ಜೀವನ ಶೈಲಿಯಲ್ಲಿ ಬದಲಾವಣೆ ….ನಗು ಎಂಬ ಮನೆಮದ್ದು

ಮ್ಮಲ್ಲಿ ಹುಮ್ಮಸ್ಸು, ಹೊಸತನ ಹಾಗೂ ನಗು ತಾನಾಗಿಯೇ ಮೂಡುವುದು. 

Team Udayavani, Jul 1, 2021, 2:33 PM IST

ಜೀವನ ಶೈಲಿಯಲ್ಲಿ ಬದಲಾವಣೆ ….ನಗು ಎಂಬ ಮನೆಮದ್ದು

ಸುಂದರ ನಗು ಯಾರ ಮನಸ್ಸನ್ನು ಕೂಡ ಗೆಲ್ಲಬಹುದು ಎಂದು ಎಲ್ಲರು ಬಲ್ಲರು. ಆದರೂ, ಇತ್ತೀಚಿಗೆ ಅದನ್ನು ಮರೆತಿದ್ದೇವೆ. Roy T Bennet ಎಂಬವರು ಹೇಳಿದ್ದಾರೆ, “ನೀವು ಯಾವಾಗ ನಗುವುದನ್ನು ಮರೆಯುತ್ತೀರೋ, ಅಂದು ನೀವು ಜೀವನದ ಜಂಜಾಟಗಳ ನಡುವೆ ದಾರಿ ಕಳೆದುಕೊಳ್ಳುತ್ತೀರಿ. “ ಇದು ಬಹಳ ಸೂಕ್ತ ಹಾಗೂ ನಿಜವಾದ ನುಡಿ. ನಾವು ನಮ್ಮನ್ನು ಕೆಲವೊಂದು ಕಟ್ಟುಪಾಡುಗಳೊಳಗೆ ಕಟ್ಟಿ ಹಾಕಿಕೊಂಡಿದ್ದೇವೆ. ಅದರಲ್ಲೂ, ನಗುವುದನ್ನು ನಾವು ನಮ್ಮ ಜೀವನದಲ್ಲಿ ನಗಣ್ಯಗೊಳಿಸಿದ್ದೇವೆ.

ಇದನ್ನೂ ಓದಿ:ಪುನೀತ್ ಹೊಸ ಚಿತ್ರದ ಟೈಟಲ್ ಲಾಂಚ್..ವಿಭಿನ್ನ ಲುಕ್ ಗೆ ಅಪ್ಪು ಫ್ಯಾನ್ಸ್ ಫಿದಾ

ನಾನಿಂದು, ನಗುವಿನಿಂದ ಆಗುವ ಕೆಲವು ಆರೋಗ್ಯ ಲಾಭಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ :

ನಗು ಎಂಬುದು ಒಂದು ಅಂಟು ರೋಗವಿದ್ದಂತೆ. ನೀವು ಯಾರನ್ನಾದರೂ ನೋಡಿ ಒಂದು ಮುಗುಳ್ನಗೆ ಬೀರಿ ನೋಡಿ, ಅವರು ಅವರೀಗರಿವಿಲ್ಲದೆ ಒಂದು ಮಂದಹಾಸವನ್ನು ಬೀರುತ್ತಾರೆ. ನಮಗರಿವಿಲ್ಲದೆಯೇ, ನಮ್ಮಲ್ಲಿ ಒಂದು ಉಲ್ಲಾಸದ ಚಿಲುಮೆ ಒಡೆಯುತ್ತದೆ. ನಗುವುದರಿಂದ, ಡೋಪಮೀನ್ ಹಾಗೂ ಸೇರಟೋನಿನ್ ಎಂಬ ಎರಡು ನರಪ್ರೇಕ್ಷಕಗಳು ಉತ್ಪತ್ತಿಯಾಗುತ್ತವೆ, ಇದರಿಂದ ನಮ್ಮ ಮನಸ್ಸು ಹಗುರವಾಗಿ, ಹೊಸತನ ಹಾಗೂ ಉಲ್ಲಾಸ ಭರಿತವಾಗುತ್ತದೆ.

*ಸಕರಾತ್ಮ ಮನೋಭಾವ ತಾನಾಗಿಯೇ ನಮ್ಮನಾವರಿಸಿಕೊಳ್ಳುತ್ತದೆ. ಇದರಿಂದ ನಾವು ಮಾಡುವ ಕೆಲಸದಲ್ಲಿ ಉತ್ಪಾದಕತೆ ಹೆಚ್ಚಾಗುತ್ತದೆ.
ಮನಸ್ಸು ಉಲ್ಲಾಸಭರಿತವಾದ ಕಾರಣ, ನಮ್ಮ ರಕ್ತದೊತ್ತಡ ಕಮ್ಮಿಯಾಗುವುದು.

*ಸಂಬಂಧಗಳು ಗಟ್ಟಿಯಾಗುವುದು

*ನಮ್ಮ ಮುಖದಲ್ಲಿ ಚೈತನ್ಯ ಮಿಂಚಿ, ನಮ್ಮ ವಯಸ್ಸು ಕಡಿಮೆಯಾದಂತೆ ಕಾಣುವುದು.

*ಎಂಡೊರಫಿನ್ಸ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವ ಕಾರಣ, ಸ್ವಲ್ಪ ಮಟ್ಟಿಗೆ ದೈಹಿಕ ನೋವು ಕಮ್ಮಿಯಾಗುವುದು.

ನಗು ಎಂಬುದು ಇತ್ತೀಚೆಗೆ ಬಹಳ ದುರ್ಲಭ. ಜನ ನಗುವುದನ್ನು ಕಡಿಮೆ ಮಾಡಲು ಕೆಲವು ಕಾರಣಗಳು ಏನೆಂದರೆ :

*ಜೀವನಶೈಲಿಯಲ್ಲಿ ಬದಲಾವಣೆ : ಕಡಿಮೆ ನಗುವುದರಿಂದ ನಾವು ಪ್ರಭುದ್ಧರಾಗಿ ಕಾಣುತ್ತೇವೆ ಎಂಬ ನಂಬಿಕೆ

*ಖಿನ್ನತೆ
*ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾ ಅತಿಯಾದ ಬಳಕೆ. ಇದರಿಂದ ನಾವು ಒಂದು ಭ್ರಮಾಲೋಕದಲ್ಲಿ ಇದ್ದು, ಸುತ್ತ ಮುತ್ತ ಇರುವವರೊಂದಿಗೆ ನಾವು ಬೆರೆಯುವುದಿಲ್ಲ.

*ಹಲ್ಲು ಹಾಗೂ ಬಾಯಿಯ ಸ್ವಚ್ಛತೆ ಕಮ್ಮಿ ಇರುವುದು.

ನಾವು ಏನು ಮಾಡಬಹುದು?

*ದಿನದ ಆರಂಭದಲ್ಲಿ, ನಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ನೆನೆಪಿಸಿಕೊಂಡು ಪ್ರಾರಂಭಿಸುವುದರಿಂದ, ನಮ್ಮಲ್ಲಿ ಹುಮ್ಮಸ್ಸು, ಹೊಸತನ ಹಾಗೂ ನಗು ತಾನಾಗಿಯೇ ಮೂಡುವುದು.

*ರಾತ್ರಿ ಮಲಗುವ ಮೊದಲು, ಇಡೀ ದಿನದಲ್ಲಿ ನಡೆದ ಖುಷಿ ಹಾಗೂ ಧನಾತ್ಮಕ ವಿಚಾರಗಳನ್ನು ಬರೆದಿಟ್ಟು, ಅದನ್ನು ಓದುವುದರಿಂದ ನಮ್ಮಲ್ಲಿ ಅಭಿಲಾಷೆಗಳು ಹಾಗೂ ಜೀವನದಲ್ಲಿ, ನಮ್ಮ ಕೆಲಸಗಳಲ್ಲಿ ನಮ್ಮ ಆಸಕ್ತಿ ಹೆಚ್ಚುವುದು.

*ನಮ್ಮೊಂದಿಗೆ ಕೆಲಸ ಮಾಡುವವರು ಹಾಗೂ ನಮ್ಮ ಆಸುಪಾಸಿನಲ್ಲಿರುವವರೊಂದಿಗೆ ಆತ್ಮೀಯತೆಯಿಂದ ಇರುವುದು ಹಾಗೂ ವೈಮನಸ್ಸು ಇದ್ದಲ್ಲಿ ಮಾತಾಡಿ ಬಗೆಹರಿಸಿಕೊಳ್ಳುವುದು.

ನಮ್ಮ ಜೀವನದಲ್ಲಿ ಸಣ್ಣ ಪುಟ್ಟ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದರಿಂದ ನಮ್ಮಲ್ಲಿ ನಗು ಮೂಡಿ, ಚೈತನ್ಯ ಹಾಗೂ ನೆಮ್ಮದಿ ಬರುವುದಾದರೆ, ನಾವದನ್ನು ಸ್ವಾಗತಿಸಿ, ಜೀವನವನ್ನು ಆಸ್ವಾಧಿಸುವುದೇ ಒಳಿತು.

ಡಾ. ಭಾವನಾ. ಎಂ,
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆ,
ಸಹಾಯಕ ಉಪನ್ಯಾಸಕಿ – SVYASA,

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.