Sirsi: ಜೆಸಿಬಿ, ಹಿಟಾಚಿ ಮಾಲಕರ ಕಷ್ಟಕ್ಕೂ ನ್ಯಾಯ ಸಿಗಬೇಕಿದೆ: ಹೆಬ್ಬಾರ್
Team Udayavani, Feb 6, 2024, 3:08 PM IST
ಶಿರಸಿ: ಗ್ರಾಹಕರಿಗೂ, ಜೆಸಿಬಿ, ಹಿಟಾಚಿ ಮಾಲಕರಿಗೂ ನ್ಯಾಯ ಸಿಗಬೇಕಿದೆ. ಸಂಘಟನೆಯ ಮೂಲಕ ವಿಮೆ, ಸಮರ್ಪಕ ನಿರ್ವಹಣೆಗೆ ಜಾಗೃತಿ ಮೂಡಿಸಬೇಕು ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹೇಳಿದರು.
ಫೆ.6ರ ಮಂಗಳವಾರ ನಗರದ ಪೊಲೀಸ್ ಗ್ರೌಂಡ್ ನಲ್ಲಿ ಜೆಸಿಬಿ, ಹಿಟಾಚಿ ಮಾಲಕರ ಕ್ಷೇಮಾಭಿವೃದ್ದಿ ಸಂಘದ ಉದ್ಘಾಟನೆಯಲ್ಲಿ ಪಾಲ್ಗೊಂಡು ಶಿಸ್ತು ಬದ್ಧತೆ ರೂಢಿಸಿಕೊಂಡು ಹೋಗಬೇಕು ಎಂದು ಹೇಳಿದರು.
37 ಲಕ್ಷ ರೂ. ಕೊಟ್ಟು ಜೆಸಿಬಿ ಖರೀದಿಸಿದರೆ ಅದರ ಒಂದು ದಿನದ ಬಡ್ಡಿ ಹಾಗೂ ಇನ್ಸುರೆನ್ಸ್ ಸೇರಿ 1650 ರೂ. ಕಟ್ಟಲೇಬೇಕು. ಅಸಲು ಬೇರೆ ವಾಹನ ನಿಂತರೆ ಬಡ್ಡಿ ಕಟ್ಟುವುದು ತಪ್ಪುವುದಿಲ್ಲ. ನಮ್ಮೊಳಗೇ ಕಾಂಪಿಟೇಶನ್ ಮಾಡಿದರೆ ಸಂಘಟನೆ ಮಾಡುವದು ಕಷ್ಟ ಎಂದರು.
ಸಂಘ ಬಲವರ್ಧನೆ ಆಗಬೇಕು. ಉಪ ಅರಣ್ಯಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಮಾತನಾಡಿ, ದೇಶದ ಅಭಿವೃದ್ದಿ ಆಗಬೇಕಾದರೆ ಯಾಂತ್ರೀಕರಣ ಆಗಬೇಕು. ಮಾನವ ಶಕ್ತಿ ಕಡಿಮೆ ಮಾಡುವ ಜೆಸಿಬಿಗಳ ಅಗತ್ಯತೆ ಇದೆ. ಅರಣ್ಯ ಇಲಾಖೆಯ ಕಾರ್ಯದಲ್ಲೂ ಬಳಸಿಕೊಳ್ಳುತ್ತೇವೆ, ಅಭಿವೃದ್ದಿ ಹಾಗೂ ಪ್ರಕೃತಿ ವಿಕೋಪಕ್ಕೆ ಹಿಟಾಚಿ, ಜೆಸಿಬಿ ಬಳಸಿಕೊಳ್ಳುತ್ತೇವೆ, ಅರಣ್ಯ ಬೆಂಕಿ ತಡೆಗೆ ದಯವಿಟ್ಟು ಸಹಕಾರ ನೀಡಬೇಕು ಎಂದರು.
ಸಾಮಾಜಿಕ ಪ್ರಮುಖ ಎಸ್.ಕೆ. ಭಾಗವತ, ಜೆಸಿಬಿ ಎಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಕುತೂಹಲ ಎಂದರು.
ಉದ್ಯಮಿ ಅಶ್ವಿನ್ ಭೀಮಣ್ಣ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ತಾಲೂಕು ಸಂಘದ ಅಧ್ಯಕ್ಷ ಸಂದೇಶ ಭಟ್ಟ ಆರೆಪ್ಪೋ ಶಿವರಾಮ, ಸಾರಿಗೆ ಅಧಿಕಾರಿ ಶಿವಾನಂದ ಕುಲಕರ್ಣಿ, ಪ್ರವೀಣ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್