ನಮ್ಮೂರ ಯುವ ಶಕ್ತಿ ಊರಲ್ಲೇ ಉಳಿಯಲು ಸಹಕಾರಿ ಸಂಘಗಳು ನೇತೃತ್ವ ಕೊಡಬೇಕಿದೆ: ಕಾಗೇರಿ
Team Udayavani, May 10, 2022, 2:38 PM IST
ಶಿರಸಿ: ನಮ್ಮೂರಿನ ಯುವಕರು ನಮ್ಮೂರಲ್ಲಿ ಉಳಿಯುವಂತೆ ಆಗಬೇಕು. ಸಹಕಾರಿ ಸಂಘಗಳು ಈ ಬಗ್ಗೆ ಮುಂಚೂಣಿಯಲ್ಲಿ ಕೆಲಸ ಸಾಧಿಸಬೇಕು. ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ಮಂಗಳವಾರ ತಾಲೂಕಿನ ಬಿಸಲಕೊಪ್ಪದ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಲಸೆ ಹೋಗದಂತೆ ಗುಡಿಕೈಗಾರಿಕೆಗೆ ಪ್ರೋತ್ಸಾಹಿಸಬೇಕು. ಹಲಸಿನಕಾಯಿ ಹಪ್ಪಳದಿಂದ ಇತರ ಉತ್ಪನ್ನ ಗುಣಮಟ್ಟಕೆ ಯಂತ್ರೋಪಕರಣಗಳ ಕೊಡುಗೆ ಕೊಡುವಲ್ಲೂ ನೆರವಾಗಬೇಕು. ನಮ್ಮ ಸೊಸೈಟಿ ವ್ಯಾಪ್ತಿಯಲ್ಲಿ ಸ್ವದೇಶಿ ವಸ್ತು ಬಳಕೆಗೆ ಪ್ರೇರಣೆ, ಸರಳ ಜೀವನ ನಡೆಸಲು ಸಾಧ್ಯವಾ, ಸ್ವಚ್ಛತೆ ಆದ್ಯತೆ ಕೊಡಬಹುದಾ ಎಂದೂ ಆಲೋಚಿಸಬೇಕು. ಸಹಕಾರಿ ಸಂಘಗಳು ಆಯಾ ಭಾಗದ ಜವಬ್ದಾರಿ, ನೇತೃತ್ವ ವಹಿಸಬೇಕು. ನಮ್ಮೂರಿಗೆ ಬೇಕಾದ ಕಾರ್ಯಕ್ಕೆ ನಾವು ಸ್ವಾವಲಂಬಿ, ರಾಷ್ಟ್ರಾಭಿಮಾನ ಕಾರ್ಯಕ್ಕೆ ಮುಂದಾಗಿದೆ ಎಂದೂ ಆಶಿಸಿದರು.
ಕಾರ್ಮಿಕ ಸಚಿವ ಶಿವಾರಾಮ ಮಾತನಾಡಿದರು.
ಅತಿಥಿ ವಾಯುವ್ಯ ಸಾರಿಗೆ ಅಧ್ಯಕ್ಷ ವಿ.ಎಸ್.ಪಾಟೀಲ,
ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ಎಪಿಎಂಸಿ ಸದಸ್ಯ ಸುನೀಲ ನಾಯ್ಕ, ಬಿಸಲಕೊಪ್ಪ ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ನಾಯ್ಕ ಆನಗೋಡಕೊಪ್ಪ, ಸಹಾಯಕ ನಿಬಂಧಕ ನಿಂಗರಾಜು ಎಸ್,
ಉಪಾಧ್ಯಕ್ಷ ಟಿ.ಎಂ.ಅಶೋಕ ಕುಪ್ಪಳ್ಳಿ, ನಿರ್ದೇಶಕರಾದ ವಿ.ಎಂ.ಹೆಗಡೆ ಬಿಸಲಕೊಪ್ಪ, ಸತೀಶ ಹೆಗಡೆ, ತಾರಾ ಹೆಗಡೆ ಉಲ್ಲಾಳ, ಪದ್ಮನಾಭ ಭಟ್ಟ, ಅನಂದ ನಾಯ್ಕ, ಪ್ರಭಾವತಿ ಬೀಳೂರು, ತಿಮ್ಮಪ್ಪ ಹೆಗಡೆ, ಹೂವಾ ಗಿರಗಿ, ಮಹೇಂದ್ರ ಭಟ್ಟ ಸಾಲೆಕೊಪ್ಪ, ಪರಶುರಾಮ ಹಸ್ಲರ್ ಇತರರು ಇದ್ದರು.
ಅಧ್ಯಕ್ಷತೆಯನ್ನು ವಹಿಸಿದ ಸೊಸೈಟಿ ಅಧ್ಯಕ್ಷ ಎಸ್.ಎನ್.ಭಟ್ಟ ಕ ವರ್ಗದ ಸೊಸೈಟಿ ಈಗ ಅ ವರ್ಗಕ್ಕೆ ಬಂದಿದೆ. ಸದಸ್ಯರ ಜೊತೆ ಸಂಘವೂ ಬೆಳೆದಿದೆ. ಅನೇಕ ಹೊಸ ಯೋಜನೆ ಕೂಡ ಮಾಡುತ್ತಿದ್ದೇವೆ ಎಂದರು.
ಪ್ರಣತಿ ಸಂಗಡಿಗರು ಪ್ರಾರ್ಥಿಸಿದರು.
ಪ್ರಕಾಶ ಭಾಗವತ ನಿರ್ವಹಿಸಿದರು. ಕಾರ್ಯದರ್ಶಿ ಅಭಿಷೇಕ ಎನ್.ಹೆಗಡೆ ಕಾಟಿಮನೆ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ