ಆರ್ಭಟಿಸಿದ ಬಿರುಗಾಳಿ ಮಳೆ
Team Udayavani, May 3, 2020, 4:57 PM IST
ಹಳಿಯಾಳ: ಪಟ್ಟಣದಲ್ಲಿ ಶನಿವಾರ ಆರ್ಭಟಿಸಿದ ಬಿರುಗಾಳಿ ಆಲಿಕಲ್ಲು ಮಳೆಗೆ ಜನ ತತ್ತರಿಸಿದ್ದಾರೆ. ಗುರುವಾರವೂ ಸಾಯಂಕಾಲ ಭಾರಿ ಬಿರುಗಾಳಿ, ಸಿಡಿಲು, ಗುಡುಗಿನಿಂದ ಕೂಡಿ ಭಾರಿ ವರ್ಷಧಾರೆಯಾಗಿ ಅಪಾರ ಹಾನಿ ಸಂಭವಿಸಿತ್ತು. ಈಗ ಮತ್ತೆ ಶನಿವಾರ ಭಾರಿ ಬಿರುಗಾಳಿಯೊಂದಿಗೆ ಸುಮಾರು ಒಂದೂವರೆ ಗಂಟೆ ಸುರಿದ ಆಲಿಕಲ್ಲು ಮಳೆಗೆ ಅಪಾರ ಹಾನಿಯಾಗಿದೆ.
ಪಟ್ಟಣದ ಅನೇಕ ಬಡಾವಣೆಗಳಲ್ಲಿ ಮನೆಗಳ ಮೇಲಿನ ಶೆಡ್ (ಛಾವಣಿ) ಕಬ್ಬಿಣದ ಎಂಗಲ್ ಸಮೇತ ಹಾರಿ ರಸ್ತೆ ಮೇಲೆ ಬಿದ್ದಿವೆ. 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ವಿಧಾನ ಪರಿಷತ್ ಸದಸ್ಯರ ಕಚೇರಿ, ಸುನೀಲ್ ಹೆಗಡೆ ಅವರ ಪೆಟ್ರೋಲ್ ಪಂಪ್ ಎದುರಿಗೆ, ದುರ್ಗಾನಗರದಲ್ಲಿ ಇನ್ನೂ ಅನೇಕ ಕಡೆಗಳಲ್ಲಿ ಮರಗಳು ಉರುಳಿದ್ದರೆ ಅನೇಕ ಕಡೆಗಳಲ್ಲಿ ಮರಗಳ ಟೊಂಗೆಗಳು ಮುರಿದು ಬಿದ್ದಿವೆ. ಮಳೆ, ಬಿರುಗಾಳಿ ರಭಸಕ್ಕೆ ಹಲವೆಡೆ ಮನೆಗಳಿಗೆ ನುಗ್ಗಿದ ಮಳೆ ನೀರು… ಭಾರೀ ಬಿರುಗಾಳಿ ಮಳೆಗೆ ವಿದ್ಯುತ್ ವ್ಯತ್ಯಯವಾಗಿದ್ದು ಹಳಿಯಾಳ ಕತ್ತಲೆಯಲ್ಲಿ ಮುಳುಗಿದೆ. ಸಾವಿರಾರು ಮರಗಳಲ್ಲಿನ ಮಾವಿನ ಫಸಲು ನೆಲಕಚ್ಚಿ ರೈತರು ಕೋಟ್ಯಂತರ ರೂ ನಷ್ಟ ಅನುಭವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ