Sciatica Pain: ಸಿಯಾಟಿಕಾ ನೋವು ಹಾಗೆಂದರೇನು? ಪರಿಹಾರವೇನು?


Team Udayavani, Feb 25, 2024, 11:42 AM IST

4-sciatica-pain

ಸಿಯಾಟಿಕ್‌ ನರವು ನಮ್ಮ ದೇಹದ ಮೇಲ್ಮೈಯಲ್ಲಿರುವ ಅತ್ಯಂತ ದೊಡ್ಡ ನರ. ಸ್ನಾಯುಗಳ ಚಲನೆ ಮತ್ತು ಸಂವೇದನೆಗಳಿಗಾಗಿ ಸಂಕೇತಗಳನ್ನು ಕಾಲುಗಳ ಕೆಳಭಾಗಕ್ಕೆ ರವಾನಿಸುವ ಪ್ರಾಮುಖ್ಯ ನರಜಾಲ ಇದು. ಬೆನ್ನುಹುರಿಯ ವಿವಿಧ ಸ್ತರಗಳಲ್ಲಿ ಆರಂಭವಾಗಿ, ತೊಡೆಯ ಭಾಗದಲ್ಲಿ ಕಾಂಡ ಹಾಗೂ ತೊಡೆ ಮತ್ತು ಕಾಲುಗಳಲ್ಲಿ ಶಾಖೆಗಳನ್ನು ಹೊಂದಿರುವ ತಲೆಕೆಳಗಾಗಿರುವ ಮರ-ಬೇರುಗಳಂತೆ ಇದರ ರಚನೆ ಇದೆ.

“ಸಿಯಾಟಿಕಾ’ ಎಂಬುದು ಸಿಯಾಟಿಕ್‌ ನರದ ಜಾಲದಲ್ಲಿ ಕಾಣಿಸಿಕೊಳ್ಳುವ ಯಾವುದೇ ನೋವನ್ನು ವಿವರಿಸಲು ಉಪಯೋಗಿಸುವ ಸ್ಥೂಲ ಪದವಾಗಿದೆ. ಈ ನರ ಹರಡಿರುವ ಯಾವುದೇ ಕಡೆ ಅದಕ್ಕೆ ತೊಂದರೆ ಉಂಟಾದರೆ “ವಿದ್ಯುತ್‌ ಶಾಕ್‌’ನಂತಹ, “ಚುಚ್ಚಿದಂತಹ’, “ಸೆಳೆತದಂತಹ’ ಅಥವಾ “ಕಚಗುಳಿ ಇರಿಸಿದಂತಹ’ ಅನುಭವ ಉಂಟಾಗಬಹುದಾಗಿದ್ದು, ಇದು ಕೆಮ್ಮು, ದೇಹ ಬಾಗಿಸುವುದು, ತಿರುಚುವುದು ಅಥವಾ ಶ್ರಮದಂತಹ ಕ್ರಿಯೆಗಳಿಂದ ಉಲ್ಬಣಿಸಬಹುದಾಗಿದೆ.

ಶೇ. 40ರಷ್ಟು ಮಂದಿ ವಯಸ್ಕರಲ್ಲಿ ಜೀವಮಾನದಲ್ಲಿ ಒಮ್ಮೆಯಾದರೂ ಈ ತೊಂದರೆ ಉಂಟಾಗುವುದು ಅತೀ ಸಾಮಾನ್ಯವಾಗಿದ್ದರೂ ಇದರ ಬಗ್ಗೆ ಬಹುತೇಕವಾಗಿ ತಪ್ಪು ಮಾಹಿತಿ ಇದೆ. ಡಿಸ್ಕ್ ತಪ್ಪಿಹೋಗಿರುವುದು ಇಂತಹ ಒಂದು ತಪ್ಪು ಮಾಹಿತಿಯಾಗಿದ್ದು, ಇದಕ್ಕೆ ನೈಜ ಕಾರಣ ಸಿಯಾಟಿಕಾ ಆಗಿರುತ್ತದೆ.

ಸಿಯಾಟಿಕ್‌ ನರವು ತನ್ನ ಜಾಲದಲ್ಲಿ ನಿರ್ದಿಷ್ಟ ರಂಧ್ರಗಳು, ಕಾಲುವೆಗಳು ಮತ್ತು ಭಾಗಗಳ ಮೂಲಕ ಹಾದುಹೋಗುವುದರಿಂದ ಅದರ ಬೇರುಭಾಗದಲ್ಲಿ ಒತ್ತಲ್ಪಡುವುದು, ನಶಿಸುವುದು, ಮೂಳೆ ಮುರಿತ, ಜೋಡಣೆ ತಪ್ಪುವುದು, ಬೆಳವಣಿಗೆಗಳು ಮತ್ತು ಹಿಚುಕಲ್ಪಡುವುದರಿಂದ ಸಿಯಾಟಿಕಾ ಉಂಟಾಗಬಹುದು.

ಯಾವುದು ಸಿಯಾಟಿಕಾ ಅಲ್ಲ?

ಸ್ನಾಯುಗಳು ಮತ್ತು ಬೆನ್ನಿನ ಸಂಧಿಗಳಿಂದ ಉಂಟಾಗುವ ಅನೇಕ ನೋವುಗಳು ಸಿಯಾಟಿಕಾದಂತೆಯೇ ಭಾಸವಾಗುತ್ತವೆ. ಉದಾಹರಣೆಗೆ, ಫೇಸೆಟ್‌ ಮತ್ತು ಸಾಕ್ರೊಲಿಕ್‌ ಸಂಧಿಗಳು, ಇವುಗಳಲ್ಲಿ ಪ್ರತಿಯೊಂದರಲ್ಲಿಯೂ ಬೆನ್ನಿನಿಂದ ಆರಂಭವಾಗಿ ತೊಡೆಯ ತನಕ ನೋವು ಹರಡಬಹುದು. ಆದರೆ ಸಿಯಾಟಿಕಾ ಎಂಬುದು ನಿರ್ದಿಷ್ಟವಾಗಿ ಕಾಲಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ನೋವಾಗಿದ್ದು, ಬೆನ್ನಿಗೆ ಹೆಚ್ಚು ಸಂಬಂಧಪಟ್ಟಿಲ್ಲ.

ಅಪಾಯ ಅಂಶಗಳೇನು?

ವಯಸ್ಸು, ಬೊಜ್ಜು ಮತ್ತು ಇವುಗಳ ಜತೆಗೆ ದೇಹದ ಮೂಲ ಸಾಮರ್ಥ್ಯ ದುರ್ಬಲವಾಗಿರುವುದು, ಕಳಪೆ ದೇಹಭಂಗಿಗಳು, ಅಸಮರ್ಪಕ ಭಾರ ಎತ್ತುವ ವಿಧಾನಗಳು, ಕೆಲವು ನಿರ್ದಿಷ್ಟ ವೃತ್ತಿಗಳು ಮತ್ತು ಗರ್ಭ ಧಾರಣೆ ಸಿಯಾಟಿಕಾ ನೋವು ಉಂಟಾಗುವುದಕ್ಕೆ ಪೂರಕವಾಗಬಹುದು.

ಸಿಯಾಟಿಕಾವನ್ನು ತಡೆಯುವುದು ಹೇಗೆ?

ದೇಹಭಂಗಿ, ಭಾರ ಎತ್ತುವ ವಿಧಾನಗಳು ಸರಿಯಿಲ್ಲದಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು, ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಬಹಳ ಮುಖ್ಯವಾಗಿ ಪ್ಲಾಂಕ್ಸ್‌, ಸೂಪರ್‌ಮ್ಯಾನ್‌ನಂತಹ ವ್ಯಾಯಾಮ ತಂತ್ರಗಳು ಅಥವಾ ಯೋಗದಿಂದ ದೇಹಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು.

ಗರ್ಭಧಾರಣೆಯ ಅವಧಿಯಲ್ಲಿ ದೇಹದ ಗುರುತ್ವಾಕರ್ಷಣೆಯ ಕೇಂದ್ರ ಬದಲಾಗುವುದು, ಮೂಲ ಸ್ನಾಯುಗಳು ವಿಸ್ತರಿಸಿ ದುರ್ಬಲವಾಗುವುದು, ಲಿಗಮೆಂಟಸ್‌ ಆಧಾರ ಮತ್ತು ಬೆನ್ನುಮೂಳೆಯ ಮೇಲೆ ಭಾರ ಹೆಚ್ಚುವುದರಿಂದ ಸಿಯಾಟಿಕಾ ಉಂಟಾಗುವುದಕ್ಕೆ ಪೂರಕವಾಗಬಹುದು.

ಗರ್ಭಧಾರಣೆಗೆ ಮುನ್ನ ಮತ್ತು ಗರ್ಭ ಧರಿಸಿದ ಆರಂಭಿಕ ಅವಧಿಯಲ್ಲಿ ಸರಿಯಾದ ದೇಹ ಸದೃಢತೆಯನ್ನು ಕಾಪಾಡಿಕೊಳ್ಳುವುದು, ಸರಿಯಾದ ದೇಹತೂಕ ನಿರ್ವಹಣೆ ಮತ್ತು ಗರ್ಭಧಾರಣೆಯ ಅವಧಿಯಲ್ಲಿ ಮಾಡಬಹುದಾದ ಯೋಗಾಸನಗಳ ಅಭ್ಯಾಸ ಈ ಅವಧಿಯಲ್ಲಿ ಸಿಯಾಟಿಕಾ ತಡೆಗಟ್ಟಲು ಉತ್ತಮ ಮಾರ್ಗಗಳು.

ಯಾವಾಗ ಎಚ್ಚರ ವಹಿಸಬೇಕು (ಅಪಾಯ ಸ್ಥಿತಿ)

ಸಿಯಾಟಿಕಾ ನೋವು ಸಹಿಸಲು ಅಸಾಧ್ಯವಾಗಿದ್ದರೆ, ಅಪಘಾತವೊಂದರ ಬಳಿಕ ಕಡಿಮೆಯಾಗುವುದರ ಬದಲಾಗಿ ಹೆಚ್ಚುತ್ತ ತೀವ್ರಗೊಳ್ಳುತ್ತಿದ್ದರೆ, ನೋವಿನ ಜತೆಗೆ ತೂಕ ನಷ್ಟವೂ ಸೇರಿಕೊಂಡಿದ್ದರೆ, ಜ್ವರ ಅಥವಾ ಕೆಳಕಾಲುಗಳಲ್ಲಿ ನಿಶ್ಶಕ್ತಿ ಕಂಡುಬಂದರೆ, ಜೋಮು ಹಿಡಿಯುವುದು ಅಥವಾ ಮಲ ವಿಸರ್ಜನೆ/ ಮೂತ್ರ ವಿಸರ್ಜನೆಯ ನಿಯಂತ್ರಣ ಸಾಮರ್ಥ್ಯದಲ್ಲಿ ವ್ಯತ್ಯಾಸಗಳು ಉಂಟಾಗಿದ್ದರೆ, ತತ್‌ ಕ್ಷಣ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಇದರಿಂದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ ಕಾಲಿನ ಕೆಳಭಾಗ ಮತ್ತು/ ಅಥವಾ ಜೀರ್ಣಾಂಗ/ ಮೂತ್ರಕೋಶ ಸಂಬಂಧಿ ಸರಿಪಡಿಸಲಾಗದ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ನೋವನ್ನು ಬಳಿಕ ನಿರ್ವಹಿಸಬಹುದಾಗಿದ್ದರೂ ನರಶಾಸ್ತ್ರೀಯ ವೈಕಲ್ಯಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿದೆ. ಯಾವಾಗ ಎಚ್ಚರ ವಹಿಸಬೇಕು (ಅಪಾಯ ಸ್ಥಿತಿ) ಸಿಯಾಟಿಕಾ ನೋವು ಸಹಿಸಲು ಅಸಾಧ್ಯವಾಗಿದ್ದರೆ, ಅಪಘಾತವೊಂದರ ಬಳಿಕ ಕಡಿಮೆಯಾಗುವುದರ ಬದಲಾಗಿ ಹೆಚ್ಚುತ್ತ ತೀವ್ರಗೊಳ್ಳುತ್ತಿದ್ದರೆ, ನೋವಿನ ಜತೆಗೆ ತೂಕ ನಷ್ಟವೂ ಸೇರಿಕೊಂಡಿದ್ದರೆ, ಜ್ವರ ಅಥವಾ ಕೆಳಕಾಲುಗಳಲ್ಲಿ ನಿಶ್ಶಕ್ತಿ ಕಂಡುಬಂದರೆ, ಜೋಮು ಹಿಡಿಯುವುದು ಅಥವಾ ಮಲ ವಿಸರ್ಜನೆ/ ಮೂತ್ರ ವಿಸರ್ಜನೆಯ ನಿಯಂತ್ರಣ ಸಾಮರ್ಥ್ಯದಲ್ಲಿ ವ್ಯತ್ಯಾಸಗಳು ಉಂಟಾಗಿದ್ದರೆ, ತತ್‌ಕ್ಷಣ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಇದರಿಂದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ ಕಾಲಿನ ಕೆಳಭಾಗ ಮತ್ತು/ ಅಥವಾ ಜೀರ್ಣಾಂಗ/ ಮೂತ್ರಕೋಶ ಸಂಬಂಧಿ ಸರಿಪಡಿಸಲಾಗದ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ನೋವನ್ನು ಬಳಿಕ ನಿರ್ವಹಿಸಬಹುದಾಗಿದ್ದರೂ ನರಶಾಸ್ತ್ರೀಯ ವೈಕಲ್ಯಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿದೆ.

ಪರೀಕ್ಷೆ ಹೇಗೆ?

ಅನಾರೋಗ್ಯದ ಹಿನ್ನೆಲೆ, ಮಾಹಿತಿಯನ್ನು ವಿವರವಾಗಿ ಕಲೆಹಾಕುವುದು ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ತಪಾಸಣೆ ಮಾಡಲಾಗುತ್ತದೆ. ಎಕ್ಸ್‌ರೇಗಳು, ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ರೋಗಪತ್ತೆಗೆ ಸಹಕರಿಸುತ್ತವೆ. ಆದರೆ ಇವು ಸ್ಥಿರ ಚಿತ್ರಣ ತಂತ್ರಜ್ಞಾನಗಳಾದ ಕಾರಣ ಭಂಗಿ ಸಂಬಂಧಿಯಾದ ಮೌಲ್ಯಾತ್ಮಕ ಮತ್ತು ಪ್ರಮಾಣಾತ್ಮಕ ವಿವರಗಳನ್ನು ಒದಗಿಸಲು ವಿಫ‌ಲವಾಗುತ್ತವೆ. ವ್ಯಕ್ತಿಯ “ನೋವು ಸೃಷ್ಟಿಯ ಮೂಲ’ ಮತ್ತು ಇತರ ಸಂಭಾವ್ಯ ಕಾರಣಗಳನ್ನು ಪ್ರತ್ಯೇಕಿಸಿ ಗುರುತಿಸುವ ಕಾರ್ಯವನ್ನು ಪೈನ್‌ ಮೆಡಿಸಿನ್‌ ಸ್ಪೆಶಲಿಸ್ಟ್‌ ಮತ್ತು ಆರ್ಥೊ -ಸ್ಪೈನ್‌ ಸ್ಪೆಶಲಿಸ್ಟ್‌ಗಳು ತಮ್ಮ ನೈಪುಣ್ಯದಿಂದ ಮಾಡುತ್ತಾರೆ.

ಲಭ್ಯವಿರುವ ಚಿಕಿತ್ಸೆಗಳೇನು?

ಬಹುತೇಕ ಪ್ರಕರಣಗಳಲ್ಲಿ ನೋವು ಒಂದೆರಡು ದಿನಗಳ ಸಂಪೂರ್ಣ ವಿಶ್ರಾಂತಿ, ಬಾಯಿಯ ಮೂಲಕ ಸೇವಿಸುವ ಔಷಧಗಳು, ಫಿಸಿಯೊಥೆರಪಿ/ ಚಿರೊಪ್ರಾಕ್ಟಿಕ್‌ ಥೆರಪಿ, ಆ್ಯಕ್ಯುಪಂಕ್ಚರ್‌ ಮತ್ತು ಶಾಖ/ಶೈತ್ಯೋಪಚಾರಗಳ ಜತೆಗೆ ಸಾಂಪ್ರದಾಯಿಕ ಆರೈಕೆಯಿಂದ ಉಪಶಮನವಾಗುತ್ತದೆ.

ಸತತವಾಗಿ ಇರುವ, ಕಡಿಮೆಯಾಗದ ಅಥವಾ ತೀವ್ರ ಸಿಯಾಟಿಕಾ ಅಥವಾ ಅದರಂತಹ ಇತರ ನೋವುಗಳಿಗೆ ಚಿಕಿತ್ಸೆಯನ್ನು ನಿರ್ದಿಷ್ಟ ಪಡಿಸುವುದು ಮತ್ತು ಅಲ್ಟ್ರಾಸೌಂಡ್‌/ಎಕ್ಸ್‌ ರೇ ಗೈಡೆಡ್‌ ಇಂಜೆಕ್ಷನ್‌ಗಳು ಲಭ್ಯವಿವೆ. ಇವುಗಳ ಮೂಲಕ “ಪೈನ್‌ ಕ್ಲಿನಿಕ್‌’ಗಳಲ್ಲಿ ಔಷಧಗಳನ್ನು ಸೂಕ್ಷ್ಮ ಸೂಜಿಗಳಿಂದ ಅತ್ಯಂತ ಕಡಿಮೆ ಪ್ರಮಾಣದ ಗಾಯ ಮಾಡಿ ನೋವು ಉಂಟಾಗುವ ಸ್ಥಳಕ್ಕೇ ಔಷಧ ಒದಗಿಸಲಾಗುತ್ತದೆ.

ಕೆಲವು ಪ್ರಕರಣಗಳಲ್ಲಿ ಅದರಲ್ಲೂ “ಎಚ್ಚರಿಕೆಯ ಕರೆಘಂಟೆ’ ಬಾರಿಸುವಂತಹ ಪ್ರಕರಣಗಳಲ್ಲಿ ಆರ್ಥೊ-ಸ್ಪೈನ್‌ ಸ್ಪೆಶಲಿಸ್ಟ್‌ಗಳು ಅಥವಾ ನ್ಯೂರೊಸರ್ಜನ್‌ಗಳು ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾಗುತ್ತದೆ. ಈ ಶಸ್ತ್ರಚಿಕಿತ್ಸೆಗಳಲ್ಲಿ ಸಿಯಾಟಿಕ್‌ ನರದ ಮೇಲೆ ಬೀಳುತ್ತಿರುವ ಬಾಹ್ಯ ಒತ್ತಡವನ್ನು ನಿವಾರಿಸುವ ಅಥವಾ ನರ ಹಾದುಹೋಗುವ ಸ್ಥಳಗಳನ್ನು ಅಗಲಗೊಳಿಸುವ ಕಾರ್ಯ ಮಾಡಲಾಗುತ್ತದೆ.

ಸಿಯಾಟಿಕಾ ನೋವು ಕೆಲವೊಮ್ಮೆ ತೀವ್ರವಾಗಿ ತೊಂದರೆ ಕೊಡುವುದಿದೆ, ಆದರೆ ಇದು ಮಾರಣಾಂತಿಕವಲ್ಲ. ಬಹುತೇಕ ಪ್ರಕರಣಗಳಲ್ಲಿ ಸುಲಭ ತಂತ್ರಗಳ ಮೂಲಕ ಇದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ.

ಆದರೆ ಸಂಕೀರ್ಣ ಸಮಸ್ಯೆಗಳನ್ನು ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಮತ್ತು ಉತ್ತಮ ಗುಣಮಟ್ಟದ ಜೀವನ ಮುನ್ನಡೆಸಲು ನೈಜ ಸಿಯಾಟಿಕಾದ ಗುಣಲಕ್ಷಣಗಳು, ಲಭ್ಯ ಚಿಕಿತ್ಸೆಯ ಆಯ್ಕೆಗಳು ಮತ್ತು ಎಚ್ಚರಿಕೆಯ ಕರೆಘಂಟೆಗಳ ಬಗ್ಗೆ ತಿಳಿದಿರುವುದು ಪ್ರಾಮುಖ್ಯವಾಗಿದೆ. ಕೊನೆಯದಾಗಿ, ಕಾಯಿಲೆ ಉಂಟಾದ ಬಳಿಕ ಗುಣಪಡಿಸುವುದಕ್ಕಿಂತ ಅದು ಬಾರದಂತೆ ತಡೆಗಟ್ಟುವುದೇ ಸೂಕ್ತವಾಗಿದೆ.

-ಡಾ| ಗೌರವ್‌ ಗೊಮೆಜ್‌,

ಕನ್ಸಲ್ಟಂಟ್‌ ಪೈನ್‌ ಮೆಡಿಸಿನ್‌ ಮತ್ತು ನ್ಯೂರೋರಿಹ್ಯಾಬಿಲಿಟೇಶನ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಥೊìಪೆಡಿಕ್‌ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.