ಮಕ್ಕಳಲ್ಲಿ ಹೆಚ್ಚುತ್ತಿದೆ ಅಭದ್ರತಾ ಭಾವನೆ

ಮನೆಯಲ್ಲಿ ಮಕ್ಕಳು ಕಡಿಮೆಯಿದ್ದರೂ  ಅವರನ್ನು ಸಮಾಜಮುಖಿಯಾಗಿ ಬೆಳೆಸಬೇಕು.

Team Udayavani, Jan 16, 2021, 1:35 PM IST

ಮಕ್ಕಳಲ್ಲಿ ಹೆಚ್ಚುತ್ತಿದೆ ಅಭದ್ರತಾ ಭಾವನೆ

ಒಂದು ಮನೆಯಲ್ಲಿ 10- 15 ಮಕ್ಕಳು ಜತೆಯಾಗಿ ಬೆಳೆದವರು ನಾವು. ನನ್ನದು, ನಿನ್ನದು ಎನ್ನುವ ಬೇಧಭಾವವೇ ಇರಲಿಲ್ಲ. ಆದರೆ ನನ್ನ ಮಗ ಬೇರೆ
ಮಕ್ಕಳೊಂದಿಗೆ ಕೂಡುವುದಿಲ್ಲ, ಆಟಿಕೆಗಳನ್ನು  ಹಂಚಿಕೊಳ್ಳುವುದಿಲ್ಲ, ನಾನು ಬೇರೆ ಮಕ್ಕಳ ಮೇಲೆ ಪ್ರೀತಿ ತೋರಿಸಿದರೆ ತಾನು ಏನೋ ಕಳೆದುಕೊಂಡೆ
ಅನ್ನೋ ರೀತಿ ವರ್ತಿಸುತ್ತಾನೆ ಎಂದು ಗೆಳತಿಯೊಬ್ಬಳು ಕರೆ ಮಾಡಿ ಹೇಳಿದಾಗ ನನ್ನ ಮಗಳತ್ತ ನೋಡಿದೆ.

ಆದರೆ ಅವಳು ಪಕ್ಕದ ಮನೆಯ ಮಗುವಿಗೆ ತನ್ನ ಆಟಿಕೆಗಳನ್ನು ತೋರಿಸಿ ಖುಷಿಯಿಂದ ಆಡುತ್ತಿದ್ದಳು. ಇದು ನನ್ನ ಒಬ್ಬ ಗೆಳತಿಯ ಸಮಸ್ಯೆಯಲ್ಲ.
ಹಲವಾರು ಮನೆಗಳಿಗೆ ಯಾವುದೋ ಕಾರಣ ನಿಮಿತ್ತ ಹೋದಾಗ ಕಂಡುಕೊಂಡ ಸತ್ಯ. ಮಕ್ಕಳನ್ನು ಬೆಳೆಸುವಲ್ಲಿ ನಾವು ಎಲ್ಲೋ ದಾರಿ ತಪ್ಪಿದ್ದೇವೆ. ಅವರ ಬೇಕು ಬೇಡಗಳಿಗೆ ಆದ್ಯತೆ ನೀಡಿ ಮುದ್ದು ಮಾಡಿ ಅವರು ಸಂಪೂರ್ಣವಾಗಿ ನಮ್ಮನ್ನೇ ಅವಲಂಬಿಸುವ ಹಾಗೇ ಮಾಡಿದ್ದೇವೆ ಎಂದರೆ ತಪ್ಪಾಗಲಾರದು.

ಮೊನ್ನೆ ಒಂದು ಮನೆಗೆ ಹೋಗಿದ್ದೆ. ಸಹೋದರ, ಸಹೋದರಿಯ ಮಕ್ಕಳಿಬ್ಬರು ಆಟವಾಡುತ್ತಿದ್ದರು. ಅದರಲ್ಲಿ ಹಿರಿಯವಳು ತಂಗಿಯನ್ನು ತಿರಸ್ಕರಿಸುವುದು, ಅವಳಿಗೆ ಕೊಟ್ಟದ್ದನ್ನು ಕಿತ್ತುಕೊಳ್ಳುವುದು, ಕೊಡದೇ ಹೋದರೆ ರಂಪಾಟ ಮಾಡಿದ್ದನ್ನು ನೋಡಿದೆ. ಇಲ್ಲಿ ನಾವಿಬ್ಬರು ಒಂದೇ ಮನೆಯ ಮಕ್ಕಳು ಎನ್ನುವ ಬದಲು ನಾನು ಈ ಮನೆಯವಳು, ನೀನು ಬೇರೆಯವಳು ಎನ್ನುವ ಯಾರೂ ಯೋಚಿಸಲಾಗದ ಸೂಕ್ಷ್ಮ ವಿಷಯವೊಂದು ನನ್ನ ಗಮನಕ್ಕೆ ಬಂದಿತ್ತು. ಇಂಥ
ಸಣ್ಣಪುಟ್ಟ ತಪ್ಪುಗಳನ್ನು ಬಾಲ್ಯದಲ್ಲೇ ಮಾಡುವಾಗ ನಾವು ತಿದ್ದಿ ತೀಡಬೇಕು. ಇಲ್ಲವಾದರೆ ಮುಂದೆ ಹುಟ್ಟುವಾಗ ಅಣ್ಣತಮ್ಮಂದಿರು, ಬೆಳೆಯುತ್ತ
ದಾಯಾದಿಗಳು ಎನ್ನುವ ಮಾತು ನಮ್ಮ ಮನೆಯಲ್ಲೇ ಸತ್ಯವಾದೀತು.

ಇದನ್ನೂ ಓದಿ:ಕಹಿ ಮೆಂತ್ಯೆಯ ಸವಿ: ಆರೋಗ್ಯಕ್ಕೆ ಬಹು ಉಪಕಾರಿ

ಕುಟುಂಬದ ಪರಿಕಲ್ಪನೆ ಈಗ ಬದಲಾಗಿದೆ. ಸಣ್ಣ ಮನೆ, ಆ ಮನೆಗೆ ಒಂದೋ ಎರಡೋ ಮಕ್ಕಳು. ಅವರ ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸುವ
ಹೆತ್ತವರು. ಹೀಗಾಗಿ ಅವರಿಗೆ ಕುಟುಂಬದ ಮಹತ್ವವೇ ತಿಳಿದಿಲ್ಲ. ಜತೆಗೆ ತಾವು ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವ ಯೋಚನೆ ಕೂಡ ಆ ಮಕ್ಕಳಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲಿ ಮಕ್ಕಳು ಕಡಿಮೆಯಿದ್ದರೂ  ಅವರನ್ನು ಸಮಾಜಮುಖಿಯಾಗಿ ಬೆಳೆಸಬೇಕು. ಅದು ಹೇಗೆಂದರೆ ಇತರ ಮಕ್ಕಳೊಂದಿಗೆ ಬೆರೆಯುವ ಅವಕಾಶ ಅವರಿಗೆ ಮಾಡಿಕೊಡಬೇಕು. ಜತೆಗೆ ಹೆತ್ತವರ ಬಳಿ ಅವರು ಎಷ್ಟು ಸುರಕ್ಷಿತ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.

ಇದನ್ನೂ ಓದಿ:ದಿನಕ್ಕೊಂದು ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು

ಇತ್ತೀಚಿನ ಮಕ್ಕಳಲ್ಲಿ ಅಭದ್ರತಾ ಭಾವನೆ ಹೆಚ್ಚಾಗುತ್ತಿದೆ. ಅದಕ್ಕೆ ಮೂಲ ಕಾರಣ ಪೋಷಕರೇ ಆಗಿರುತ್ತಾರೆ. ಅದಕ್ಕಾಗಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ವಿಷಯಗಳನ್ನು ಮಕ್ಕಳಿಗೆ ಮೂರು ವರ್ಷ ಆದಾಗಿನಿಂದಲೇ ತಿಳಿಸುವ ಪ್ರಯತ್ನ ಮಾಡಬೇಕು. ಹುಟ್ಟಿದಾಗಿನಿಂದಲೇ ಮಕ್ಕಳು ಹೊಸತನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಅದಕ್ಕೆ ಪೂರಕವಾದ ವಾತಾವರಣ ನಾವು ಮನೆಯಲ್ಲೇ ಸೃಷ್ಟಿಸಿಕೊಳ್ಳಬೇಕು. ಅಂದರೆ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು, ಅವರ ನಡವಳಿಕೆಯನ್ನು ಹೇಗೆ ತಿದ್ದುಪಡಿ ಮಾಡಬೇಕು ಎಂಬುದುನನ್ನು ಆರಂಭದಿಂದಲೇ ಪ್ರಯತ್ನಿಸಬೇಕು. ಆಗ ಮಾತ್ರ ಮುಂದೆ ಭವಿಷ್ಯದಲ್ಲಿ ಅವರು ಸಮಾಜದ ಸುಸಂಸ್ಕೃತ ನಾಗರಿಕರಾಗಲು ಸಾಧ್ಯವಿದೆ.

ಇದನ್ನೂ ಓದಿ:ಮಕ್ಕಳೊಂದಿಗೆ ಯೋಗಾಭ್ಯಾಸ ಆರೋಗ್ಯಕ್ಕೆ ಹಲವು ಲಾಭ

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.