ಕತ್ತಲಾದರೆ ಮಹಿಳೆಯರಿಗೆ ಇಲ್ಲಿ ನಡೆದಾಡುವುದಕ್ಕೆ ಭಯ
ಸಿಟಿಜನ್ ಸರ್ಕಲ್ -ಕೊಡವೂರು ಮಾರ್ಗ: ಕೆಟ್ಟುಹೋದ ದಾರಿದೀಪ
Team Udayavani, Nov 6, 2019, 4:16 AM IST
ಮಲ್ಪೆ: ಮಲ್ಪೆ ಸಿಟಿಜನ್ ಸರ್ಕಲ್ನಿಂದ ಕೊಡವೂರು ಸಂಪರ್ಕ ರಸ್ತೆಯ ಮಧ್ಯೆ ಸುಮಾರು ಅರ್ಧ ಕಿ. ಮೀ. ದೂರ ರಸ್ತೆಯುದ್ದಕ್ಕೂ ವಿದ್ಯುತ್ ಕಂಬಗಳ ದಾರಿದೀಪ ಕೆಟ್ಟು ಹೋಗಿದ್ದು ಇದರಿಂದ ಪಾದಾಚಾರಿಗಳಿಗೆ ಅಪಾಯ ಎದುರಾಗಾಗಿದೆ.
ಎರಡು ವರ್ಷದಿಂದ ಇಲ್ಲಿ ವಾಹನಗಳು ಕತ್ತಲಲ್ಲಿ ಸಂಚಾರ ಮಾಡುತ್ತಿದೆಯಾದರೂ ವಾಹನ ಚಾಲಕರು, ಜನರು ತಮ್ಮ ಸಮಸ್ಯೆ ಹೇಳದೇ ಸುಮ್ಮನಿರುವುದು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳದಿರುವುದು ಒಂದು ಕಾರಣವಾಗುತ್ತಿದೆ.
ಜಿ.ಪಂ ಇಲಾಖೆಗೆ ಸೇರಿದ ಈ ರಸ್ತೆಯ ಬದಿಯಲ್ಲಿ ಎರಡು ವರ್ಷದ ಹಿಂದೆ ಯು.ಜಿ.ಕೇಬಲ್ ಅಳವಡಿಸಿ ಎತ್ತರದ ಹೊಸ ಕಂಬವನ್ನು ಹಾಕಲಾಗಿತ್ತು. ಆ ಬಳಿಕ ಈ ಹಿಂದೆ ಇದ್ದ ಕಂಬದಲ್ಲಿಯ ದೀಪಗಳು ಉರಿಯುತ್ತಿಲ್ಲ. ಒಂದು ಕಂಬದಲ್ಲಿ ಇದ್ದ ಟ್ಯೂಬ್ಲೈಟ್ ತಂತಿ ಸಮೇತವಾಗಿ ನೇತಾಡುತ್ತಿದ್ದರೂ ಇಲಾಖೆಯ ಕಣ್ಣಿಗೆ ಕಾಣುತ್ತಿಲ್ಲ.
ನಗರಸಭೆಯಾಗಲಿ ಅಥವಾ ಮೆಸ್ಕಾಂ ಇಲಾಖೆಯಾಗಲಿ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಪಾದಾಚಾರಿಗಳು ನಡೆದುಕೊಂಡು ಹೋಗಲು ಕಷ್ಟಕರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ತಿರುವುಗಳಿಂದ ಕೂಡಿದ ರಸ್ತೆಯಾದ್ದರಿಂದ ರಾತ್ರಿ ವೇಳೆ ಅಪಘಾತಕ್ಕೂ ಇನ್ನೊಂದು ಕಾರಣವಾಗಿದೆ.
ಮಹಿಳೆಯರಿಗೆ ನಡೆದಾಡಲು ಭಯ
ಕತ್ತಲಾದ ಮೇಲೆ ಕಗ್ಗತ್ತಲ್ಲಂತೆ ಕಾಣುವ ಈ ಪ್ರದೇಶದಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುವವರಿಗೆ ವಾಹನಗಳು ಸಮೀಪದ ಬಂದರೂ ಗೊತ್ತಾಗುತ್ತಿಲ್ಲ. ಸಂಜೆಯ ಬಳಿಕ ಮಹಿಳೆಯರು ನಡೆದುಕೊಂಡು ಹೋಗುವುದು ಸುರಕ್ಷಿತವಲ್ಲ. ಹಾಗಾಗಿ ಕೆಲಸಕ್ಕೆ ಹೋಗುವ ಮಹಿಳೆಯರನ್ನು ಕರೆದುಕೊಂಡು ಬರಲು ಮನೆಯವರು ಬರಬೇಕಾದ ಪರಿಸ್ಥಿತಿ ಇದೆ.
ಸಂಜೆ 5ಗಂಟೆಯೊಳಗೆ ವ್ಯವಸ್ಥೆ
ಸಮಸ್ಯೆ ಗಮನಕ್ಕೆ ಬಂದಿರಲಿಲ್ಲ. ಬುಧವಾರ ಸಂಜೆ 5ಗಂಟೆಯೊಳಗೆ ದಾರಿದೀಪವನ್ನು ಸರಿಪಡಿಸುವ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು.
-ಆನಂದ ಸಿ. ಕಲ್ಲೋಳಿಕರ್, ಪೌರಾಯುಕ್ತರು ಉಡುಪಿ ನಗರಸಭೆ
ಜವಾಬ್ದಾರಿ ಕಾಣುತ್ತಿಲ್ಲ
ಈ ಪ್ರದೇಶದಲ್ಲಿ ದಾರಿದೀಪ ಉರಿಯದ ಕಾರಣ ಇಲ್ಲಿ ಕದ್ದು ಮುಚ್ಚಿ ಕಸ ತಂದು ಎಸೆಯುವವರಿಗೆ ಸುಲಭವಾಗಿದೆ. ಕತ್ತಲಾದರೆ ಹೆಣ್ಣು ಮಕ್ಕಳು ಈ ದಾರಿಯಲ್ಲಿ ನಡೆಯಲು ಭಯ ಪಡುತ್ತಾರೆ. ನಗರಸಭೆಗಾಗಲಿ, ಮೆಸ್ಕಾಂ ಇಲಾಖೆಗಾಗಲಿ ಕಿಂಚಿತ್ತು ಜವಾಬ್ದಾರಿ ಇರುವಂತೆ ಕಾಣುತ್ತಿಲ್ಲ.
-ಹರೀಶ್ ಕೆ. ಗೋಳಿದಡಿ ಕೊಡವೂರು,ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ