ಯೋಗಾಭ್ಯಾಸದಲ್ಲಿರಲಿ ಯಮ ನಿಯಮದ ಪಾಲನೆ
ಸಡಿಲವಾದ ಹತ್ತಿಯ ಬಟ್ಟೆ ಧರಿಸಿರಬೇಕು.
Team Udayavani, Jun 21, 2021, 8:35 AM IST
ಯೋಗದಲ್ಲಿ ಯಮನಿಯಮಗಳ ಪಾಲನೆ ಬಹುಮುಖ್ಯ. ಹಾಗಿದ್ದರೆ ಮಾತ್ರ ಯೋಗಾಭ್ಯಾಸ ಪರಿಪೂರ್ಣವಾಗುವುದು. ಯೋಗಾಭ್ಯಾಸವನ್ನು ಶುದ್ಧ ಮನಸ್ಸಿನಲ್ಲಿ ಯಾವುದೇ ಕಲ್ಮಶಗಳಿಲ್ಲದೆ ಮಾಡಬೇಕು. ದೇಹ ಮತ್ತು ಮನಸ್ಸು ಶುಚಿಯಾಗಿರಬೇಕು.
ಅಭ್ಯಾಸಿಯು ಮಲ-ಮೂತ್ರ ಕೋಶಗಳನ್ನು ಬರಿದುಮಾಡಿಕೊಳ್ಳಬೇಕು.
ಯೋಗ ಅಭ್ಯಾಸಕ್ಕೆ ಬೆಳಗ್ಗೆ ಅಥವಾ ಸಂಜೆ ಉತ್ತಮ ಸಮಯ. ಅದರಲ್ಲೂ ಮುಂಜಾನೆ ಅತ್ಯುತ್ತಮ ಸಮಯವಾಗಿದೆ.
ಸ್ವಚ್ಛವಾದ ಪರಿಸರ, ಗಾಳಿ-ಬೆಳಕು ಇರುವ ಪ್ರಶಾಂತ ಸ್ಥಳದಲ್ಲಿ ಜಮಖಾನ ಹಾಸಿ ಅದರ ಮೇಲೆ ಅಭ್ಯಾಸ ಮಾಡಬೇಕು.
ಸಡಿಲವಾದ ಹತ್ತಿಯ ಬಟ್ಟೆ ಧರಿಸಿರಬೇಕು.
ಯೋಗವನ್ನು ಶಿಸ್ತುಬದ್ಧವಾಗಿ ಮತ್ತು ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡಬೇಕು.
ಎಂಟು ವರ್ಷ ವಯಸ್ಸಿನಿಂದ ಸರಳ ಯೋಗವನ್ನು ಕಲಿಯಲು ಅಭ್ಯಾಸ ಮಾಡಬಹುದು.
ಯೋಗಾಭ್ಯಾಸಕ್ಕೆ ಜಾತಿ, ಮತ, ಲಿಂಗ ಭೇದ ಇಲ್ಲ.
ಆರೋಗ್ಯ ಸಮಸ್ಯೆ ಇದ್ದವರು ಆರಂಭದಲ್ಲಿ ವೈದ್ಯರ ಬಳಿ ಸಮಾಲೋಚಿಸಿ, ಯೋಗ ಶಿಕ್ಷಕರ ಸಲಹೆ ಸೂಚನೆಯೊಂದಿಗೆ ಅಭ್ಯಾಸ ಮಾಡಬೇಕು.
ಗರ್ಭಿಣಿಯರು, ಸ್ತ್ರೀಯರು ಮುಟ್ಟಿನ ಸಮಯದಲ್ಲಿ,ಯೋಗ ಶಿಕ್ಷಕರ ಸಲಹೆ ಸೂಚನೆಯೊಂದಿಗೆ ಅಭ್ಯಾಸ ಮಾಡಬೇಕು.
ಯೋಗ ಅಭ್ಯಾಸ ಮಾಡುವಾಗ ದೇಹವನ್ನು ಬಿಗಿಗೊಳಿಸಬಾರದು. ಸಂಪೂರ್ಣ ಗಮನ ಯೋಗ ಅಭ್ಯಾಸದ ಕಡೆಗೆ ಇರಬೇಕು.
ಯೋಗಾಭ್ಯಾಸ ಮಾಡುವ ಮುಂಚೆ ದೇಹದ ಜಡತ್ವ ಹೋಗಲಾಡಿಸಲು ಕೆಲವು ಸರಳ ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು.
ಯೋಗಾಭ್ಯಾಸದ ಸಮಯದಲ್ಲಿ ಅನಗತ್ಯವಾಗಿ ಉಸಿರನ್ನು ತಡೆಹಿಡಿಯಬಾರದು.
ಆಯಾಸ ಮಾಡಿಕೊಂಡು ಯೋಗಾಭ್ಯಾಸ ಮಾಡುವುದು ಬೇಡ
ಜ್ವರ ಇತ್ಯಾದಿ ಕಾಯಿಲೆಗಳಿದ್ದಾಗ ಯೋಗ ಅಭ್ಯಾಸ ಮಾಡುವುದು ಬೇಡ.
ಯೋಗಾಭ್ಯಾಸದ ಕೊನೆಯಲ್ಲಿ ಶವಾಸನ ಕಡ್ಡಾಯ.
ಯೋಗ ಅಭ್ಯಾಸದ ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ ಮಾಡಬೇಕು, ಕೊನೆಯಲ್ಲಿ ಶಾಂತಿ ಮಂತ್ರವನ್ನು ಹೇಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ