Sirsi: ಭ್ರಮಾಲೋಕ ಸೃಷ್ಟಿಸುವ ಮಾಯಾ ಬಜಾರ್ ಸರಕಾರ; ಮಾಜಿ ಸ್ಪೀಕರ್ ಕಾಗೇರಿ ವಾಗ್ದಾಳಿ


Team Udayavani, Jul 25, 2023, 12:50 PM IST

8-sirsi

ಶಿರಸಿ: ರಾಜ್ಯದ ಜನರ ಮುಂದೆ ಹೊಸ ಸರಕಾರವಾಗಿ ಒಂದು‌ ಭ್ರಮಾ‌ ಲೋಕ ಸೃಷ್ಟಿಸಿಕೊಂಡು‌  ಕಾಂಗ್ರೆಸ್ ಸರಕಾರ ಆಡಳಿತ‌ ಪ್ರಾರಂಭಿಸಿದೆ. ಇದೊಂದು ಮಾಯಾ ಭಜಾರ್ ಸರಕಾರ ಎಂದು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ‌ ಕಾಗೇರಿ ಹೇಳಿದರು.

ಅವರು ಜು.25ರ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಕಾಂಗ್ರೆಸ್ ಸರಕಾರ ಸ್ವಾರ್ಥ ಸಾಧಿಸಿಕೊಂಡು‌ ಕೆಲಸ ಮಾಡುತ್ತಿದೆ. ಎರಡುವರೆ ತಿಂಗಳಿಂದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರ ಗೊಂದಲ ಮಯ, ಅಭಿವೃದ್ದಿ ಶೂನ್ಯ ಆಡಳಿತ ಪ್ರಾರಂಭವಾಗಿದೆ. ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ‌ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಸರಕಾರದ ಗ್ಯಾರೆಂಟಿಗಳೇ ಗೊಂದಲದ ಸಾಕ್ಷಿಯಾಗಿದೆ. ಉಳಿದ ಇಲಾಖೆಗಳಲ್ಲೂ ಗೊಂದಲ ಇದೆ. ಮಂತ್ರಿಗಳೂ ತಮ್ಮ ಇಲಾಖೆ ತಿಳಿದುಕೊಳ್ಳುವ ಪ್ರಮುಖ ಪ್ರಯತ್ನ ಮಾಡುತ್ತಿಲ್ಲ. ಜನರಿಗೆ ಬೆಲೆ ಏರಿಕೆ ಬಿಸಿ ಮಾಡಿದ್ದಾರೆ ಎಂದರು.

ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತರಬೇಕಿತ್ತು. ಆದರೆ ಜನರು ಗೊಂದಲರಾಗಿದ್ದಾರೆ. ವಿದ್ಯುತ್ ದರ ಕೂಡ ಏರಿಸಿದ್ದಾರೆ. ಹೇಳಿದಂತೆ ಉಚಿತ ಕೊಡಲಿಲ್ಲ. ಸರಕಾರ ಗಾಯದ‌ ಮೇಲೆ ಬರೆ ಹಾಕಿದ್ದಾರೆ ಎಂದು ಹೇಳಿದರು.

ಬಸ್ ನಲ್ಲಿ ಮಹಿಖೆಯರಿಗೆ ಉಚಿತ ಪ್ರಯಾಣ ಎಂದು ಹೇಳಿದರು. ಆದರೆ ಸರಿಯಾದ ಬಸ್ಸಿಲ್ಲ, ಡ್ರೈವರ್- ಕಂಡಕ್ಟರ್ ಇಲ್ಲ. ಇದರಿಂದ ಅಟೋ ಚಾಲಕರು, ಟೆಂಪೋ ಚಾಲಕರು, ಖಾಸಗಿ ವಾಹನಗಳಿಗೆ ಕಷ್ಟವಾಗಿದೆ. ಒಂದು ಸೌಲಭ್ಯ ಮಾಡುವಾಗ ಇನ್ನೊಂದಕ್ಕೆ ಪರಿಹಾರ ನೋಡಬೇಕು ಎಂದ ಅವರು ಸರಕಾರದಿಂದ ಚಿಕ್ಕಪುಟ್ಟ ವಹಿವಾಟಿನವರಿಗೆ ಸಮಸ್ಯೆ ಆಗುತ್ತಿದೆ ಎಂದರು‌.

ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಇದೆ. ಪೂರ್ವ ಯೋಜಿತ ಸಿದ್ದತೆಯಿಲ್ಲದೇ ಆಡಳಿತ ಗೊಂದಲ‌ ಮಾಡುತ್ತಿದ್ದಾರೆ. ಭ್ರಮೆ ಸೃಷ್ಟಿಸಿ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಎಲ್ಲರೂ ತಲ್ಲೀನರಾಗಿದ್ದಾರೆ ಎಂದರು.

ಭ್ರಷ್ಟಾಚಾರ ಎಲ್ಲೆಡೆ ಇದೆ. ಬಿಜೆಪಿಗೆ 40 ಪರ್ಸೆಂಟ್ ಕಮಿಷನ್ ಏಜೆಂಟ್ ಅಂದರು. ಕಾಂಗ್ರೆಸ್ ಏನಾಯ್ತು? ಜನ ಕಂಗಾಲಾಗಿದ್ದಾರೆ ಎಂದರು.

ಬಡವರಿಗೆ ಹತ್ತು‌ಕೆಜಿ ಅಕ್ಕಿ‌ಕೊಡಬೇಕು ಎಂದಿದ್ದರೆ ಪ್ರಮಾಣ‌ ವಚನ ತೆಗೆದುಕೊಂಡ ಬಳಿಕ‌ವಾದರೂ ಕೇಂದ್ರಕ್ಕೆ ಹೋಗಿ ವಿನಂತಿ ಮಾಡಬೇಕಿತ್ತು ಎಂದ ಅವರು ನಂತರ ಕಾಂಗ್ರೆಸ್ ಸರಕಾರ ರಾಜಕಾರಣ‌ ಮಾಡಿದೆ ಎಂದೂ ವಾಗ್ದಾಳಿ ನಡೆಸಿದರು.

ಬಿಜೆಪಿ‌ ಸರಕಾರ ಮಂಜೂರು‌ ಮಾಡಿಸಿದ ಎಲ್ಲ ಕೆಲಸ ಆಗಬೇಕು. ಈಗಿನ ಶಾಸಕರು ಮಳೆಗಾಲ‌ ಪೂರ್ವ ಸಿದ್ದತೆ ಏನು‌ ಮಾಡಿದ್ದಾರೆ ಎಂದ ಅವರು ರಸ್ತೆ ಹಾಳಾಗಿದೆ, ವಿದ್ಯುತ್ ವ್ಯತ್ಯಾಸ ಆಗುತ್ತಿದೆ. ಜನರ ಕಷ್ಟಕ್ಕೆ ಯಾರೂ‌ ಸ್ಪಂದಿಸುತ್ತಿಲ್ಲ. ಕಿಸಾನ್ ಸಮ್ಮಾನದಲ್ಲಿ 4 ಸಾವಿರ ರೂ. ಕೊಡುತ್ತಿದ್ದರು. ಅದನ್ನು ಕೊನೆಗೊಳಿಸಿದ್ದು ಯಾಕೆ?  ಜನರ ಜೀವನದ ಬಗ್ಗೆ ಕಾಳಜಿ ಇದ್ದವರು ಯಾಕೆ ಬಂದ್‌ ಮಾಡಿದರು ಎಂದು ಪ್ರಶ್ನಿಸಿದ ಅವರು ವಿದ್ಯಾ ನಿಧಿ ಯಾಕೆ ಬಂದ್‌ ಮಾಡುತ್ತಾರೆ?  ವಾಹನ ತೆರಿಗೆ ಕೂಡ ಯದ್ವಾತದ್ವಾವಾಗಿ ಏರಿಸಿದ್ದಾರೆ ಎಂದೂ ಹೇಳಿದರು.

ಈ ವೇಳೆ ಚಂದ್ರು ಎಸಳೆ, ನಂದನ್ ಸಾಗರ, ಆರ್.ಡಿ ಹೆಗಡೆ, ಎನ್.ವಿ.ಹೆಗಡೆ, ಸದಾನಂದ ಭಟ್ಟ, ರವಿ ಹೆಗಡೆ‌, ವಿನಾಯಕ ಹೆಗಡೆ, ರಾಜೇಶ ಶೆಟ್ಟಿ ಇತರರು‌ ಇದ್ದರು. ಇದೇ ವೇಳೆ ಹಿರಿಯ ಚಿಂತಕ ಅನಂತ ವೈದ್ಯ ಅಗಲಿಕೆಗೆ ಸಂತಾಪ ಸೂಚಿಸಿದರು.

ಜವಾಬ್ದಾರಿ‌ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್‌ ಸಿಂಗಾಪುರದಲ್ಲಿ ಕಾಂಗ್ರೆಸ್ ಸರಕಾರ ತೆಗೆಯಲು ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ‌ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದವರು ಇಂತವರು ಯಾರೂ ಎಂದು ಅವರೇ ಹೇಳಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.