ಉಡುಪಿ: ಬರಿದಾಗುತ್ತಿದೆ ಸ್ವರ್ಣಾ ನದಿಯ ಒಡಲು
Team Udayavani, May 23, 2019, 6:10 AM IST
ಉಡುಪಿ: ಸಂಘ-ಸಂಸ್ಥೆಗಳು, ನಗರಸಭೆಯ ಮೂಲಕ ಟ್ಯಾಂಕರ್ ನೀರು ಪೂರೈಕೆಯಿಂದಾಗಿ ನಗರದಲ್ಲಿ ನೀರಿನ ಬವಣೆ ಅತ್ಯಲ್ಪ ನೀಗಿದೆಯಾದರೂ ಸ್ವರ್ಣಾ ನದಿಯಲ್ಲಿ ಅಷ್ಟೇ ವೇಗದಲ್ಲಿ ನೀರು ಬತ್ತುತ್ತಿದೆ.
ಪ್ರಸ್ತುತ ಭಂಡಾರಿಬೆಟ್ಟುವಿನಲ್ಲಿ ಪಂಪಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಭಂಡಾರಿಬೆಟ್ಟುವಿನಲ್ಲಿ 1 ಬೋಟ್,ಪುತ್ತಿಗೆ ಸೇತುವೆ ಬಳಿ 3 ಬೋಟ್, ಭಂಡಾರಿಬೆಟ್ಟು-ಪುತ್ತಿಗೆ ನಡುವೆ 2 ಬೋಟ್ ಸಹಿತ ಒಟ್ಟು 6 ಬೋಟ್ಗಳಲ್ಲಿ ಪಂಪ್ ಅಳವಡಿಸಿ ನೀರೆತ್ತುವ ಕೆಲಸ ನಡೆಯುತ್ತಿದೆ.
ನೀರು ಖಾಲಿಯಾದ ಸ್ಥಳಗಳು
ಮೇ 7ರಂದು ಪಂಪಿಂಗ್ ಮೂಲಕ ನೀರೆತ್ತುವ ಕೆಲಸ ಆರಂಭವಾಗಿತ್ತು. ನೀರಿನ ಲಭ್ಯತೆಗೆ ಅನುಗುಣವಾಗಿ ನಗರಕ್ಕೆ ನೀರು ಪೂರೈಸುವ ಕೆಲಸವನ್ನು ನಗರಸಭೆ ಮಾಡುತ್ತಿತ್ತು. ಈಗಾಗಲೇ ಶೀರೂರಿನ ಕೆಳಭಾಗ, ಮಾಣೈ, ಕೊಪ್ಪಳಗುಂಡಿಯಲ್ಲಿ ಪಂಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ನೀರು ಬಹುತೇಕ ಖಾಲಿಯಾಗಿದೆ.
ನೀರು ಲಭ್ಯ ಇರುವ ಸ್ಥಳಗಳು
ಪುತ್ತಿಗೆ ಸೇತುವೆ ಮೇಲ್ಭಾಗದಲ್ಲಿ 2ದಿನಗಳಿಗಾಗುವಷ್ಟು ನೀರಿದೆ. ಪುತ್ತಿಗೆಸೇತುವೆ ಕೆಳಭಾಗ ಹಾಗೂ ಪುತ್ತಿಗೆಮಠದ ಬಳಿ 8ರಿಂದ 10 ದಿನಗಳಿಗೆ ಸಾಕಾಗುವಷ್ಟು ನೀರು ಲಭ್ಯವಿದೆ. ದಿನಕ್ಕೆ 10 ಗಂಟೆಯಷ್ಟು ಕಾಲ ನೀರು ತೆಗೆದರೆ 15 ದಿನಗಳಿಗೆ ನೀರು ಸಾಕಾಗಬಹುದು. 20 ಗಂಟೆಗಳ ಕಾಲ ನೀರು ತೆಗೆಯಲು ಆರಂಭಿಸಿದರೆ 5-6 ದಿನಗಳಿಗಾಗುವಷ್ಟು ಮಾತ್ರ ನೀರು ಲಭ್ಯವಿದೆ.
10 ಎಂಎಲ್ಡಿ ನೀರು ಪೂರೈಕೆ
ನೀರಿನ ಲಭ್ಯತೆಗೆ ಅನುಗುಣವಾಗಿ ನಗರಸಭೆಯು ಆಯ್ದ ವಾರ್ಡ್ಗಳಿಗೆ ನೀರು ಪೂರೈಸುವ ಕೆಲಸ ಮಾಡುತ್ತಿದೆ. ನಗರಕ್ಕೆ 24 ಎಂಎಲ್ಡಿ ನೀರು ಆವಶ್ಯಕತೆಯಿದ್ದು, ಪ್ರಸ್ತುತ 10 ಎಂಎಲ್ಡಿಗಳಷ್ಟು ಪೂರೈಕೆ ಮಾಡಲಾಗುತ್ತಿದೆ. ನೀರಿನ ಮಟ್ಟ 1.80 ಮೀ. ಇದೆ.
ಹೂಳೆತ್ತಲು ಯೋಜನೆ
ಸ್ವರ್ಣಾ ನದಿಯ ಸುಮಾರು 7 ಕಿ.ಮೀ. ಉದ್ದದ ನದಿ ಪಾತ್ರದಿಂದ ಹೂಳೆತ್ತಲು ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಒಪ್ಪಿಗೆ ಸಿಕ್ಕಿದ ತತ್ಕ್ಷಣ ಹೂಳೆತ್ತುವ ಕಾಮಗಾರಿ ಆರಂಭಗೊಳ್ಳಲಿದೆ. ಮಳೆ ಸುರಿದರೂ ಹೂಳೆತ್ತಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ