಇಲ್ಲಿ ಹೂಳು ತುಂಬಿ ಅಂತರ್ಜಲಕ್ಕೂ ಕುತ್ತು ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹೂಳೆತ್ತಲು ಮುಂದಾಗಿದ್ದವು.
ಮಾದರಿಯಾಗಬೇಕು
ಅಂತರ್ಜಲ ವೃದ್ಧಿಗೆ ಕೆರೆ ಅಭಿವೃದ್ಧಿಗೆ ಮುಂದಾಗಿರುವುದು ಉತ್ತಮ ಕೆಲಸ. ಇದಕ್ಕಾಗಿ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ಇದು ಉಳಿದವರಿಗೂ ಮಾದರಿಯಾಗಬೇಕು. ನೀರಿಲ್ಲದ ಈ ದಿನಗಳಲ್ಲಿ ಗ್ರಾಮದಲ್ಲಿರುವ ಪ್ರತಿಯೊಂದು ಕೆರೆಗಳ ಹೂಳೆತ್ತುವ ಕಾರ್ಯ ನಡೆಯಬೇಕು.
-ಡಾ| ನಾರಾಯಣ ಶೆಣೈ, ಉಡುಪಿ ಜಿಲ್ಲಾ ಜಲಭಾರತಿ ಪ್ರಮುಖ
ಮೂಲ ಸ್ವರೂಪ ಉಳಿವು
ಇಲ್ಲಿ ನೀರಿನ ಸಮಸ್ಯೆ ಇದೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಯ ಕಾರ್ಯಕ್ಕೆ ಮುಂದಾಗಿದ್ದೇವೆ. ಪುರಾತನ ಕೆರೆಯಾದುದರಿಂದ ಮೂಲ ಸ್ವರೂಪವನ್ನು ಉಳಿಸುವ ಬಗ್ಗೆಯೂ ಕೆಲಸ ಮಾಡುತ್ತೇವೆ.
-ಚಂದ್ರಾನಂದ ಶೆಟ್ಟಿ, ಉಸ್ತುವಾರಿ, ಶ್ರಮದಾನ ಸಮಿತಿ
– ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್