ಪ್ಯಾಶನ್ ಫ್ರೂಟ್ : ಏನಿದು ಹೊಸ ಬಗೆಯ ಹಣ್ಣು?
ಹೆಸರಿಗೆ ತಕ್ಕಂತೆ ನೋಡಲು ಆಕರ್ಷಕ • ಹುಳಿ ರುಚಿ- ಸಿಹಿ ಗುಣ
ಶ್ರೀರಾಜ್ ವಕ್ವಾಡಿ, Jun 13, 2021, 7:46 PM IST
ನಮ್ಮ ಪರಿಸರ ದಲ್ಲಿ ಅದೆಷ್ಟೋ ಬಗೆಯ ಹಣ್ಣುಗಳು ಇವೆ. ಆದರೆ ಬಹುತೇಕ ಹಣ್ಣುಗಳ ಉಪಯೋಗ ಮಾತ್ರ ನಮಗೆ ತಿಳಿದಿಲ್ಲ.ನಿಸರ್ಗದತ್ತವಾದ ಇಂತಹ ಹಣ್ಣುಗಳು ಆರೋಗ್ಯಕ್ಕೆ ಉತ್ತಮ. ಇಂತಹ ಹಣ್ಣುಗಳಲ್ಲಿ ಪ್ಯಾಶನ್ ಫ್ರೂಟ್ ಸಹ ಒಂದು. ಇದನ್ನು ಶರಬತ್ ಕಾಯಿ ಎಂದು ಕೂಡ ಕರೆಯಲಾಗುತ್ತದೆ.
ಇದು ಗಸಗಸೆ ರೀತಿಯ ಬೀಜಗಳನ್ನು ಹೊಂದಿದ್ದು, ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿಯನ್ನು ಹೊಂದಿದೆ. ಕಡು ಕೆಂಪು ಹಾಗೂ ಹಳದಿ ಹೀಗೆ ಎರಡು ವಿಧಗಳಿವೆ.
ಇದನ್ನೂ ಓದಿ : ಬೆಳಕು, ಕತ್ತಲೆಗಳ ಘರ್ಷಣೆಯಿಂದ ಹೊರಬಂದ ಹಾಡು ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..
ಈ ಹಣ್ಣು ಹುಳಿ ರುಚಿಯನ್ನು ಹೊಂದಿದ್ದರು, ಆರೋಗ್ಯ ವಿಚಾರದಲ್ಲಿ ಸಿಹಿ ಗುಣಗಳನ್ನು ಹೊಂದಿದೆ . ಇದನ್ನು ಬೆಳೆಯಲು ಉಷ್ಣ ವಲಯ ಅತ್ಯುತ್ತಮ. ಬಳ್ಳಿ ಆಗಿರುವುದರಿಂದ ಯಾವುದಾದರೂ ಮರದ ಮೇಲೂ ಬೆಳೆಯಲು ಬಿಡಬಹುದು. ಬಳ್ಳಿ ನೆಟ್ಟು, ಒಂದು ವರ್ಷದಲ್ಲಿ ಹಣ್ಣುಗಳನ್ನು ಕೊಯ್ಯಲ ಸಾಧ್ಯ. ಇದು ಉಷ್ಣ ವಲಯ ದಲ್ಲಿ ಬೆಳೆಯಲು ಅತಿ ಸೂಕ್ತ.
ಆರೋಗ್ಯ ಪ್ರಯೋಜನಗಳು :
ಪ್ಯಾಶನ್ ಫ್ರೂಟ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕೆರೋಟಿನ್, ಪೊಟಾಷಿಯಮ್, ಫೈಬರ್ ಹಾಗೂ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿ ಇದ್ದು, ರಕ್ತ ಕಣಗಳನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ.ಡಯಾಬಿಟೀಸ್ ಹೊಂದಿರುವವರು ಇದನ್ನು ಸೇವಿಸಿದರೆ ಇನ್ ಸುಲಿನ್ ಪ್ರಮಾಣ ಕಡಿಮೆ ಮಾಡಲು ಸಹಕಾರಿ.
ಡೆಂಗಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಪ್ಲೇಟ್ ಲೆಟ್ ಹೆಚ್ಚಿಸಲು ಅತ್ಯಂತ ಸರಳ ಮನೆ ಮದ್ದು ಇದು. ಇನ್ನು, ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೇ ಫೈಬರ್ ಅಂಶ ಹೃದಯದ ಆರೋಗ್ಯ ಕಾಪಾಡಲು ಉಪಕಾರಿ.
ಹುಳಿ ಸಿಹಿಯಾದ ಈ ಹಣ್ಣಿನ ಜ್ಯೂಸ್ ಒಮ್ಮೆ ಸವಿದವರು ಮತ್ತೆ ಮತ್ತೆ ಸವಿಯಲು ಬಯಸದೇ ಇರಲಾರರು ! ಈ ಹಣ್ಣಿ ಜ್ಯೂಸ್ ಮಾಡಲು ಸಹ ಅತಿ ಸುಲಭ. ಪ್ಯಾಶನ್ ಫ್ರೂಟ್ ಬೀಜಗಳನ್ನು ತೆಗೆದು ನೀರು ಹಾಗೂ ಸಕ್ಕರೆ ಬೆರೆಸಿ ಕುಡಿದರೆ ದೇಹಕ್ಕೂ ಮನಸ್ಸಿಗೆ ತಂಪು. ಹುಳಿ ಇಷ್ಟ ಪಡೆವವರು ಹೀಗೂ ತಿನ್ನಬಹುದು . ವಿದೇಶಗಳಲ್ಲಿ ಕೇಕ್ ಹಾಗೂ ಜಾಮ್ ರೂಪದಲ್ಲಿ ಇದು ಲಭ್ಯ.
ತೇಜಸ್ವಿನಿ ಆರ್ ಕೆ
ಎಸ್ ಡಿ ಎಂ ಕಾಲೇಜು, ಉಜಿರೆ.
ಇದನ್ನೂ ಓದಿ : ತೊರೆದು ಜೀವಿಸಬಹುದೇ ಹರಿ ನಿನ್ನ… ಅಶ್ವಿನಿ ಕೊಂಡದಕುಳಿ ಧ್ವನಿಯಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ