ಕಾಂಗ್ರೆಸ್ನ ಮಧ್ವರಾಜ್ಗೆ ಜೆಡಿಎಸ್ ಬಿ ಫಾರಂ
Team Udayavani, Mar 22, 2019, 12:30 AM IST
ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜತೆ ಗುದ್ದಾಡಿ ಎಂಟು ಸೀಟು ಪಡೆದಿರುವ ಜೆಡಿಎಸ್, ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಟ ಮುಂದು ವರಿಸಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಬಿ ಫಾರಂ ನೀಡಲಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಚಿವ ಕೃಷ್ಣ ಬೈರೇಗೌಡರಿಗೆ ಆಹ್ವಾನ ನೀಡಲಾಗಿದೆ. ಖುದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೃಷ್ಣ ಬೈರೇಗೌಡರ ನಿವಾಸಕ್ಕೆ ತೆರಳಿ ಈ ಕುರಿತು ಚರ್ಚೆ ನಡೆಸಿದರು. ಆದರೆ, ಕೃಷ್ಣ ಬೈರೇಗೌಡರು ಒಪ್ಪಿಲ್ಲ. ಬದಲಿಗೆ ಬೆಂಗಳೂರು ಉತ್ತರದಿಂದ ನೀವೇ ಸ್ಪರ್ಧೆ ಮಾಡಿ ಎಂದು ದೇವೇಗೌಡರಿಗೆ ಮನವಿ ಮಾಡಿದರು ಎನ್ನಲಾಗಿದೆ.
ಮಧ್ವರಾಜ್ಗೆ ಬಿ ಫಾರಂ
ಬುಧವಾರ ದೇವೇಗೌಡರ ಜತೆ ಸಮಾ ಲೋಚನೆ ನಡೆಸಿದ್ದ ಪ್ರಮೋದ್ ಮಧ್ವರಾಜ್, ಗುರುವಾರ ಮತ್ತೆ ಗೌಡರ ನಿವಾಸಕ್ಕೆ ಆಗಮಿಸಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜತೆಯೂ ಚರ್ಚಿಸಿದರು. ನಂತರ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಒಪ್ಪಿ ಬಿ ಫಾರಂ ಪಡೆದರು.