ಕಿರು ಸೇತುವೆಯಾಗಿ 15 ವರ್ಷಗಳು ಕಳೆದರೂ ಸಂಚಾರ ಸಂಕಷ್ಟ
ಮಡಾಮಕ್ಕಿ ಗ್ರಾಮದ ಎಡ್ಮಲೆ ಕಿರು ಸೇತುವೆಯ ದುಃಸ್ಥಿತಿ
Team Udayavani, Dec 4, 2020, 8:30 AM IST
ಕುಂದಾಪುರ, ಡಿ. 3: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಡಾಮಕ್ಕಿ ಗ್ರಾಮದ ಎಡ್ಮಲೆಯಲ್ಲಿ ಒಂದೂವರೆ ದಶಕದ ಹಿಂದೆ ವಿಶೇಷ ಅನುದಾನದಲ್ಲಿ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಕಿರು ಸೇತುವೆ ನಿರ್ಮಾಣಗೊಂಡು 15 ವರ್ಷಗಳು ಕಳೆದರೂ, ಇನ್ನೂ ಜನ ಸಂಕಷ್ಟದಲ್ಲೇ ಸಂಚರಿಸಬೇಕಾದ ದುಃಸ್ಥಿತಿ ಈ ಕಿರು ಸೇತುವೆಯದ್ದಾಗಿದೆ.
ಊರವರೇ ಪ್ರತಿ ವರ್ಷ ಈ ಕಿರು ಸೇತುವೆಯಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಅಡಿಕೆ ಮರದ ಕಾಲು ಸಂಕವನ್ನು ನಿರ್ಮಿಸುತ್ತಾರೆ. ಅದು ಒಂದು ಮಳೆಗಾಲಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮತ್ತೂಂದು ಮಳೆಗಾಲಕ್ಕೆ ಮತ್ತೆ ಬೇರೆಯೇ ಕಾಲು ಸಂಕ ನಿರ್ಮಿಸಬೇಕಾಗುತ್ತದೆ.
ಹೊಳೆ ದಾಟಲು ಆಧಾರ :
ಇದು ಮಡಾಮಕ್ಕಿ ಕಡೆಯಿಂದ ಎಡ್ಮಲೆ ಕಡೆಗೆ ಸಂಚರಿಸಲು ಅನುಕೂಲವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯಡಿ 15 ವರ್ಷಗಳ ಹಿಂದೆ ಅಂದಾಜು 1.50 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಕಿರು ಸೇತುವೆಯಾಗಿದೆ. ಈ ಸೇತುವೆಯ ಆ ಕಡೆಗೆ ಇರುವುದು 5 ಮನೆಗಳು ಮಾತ್ರ. ಆದರೆ ಈ ಕಿರು ಸೇತುವೆಯಿಲ್ಲದಿದ್ದಲ್ಲಿ ಮಳೆಗಾಲದಲ್ಲಿ ಈ 5 ಮನೆಗಳಿಗೆ ಸಂಪರ್ಕವೇ ಇಲ್ಲದಂತಾಗುತ್ತದೆ. ಇವರಿಗೆ ಇಲ್ಲಿನ ಹೊಳೆ ದಾಟಲು ಇದೇ ಕಿರು ಸೇತುವೆಯೇ ಆಧಾರವಾಗಿದೆ. ಇನ್ನು ಕಿರು ಸೇತುವೆಯ ಈ ಕಡೆ 8-10 ಮನೆಗಳಿದ್ದು, ಅವರು ಕೃಷಿ ಭೂಮಿ, ಮತ್ತಿತರರ ಕೆಲಸ ಕಾರ್ಯಕ್ಕಾಗಿ ಆಚೆ ಹೋಗಲು ಇದೇ ಕಿರು ಸೇತುವೆಯನ್ನು ಅವಲಂಬಿಸಿದ್ದಾರೆ.
2-3 ಸಲ ಪ್ರಸ್ತಾವ :
ಈ ಹಿಂದೊಮ್ಮೆ ಈ ಕಿರು ಸೇತುವೆಯ ಸಂಪರ್ಕ ಸಾಧ್ಯವಾಗಿಸಲು ಕಾಮಗಾರಿಗಾಗಿ 14 ಹಣಕಾಸು ಯೋಜನೆಯಡಿ 90 ಸಾವಿರ ರೂ. ವಿಶೇಷ ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಆ ಅನುದಾನ ಸಾಕಾಗದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಈ ಕಿರು ಸೇತುವೆಗೆ ಸಂಪರ್ಕಕಲ್ಪಿಸುವ ಕುರಿತಂತೆ ಮಡಾಮಕ್ಕಿ ಗ್ರಾಮಸಭೆಯಲ್ಲಿಯೂ ಹಲವು ಬಾರಿ ಪ್ರಸ್ತಾವವಾಗಿದ್ದು, ಪಂಚಾಯತ್ನಿಂದ ಈಗಾಗಲೇ 2-3 ಸಲ ಜಿಲ್ಲಾ ಪಂಚಾಯತ್ಗೆ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುವುದಾಗಿ ತಿಳಿದು ಬಂದಿದೆ.
ಮಡಾಮಕ್ಕಿ ಗ್ರಾಮದ ಎಡ್ಮಲೆಯಲ್ಲಿರುವ ಕಿರು ಸೇತುವೆಯಲ್ಲಿ ಇನ್ನೂ ಸಂಪರ್ಕ ಕಲ್ಪಿಸದಿರುವ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಶೀಘ್ರ ಪರಿಶೀಲನೆ ನಡೆಸಿ, ಪಂಚಾಯತ್ನಿಂದ ಈ ಹಿಂದೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವುದರ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು. – ಪ್ರಭಾಶಂಕರ್ ಪುರಾಣಿಕ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ (ಪ್ರಭಾರ) ಮಡಾಮಕ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ